ನಿಗದಿಯಂತೆ ಬೆಳಿಗ್ಗೆ 11 ಗಂಟೆಗೆ ಹೊರಡಬೇಕಾಗಿದ್ದ ರೈಲು 12.12ಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಹೊರಟಿತು. ಮಂಗಳೂರಿನಿಂದ ಉಡುಪಿವರೆಗೆ ಪ್ರಯಾಣಿಸಿದ ಕೇಂದ್ರೀಯ ವಿದ್ಯಾಲಯದ ಮಕ್ಕಳು, ಗಾಜಿನ ಕಿಟಕಿಯಲ್ಲಿ ಪರಿಸರ ಸೌಂದರ್ಯ ವೀಕ್ಷಿಸುವ ಅವಕಾಶ, ರೈಲಿನಲ್ಲಿರುವ ಹೈಟೆಕ್ ಸೌಲಭ್ಯಗಳನ್ನು ಕಂಡು ಪುಳಕಗೊಂಡರು. ರೈಲ್ವೆ ಹೋರಾಟಗಾರರು, ಸಾರ್ವಜನಿಕರು, ಬಿಜೆಪಿ ಕಾರ್ಯಕರ್ತರು ಏಳು ಹವಾನಿಯಂತ್ರಿತ ಕೋಚ್ಗಳಿರುವ ಈ ರೈಲಿನಲ್ಲಿ ಪ್ರಯಾಣಿಸಿದರು.