ಜಿಲ್ಲಾ ಗೃಹ ರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಡಾ. ಮುರಳಿ ಮೋಹನ್ ಬೋಟ್ ಮತ್ತು ಇತರ ಸಲಕರಣೆಗಳನ್ನು ಹಸ್ತಾಂತರಿಸಿ ಮಾತನಾಡಿ ‘ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಜಿಲ್ಲೆಯ ವಿಪತ್ತು ನಿರ್ವಹಣಾ ಕಾರ್ಯಕ್ಕೆ ಅಗತ್ಯವಾದ ರಬ್ಬರ್ ಬೋಟ್, ರೈನ್ ಕೋಟ್, ಟಾರ್ಚ್ ಗಳನ್ನು ಬೇಡಿಕೆಯಂತೆ ಒದಗಿಸಿದ್ದು, ಅವರ ಸ್ಪಂದನದಿಂದಾಗಿ ಉಪ್ಪಿನಂಗಡಿ ಘಟಕಕ್ಕೂ ಒಂದು ಬೋಟ್, ಐದು ರೈನ್ ಕೋಟ್, ಒಂದು ಟಾರ್ಚ್ ಲಭಿಸಿದೆ’ ಎಂದರು.