ಮದ್ಯದಂಗಡಿಯಲ್ಲಿ ಕೊಲೆ: ಸುರತ್ಕಲ್ನ ಜೀವನ್ ತಾರಾ ಎಂಬ ವೈನ್ ಶಾಪ್ನಲ್ಲಿ ಸಮೀಪದ ಗುಡ್ಡೆಕೊಪ್ಲ ನಿವಾಸಿ ಸಂದೇಶ್ ಎಂಬಾತನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ. ಮದ್ಯದ ಅಮಲಿನಲ್ಲಿ ಸ್ನೇಹಿತರ ನಡುವೆ ಜಗಳ ನಡೆದಿದ್ದು, ಆಗ ರಾಜಾ, ಗಣೇಶ್ ಮತ್ತು ಸುಹೈಲ್ ಎಂಬುವವರು ಇರಿದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.