<p><strong>ಉಜಿರೆ:</strong> ದೇಶದ ಎಲ್ಲ ಭಾಷೆಗಳಿಗೂ ಸಂಸ್ಕೃತ ಮೂಲವಾಗಿದ್ದು, ಎಲ್ಲರೂ ಸಂಸ್ಕೃತ ಕಲಿಯಬೇಕು. ಸಂಸ್ಕೃತ ರಾಷ್ಟ್ರ ಭಾಷೆಯಾಗಬೇಕು ಎಂದು ಎಸ್ಡಿಎಂ ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳ ಸಂಯೋಜಕ, ನಿವೃತ್ತ ಉಪನ್ಯಾಸಕ ಪ್ರೊ.ಶಶಿಶೇಖರ ಎನ್.ಕಾಕತ್ಕರ್ ಹೇಳಿದರು.</p>.<p>ಎಸ್ಡಿಎಂ ಕಾಲೇಜಿನ ಸಂಸ್ಕೃತ ವಿಭಾಗದ ಆಶ್ರಯದಲ್ಲಿ ಆಯೋಜಿಸಿದ್ದ ಸಂಸ್ಕೃತ ನಾಟಕಗಳ ಸಮೀಕ್ಷೆ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಅಧ್ಯಕ್ಷತೆ ವಹಿಸಿದ ಸಂಸ್ಕೃತ ಪ್ರಾಧ್ಯಾಪಕ ಪ್ರಸನ್ನಕುಮಾರ್ ಐತಾಳ, ಸಂಸ್ಕೃತ ಇದ್ದರೆ ಸಂಸ್ಕೃತಿ ಇರುತ್ತದೆ. ಸತ್ಯ, ಧರ್ಮ, ನ್ಯಾಯ-ನೀತಿಯ ಸಂದೇಶ ಸಂಸ್ಕೃತ ನಾಟಕಗಳಲ್ಲಿ ಅಭಿವ್ಯಕ್ತವಾಗಿದ್ದು, ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಮಾರ್ಗದರ್ಶಿಯಾಗಿದೆ ಎಂದರು.</p>.<p>ಆಂಧ್ರಪ್ರದೇಶದ ಮದನಪಲ್ಲಿಯ ಋಷಿವಾಟಿಕಾ ಗುರುಕುಲದ ಶಿಕ್ಷಕಿ ಗಾಯತ್ರಿ ಭಾರಧ್ವಾಜ್ ಮಾತನಾಡಿದರು. ಕಾರವಾರದ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ ಎಂ.ಗಿರಿ, ಶೃಂಗೇರಿಯ ಸಂಸ್ಕೃತ ವಿ.ವಿ.ಪ್ರಾಚಾರ್ಯ ವೆಂಕಟರಮಣ ಭಟ್ ಮಾಹಿತಿ ನೀಡಿದರು.</p>.<p>ವಿಚಾರಸಂಕಿರಣದ ಸಂಯೋಜಕ ಶ್ರೇಯಸ್ ಪಾಳಂದೆ ಭಾಗವಹಿಸಿದ್ದರು.</p>.<p>ಸಂಸ್ಕೃತ ಉಪನ್ಯಾಸಕ ಪ್ರೊ.ಶ್ರೀಧರ ಭಟ್ ಸ್ವಾಗತಿಸಿದರು. ಆತ್ಮಶ್ರೀ ವಂದಿಸಿದರು. ಧರಿತ್ರಿ ಭಿಡೆ, ಸಿಂಚನಾ ಪಾಳಂದೆ ಕಾರ್ಯಕ್ರಮ ನಿರ್ವಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಜಿರೆ:</strong> ದೇಶದ ಎಲ್ಲ ಭಾಷೆಗಳಿಗೂ ಸಂಸ್ಕೃತ ಮೂಲವಾಗಿದ್ದು, ಎಲ್ಲರೂ ಸಂಸ್ಕೃತ ಕಲಿಯಬೇಕು. ಸಂಸ್ಕೃತ ರಾಷ್ಟ್ರ ಭಾಷೆಯಾಗಬೇಕು ಎಂದು ಎಸ್ಡಿಎಂ ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳ ಸಂಯೋಜಕ, ನಿವೃತ್ತ ಉಪನ್ಯಾಸಕ ಪ್ರೊ.ಶಶಿಶೇಖರ ಎನ್.ಕಾಕತ್ಕರ್ ಹೇಳಿದರು.</p>.<p>ಎಸ್ಡಿಎಂ ಕಾಲೇಜಿನ ಸಂಸ್ಕೃತ ವಿಭಾಗದ ಆಶ್ರಯದಲ್ಲಿ ಆಯೋಜಿಸಿದ್ದ ಸಂಸ್ಕೃತ ನಾಟಕಗಳ ಸಮೀಕ್ಷೆ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಅಧ್ಯಕ್ಷತೆ ವಹಿಸಿದ ಸಂಸ್ಕೃತ ಪ್ರಾಧ್ಯಾಪಕ ಪ್ರಸನ್ನಕುಮಾರ್ ಐತಾಳ, ಸಂಸ್ಕೃತ ಇದ್ದರೆ ಸಂಸ್ಕೃತಿ ಇರುತ್ತದೆ. ಸತ್ಯ, ಧರ್ಮ, ನ್ಯಾಯ-ನೀತಿಯ ಸಂದೇಶ ಸಂಸ್ಕೃತ ನಾಟಕಗಳಲ್ಲಿ ಅಭಿವ್ಯಕ್ತವಾಗಿದ್ದು, ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಮಾರ್ಗದರ್ಶಿಯಾಗಿದೆ ಎಂದರು.</p>.<p>ಆಂಧ್ರಪ್ರದೇಶದ ಮದನಪಲ್ಲಿಯ ಋಷಿವಾಟಿಕಾ ಗುರುಕುಲದ ಶಿಕ್ಷಕಿ ಗಾಯತ್ರಿ ಭಾರಧ್ವಾಜ್ ಮಾತನಾಡಿದರು. ಕಾರವಾರದ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ ಎಂ.ಗಿರಿ, ಶೃಂಗೇರಿಯ ಸಂಸ್ಕೃತ ವಿ.ವಿ.ಪ್ರಾಚಾರ್ಯ ವೆಂಕಟರಮಣ ಭಟ್ ಮಾಹಿತಿ ನೀಡಿದರು.</p>.<p>ವಿಚಾರಸಂಕಿರಣದ ಸಂಯೋಜಕ ಶ್ರೇಯಸ್ ಪಾಳಂದೆ ಭಾಗವಹಿಸಿದ್ದರು.</p>.<p>ಸಂಸ್ಕೃತ ಉಪನ್ಯಾಸಕ ಪ್ರೊ.ಶ್ರೀಧರ ಭಟ್ ಸ್ವಾಗತಿಸಿದರು. ಆತ್ಮಶ್ರೀ ವಂದಿಸಿದರು. ಧರಿತ್ರಿ ಭಿಡೆ, ಸಿಂಚನಾ ಪಾಳಂದೆ ಕಾರ್ಯಕ್ರಮ ನಿರ್ವಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>