<p><strong>ಮಂಗಳೂರು:</strong> ತುಳುಕೂಟ ಕುವೈಟ್ನ 24ನೇ ವಾರ್ಷಿಕ ಮಹಾಸಭೆಯು ಇಂಡಿಯನ್ ಸ್ಕೂಲ್ ಆಫ್ ಎಕ್ಸಲೆನ್ಸ್ ಸಭಾಂಗಣದಲ್ಲಿ ಜರುಗಿತು.</p>.<p>ತುಳುಕೂಟ ಕುವೈಟ್ನ ಅಧ್ಯಕ್ಷ ಅಬ್ದುಲ್ ರಜಾಕ್ ಅಧ್ಯಕ್ಷತೆ ವಹಿಸಿದ್ದರು.</p>.<p>ಪ್ರಧಾನ ಕಾರ್ಯದರ್ಶಿ ಹರೀಶ್ ಭಂಡಾರಿ ವಾರ್ಷಿಕ ವರದಿ ಮತ್ತು ಕೋಶಾಧಿಕಾರಿ ರೋಷನ್ ಕ್ವಾರ್ಡಸ್ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. 2023ನೇ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿದ 10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ಬಹುಮಾನ ನೀಡಲಾಯಿತು.</p>.<p>2024ನೇ ವರ್ಷದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಗೊಂಡ ಸದಸ್ಯರ ಹೆಸರನ್ನು ಚುನಾವಣಾಧಿಕಾರಿ ಸುಷ್ಮಾ ಬಂಗೇರ ಪ್ರಕಟಿಸಿದರು.</p>.<p>ನೂತನ ಆಡಳಿತ ಮಂಡಳಿ: ಅಧ್ಯಕ್ಷ- ಅಬ್ದುಲ್ ರಜಾಕ್ ನಿಟ್ಟೆ, ಉಪಾಧ್ಯಕ್ಷ- ಶಂಕರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ- ಹರೀಶ್ ಭಂಡಾರಿ- ಜೊತೆ ಕಾರ್ಯದರ್ಶಿ- ಶರೋನ್ ಗೊನ್ಸಾಲ್ವಿಸ್, ಕೋಶಾಧಿಕಾರಿ- ರೋಷನ್ ಕ್ವಾರ್ಡಸ್, ಆಂತರಿಕ ಲೆಕ್ಕ ಪರಿಶೋಧಕ- ದಿನೇಶ್ ರಾಮ್ ಬನ್ನಂಜೆ, ಸಾಂಸ್ಕೃತಿಕ ಕಾರ್ಯದರ್ಶಿ- ವಿಜಯ್ ವಿಲ್ಸನ್ ಅಲ್ಬುಕರ್ಕ್, ಕ್ರೀಡಾ ಕಾರ್ಯದರ್ಶಿ- ಶ್ರೀನಾಥ್ ಪ್ರಭು, ಕ್ಷೇಮಾಧಿಕಾರಿ- ವಿಜಯ್ ಕುಮಾರ್ ಕೈರಂಗಳ, ಸಾರ್ವಜನಿಕ ಸಂಪರ್ಕಾಧಿಕಾರಿ- ಲೈನಲ್ ಮಸ್ಕರೇನಸ್.</p>.<p>ಅಬ್ದುಲ್ ರಜಾಕ್ ನಿಟ್ಟೆ ಮಾತನಾಡಿ, ತುಳುಕೂಟ ಬೆಳ್ಳಿಹಬ್ಬದ ಈ ವರ್ಷದಲ್ಲಿ ಹೆಚ್ಚಿನ ಆರೋಗ್ಯ ಹಾಗೂ ಸಮಾಜಮುಖಿ ಕಾರ್ಯಕ್ರಮಗಳಿಗೆ ಪ್ರಯತ್ನಿಸುವುದಾಗಿ ತಿಳಿಸಿದರು.</p>.<p>ತುಳುಕೂಟ ಕುವೈಟ್ನ 25ನೇ ವರ್ಷದ ಸ್ಮರಣಾರ್ಥ ನೂತನ ಲಾಂಛನ ಹಾಗು ಸಾಲ್ಮಿಯಾ ಕ್ಲಿನಿಕ್ ಪ್ರಾಯೋಜಕತ್ವದ ತುಳುಕೂಟದ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು.<br>ಜಾಕ್ಸನ್ ಡೇಸಾ ಹಾಗೂ ಮನೋಹರ್ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಹರೀಶ್ ಭಂಡಾರಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು:</strong> ತುಳುಕೂಟ ಕುವೈಟ್ನ 24ನೇ ವಾರ್ಷಿಕ ಮಹಾಸಭೆಯು ಇಂಡಿಯನ್ ಸ್ಕೂಲ್ ಆಫ್ ಎಕ್ಸಲೆನ್ಸ್ ಸಭಾಂಗಣದಲ್ಲಿ ಜರುಗಿತು.</p>.<p>ತುಳುಕೂಟ ಕುವೈಟ್ನ ಅಧ್ಯಕ್ಷ ಅಬ್ದುಲ್ ರಜಾಕ್ ಅಧ್ಯಕ್ಷತೆ ವಹಿಸಿದ್ದರು.</p>.<p>ಪ್ರಧಾನ ಕಾರ್ಯದರ್ಶಿ ಹರೀಶ್ ಭಂಡಾರಿ ವಾರ್ಷಿಕ ವರದಿ ಮತ್ತು ಕೋಶಾಧಿಕಾರಿ ರೋಷನ್ ಕ್ವಾರ್ಡಸ್ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. 2023ನೇ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿದ 10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ಬಹುಮಾನ ನೀಡಲಾಯಿತು.</p>.<p>2024ನೇ ವರ್ಷದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಗೊಂಡ ಸದಸ್ಯರ ಹೆಸರನ್ನು ಚುನಾವಣಾಧಿಕಾರಿ ಸುಷ್ಮಾ ಬಂಗೇರ ಪ್ರಕಟಿಸಿದರು.</p>.<p>ನೂತನ ಆಡಳಿತ ಮಂಡಳಿ: ಅಧ್ಯಕ್ಷ- ಅಬ್ದುಲ್ ರಜಾಕ್ ನಿಟ್ಟೆ, ಉಪಾಧ್ಯಕ್ಷ- ಶಂಕರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ- ಹರೀಶ್ ಭಂಡಾರಿ- ಜೊತೆ ಕಾರ್ಯದರ್ಶಿ- ಶರೋನ್ ಗೊನ್ಸಾಲ್ವಿಸ್, ಕೋಶಾಧಿಕಾರಿ- ರೋಷನ್ ಕ್ವಾರ್ಡಸ್, ಆಂತರಿಕ ಲೆಕ್ಕ ಪರಿಶೋಧಕ- ದಿನೇಶ್ ರಾಮ್ ಬನ್ನಂಜೆ, ಸಾಂಸ್ಕೃತಿಕ ಕಾರ್ಯದರ್ಶಿ- ವಿಜಯ್ ವಿಲ್ಸನ್ ಅಲ್ಬುಕರ್ಕ್, ಕ್ರೀಡಾ ಕಾರ್ಯದರ್ಶಿ- ಶ್ರೀನಾಥ್ ಪ್ರಭು, ಕ್ಷೇಮಾಧಿಕಾರಿ- ವಿಜಯ್ ಕುಮಾರ್ ಕೈರಂಗಳ, ಸಾರ್ವಜನಿಕ ಸಂಪರ್ಕಾಧಿಕಾರಿ- ಲೈನಲ್ ಮಸ್ಕರೇನಸ್.</p>.<p>ಅಬ್ದುಲ್ ರಜಾಕ್ ನಿಟ್ಟೆ ಮಾತನಾಡಿ, ತುಳುಕೂಟ ಬೆಳ್ಳಿಹಬ್ಬದ ಈ ವರ್ಷದಲ್ಲಿ ಹೆಚ್ಚಿನ ಆರೋಗ್ಯ ಹಾಗೂ ಸಮಾಜಮುಖಿ ಕಾರ್ಯಕ್ರಮಗಳಿಗೆ ಪ್ರಯತ್ನಿಸುವುದಾಗಿ ತಿಳಿಸಿದರು.</p>.<p>ತುಳುಕೂಟ ಕುವೈಟ್ನ 25ನೇ ವರ್ಷದ ಸ್ಮರಣಾರ್ಥ ನೂತನ ಲಾಂಛನ ಹಾಗು ಸಾಲ್ಮಿಯಾ ಕ್ಲಿನಿಕ್ ಪ್ರಾಯೋಜಕತ್ವದ ತುಳುಕೂಟದ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು.<br>ಜಾಕ್ಸನ್ ಡೇಸಾ ಹಾಗೂ ಮನೋಹರ್ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಹರೀಶ್ ಭಂಡಾರಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>