<p><strong>ಮಂಗಳೂರು</strong>: ದಕ್ಷಿಣ ಕನ್ನಡ ಜಿಲ್ಲಾ ವಾಲಿಬಾಲ್ ಸಂಸ್ಥೆಯ ಆಶ್ರಯದಲ್ಲಿ ನೆಲ್ಯಾಡಿ ಸಮಾನಮನಸ್ಕರ ವೇದಿಕೆ ಆಯೋಜಿಸುವ ಪುರುಷರ ಹಾಗೂ ಮಹಿಳೆಯರ ಜಿಲ್ಲಾ ಮಟ್ಟದ ಮೂರನೇ ವರ್ಷದ ವಾಲಿಬಾಲ್ ಟೂರ್ನಿ ಇದೇ 5ರಂದು ನೆಲ್ಯಾಡಿಯ ಬೆಥನಿ ಶಾಲಾ ಮೈದಾನದಲ್ಲಿ ನಡೆಯಲಿದೆ.</p>.<p>ಹೊನಲು ಬೆಳಕಿನಲ್ಲಿ ನಡೆಯಲಿರುವ ಟೂರ್ನಿಯ ಪುರುಷರ ವಿಭಾಗದಲ್ಲಿ 8 ಮತ್ತು ಮಹಿಳೆಯರ ವಿಭಾಗದಲ್ಲಿ 4 ತಂಡಗಳು ಪಾಲ್ಗೊಳ್ಳಲಿವೆ. ಲೆಜೆಂಡ್ಸ್ ಟ್ರೋಫಿಗಾಗಿ ಅನುಭವಿ ಆಟಗಾರರ 4 ತಂಡಗಳ ಪಂದ್ಯಗಳೂ ನಡೆಯಲಿವೆ ಎಂದು ಜಿಲ್ಲಾ ವಾಲಿಬಾಲ್ ಸಂಸ್ಥೆಯ ಅಧ್ಯಕ್ಷ ಬಿ.ಎಸ್.ಸತೀಶ್ ಕುಮಾರ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p>.<p>ಪುರುಷರ ವಿಭಾಗದ ಪಂದ್ಯಗಳು ರಾತ್ರಿ 8 ಗಂಟೆಗೆ ಆರಂಭವಾಗಲಿದ್ದು ಪ್ರಶಸ್ತಿ ಗೆದ್ದ ತಂಡದಕ್ಕೆ ₹ 15,555 ಮೊತ್ತ ಮತ್ತು ಟ್ರೋಫಿ ನೀಡಲಾಗುವುದು. ರನ್ನರ್ ಅಪ್ ತಂಡಕ್ಕೆ ₹ 11,111, ತೃತೀಯ ಸ್ಥಾನ ಗಳಿಸಿದ ತಂಡಕ್ಕೆ ₹ 7,777 ಮತ್ತು ನಾಲ್ಕನೇ ಸ್ಥಾನ ಗಳಿಸಿದ ತಂಡಕ್ಕೆ ₹ 5,555 ನೀಡಲಾಗುವುದು. ಮಹಿಳಾ ವಿಭಾಗದ ಪಂದ್ಯಗಳು ಸಂಜೆ 4 ಗಂಟೆಗೆ ಆರಂಭವಾಗಲಿದ್ದು ಪ್ರಶಸ್ತಿ ಗೆಲ್ಲುವ ತಂಡ ₹ 7,777 ಗಳಿಸಲಿದೆ. ರನ್ನರ್ ಅಪ್ ತಂಡಕ್ಕೆ ₹ 5,555 ನೀಡಲಾಗುವುದು ಎಂದು ಅವರು ತಿಳಿಸಿದರು.</p>.<p>ಮಂಗಳೂರು ತಾಲ್ಲೂಕು ವಾಲಿಬಾಲ್ ಸಂಸ್ಥೆಯ ಕಾರ್ಯದರ್ಶಿ ಲಿಲ್ಲಿ ಪಾಯಸ್ ಮಾತನಾಡಿ ಶಾಲಾ ವಿದ್ಯಾರ್ಥಿಗಳ 14 ಮತ್ತು 17 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ಟೂರ್ನಿ ಇದೇ 12ರಂದು ಮಂಗಳ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ತಿಳಿಸಿದರು. </p>.<p>ಸಮಾನ ಮನಸ್ಕರ ವೇದಿಕೆಯ ಪ್ರಶಾಂತ್ ನೆಲ್ಯಾಡಿ, ಪ್ರಶಾಂತ್ ವರ್ಗೀಸ್, ಕೆ.ಜೆ ಜೋಸ್ ಮತ್ತು ಮೋಹನ್ ಶಿರ್ಲಾಲ್ ಇದ್ದರು.</p>.<p><strong>ಶ್ರೀ ಗೋಪಾಲಕೃಷ್ಣ ಟ್ರೋಫಿ 6ರಂದು</strong> </p><p>ಉಪ್ಪಿನಕುದ್ರು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಶ್ರೀ ಗೋಪಾಲಕೃಷ್ಣ ಯುವ ಸೇವಾ ಸಮಿತಿ ಮತ್ತು ಉಪ್ಪಿನಕುದ್ರು ವಾಲಿಬಾಲ್ ಫ್ರೆಂಡ್ಸ್ ಆಯೋಜಿಸಿರುವ ಅಂತರರಾಜ್ಯ ಆಹ್ವಾನಿತ ವಾಲಿಬಾಲ್ ಟೂರ್ನಿ ಇದೇ 6ರಂದು ಸಂಜೆ 7 ಗಂಟೆಯಿಂದ ಗೋಪಾಲಕೃಷ್ಣ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ. ಪ್ರಶಸ್ತಿ ವಿಜೇತ ತಂಡಕ್ಕೆ ₹ 1 ಲಕ್ಷ ಮತ್ತು ಟ್ರೋಫಿ ರನ್ನರ್ ಅಪ್ ತಂಡಕ್ಕೆ ₹ 60 ಸಾವಿರ ಮತ್ತು ಟ್ರೋಫಿ ಸೆಮಿಫೈನಲ್ನಲ್ಲಿ ಸೋತ ತಂಡಗಳಿಗೆ ತಲಾ ₹ 30 ಸಾವಿರ ನೀಡಲಾಗುವುದು. ಸಿಐಎಸ್ಎಫ್ ರಾಂಚಿ ಬೆಂಗಳೂರು ಸ್ಪೈಕರ್ಸ್ ಹೈದರಾಬಾದ್ ಸ್ಪೈಕರ್ಸ್ ಭಾರತೀಯ ರೈಲ್ವೆ ಕೇರಳ ಸ್ಪೈಕರ್ಸ್ ಮತ್ತು ಚೆನ್ನೈ ಚಾಂಪಿಯನ್ಸ್ ತಂಡಗಳು ಪಾಲ್ಗೊಳ್ಳಲಿವೆ ಎಂದು ಪ್ರಕಟಣೆ ತಿಳಿಸಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು</strong>: ದಕ್ಷಿಣ ಕನ್ನಡ ಜಿಲ್ಲಾ ವಾಲಿಬಾಲ್ ಸಂಸ್ಥೆಯ ಆಶ್ರಯದಲ್ಲಿ ನೆಲ್ಯಾಡಿ ಸಮಾನಮನಸ್ಕರ ವೇದಿಕೆ ಆಯೋಜಿಸುವ ಪುರುಷರ ಹಾಗೂ ಮಹಿಳೆಯರ ಜಿಲ್ಲಾ ಮಟ್ಟದ ಮೂರನೇ ವರ್ಷದ ವಾಲಿಬಾಲ್ ಟೂರ್ನಿ ಇದೇ 5ರಂದು ನೆಲ್ಯಾಡಿಯ ಬೆಥನಿ ಶಾಲಾ ಮೈದಾನದಲ್ಲಿ ನಡೆಯಲಿದೆ.</p>.<p>ಹೊನಲು ಬೆಳಕಿನಲ್ಲಿ ನಡೆಯಲಿರುವ ಟೂರ್ನಿಯ ಪುರುಷರ ವಿಭಾಗದಲ್ಲಿ 8 ಮತ್ತು ಮಹಿಳೆಯರ ವಿಭಾಗದಲ್ಲಿ 4 ತಂಡಗಳು ಪಾಲ್ಗೊಳ್ಳಲಿವೆ. ಲೆಜೆಂಡ್ಸ್ ಟ್ರೋಫಿಗಾಗಿ ಅನುಭವಿ ಆಟಗಾರರ 4 ತಂಡಗಳ ಪಂದ್ಯಗಳೂ ನಡೆಯಲಿವೆ ಎಂದು ಜಿಲ್ಲಾ ವಾಲಿಬಾಲ್ ಸಂಸ್ಥೆಯ ಅಧ್ಯಕ್ಷ ಬಿ.ಎಸ್.ಸತೀಶ್ ಕುಮಾರ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p>.<p>ಪುರುಷರ ವಿಭಾಗದ ಪಂದ್ಯಗಳು ರಾತ್ರಿ 8 ಗಂಟೆಗೆ ಆರಂಭವಾಗಲಿದ್ದು ಪ್ರಶಸ್ತಿ ಗೆದ್ದ ತಂಡದಕ್ಕೆ ₹ 15,555 ಮೊತ್ತ ಮತ್ತು ಟ್ರೋಫಿ ನೀಡಲಾಗುವುದು. ರನ್ನರ್ ಅಪ್ ತಂಡಕ್ಕೆ ₹ 11,111, ತೃತೀಯ ಸ್ಥಾನ ಗಳಿಸಿದ ತಂಡಕ್ಕೆ ₹ 7,777 ಮತ್ತು ನಾಲ್ಕನೇ ಸ್ಥಾನ ಗಳಿಸಿದ ತಂಡಕ್ಕೆ ₹ 5,555 ನೀಡಲಾಗುವುದು. ಮಹಿಳಾ ವಿಭಾಗದ ಪಂದ್ಯಗಳು ಸಂಜೆ 4 ಗಂಟೆಗೆ ಆರಂಭವಾಗಲಿದ್ದು ಪ್ರಶಸ್ತಿ ಗೆಲ್ಲುವ ತಂಡ ₹ 7,777 ಗಳಿಸಲಿದೆ. ರನ್ನರ್ ಅಪ್ ತಂಡಕ್ಕೆ ₹ 5,555 ನೀಡಲಾಗುವುದು ಎಂದು ಅವರು ತಿಳಿಸಿದರು.</p>.<p>ಮಂಗಳೂರು ತಾಲ್ಲೂಕು ವಾಲಿಬಾಲ್ ಸಂಸ್ಥೆಯ ಕಾರ್ಯದರ್ಶಿ ಲಿಲ್ಲಿ ಪಾಯಸ್ ಮಾತನಾಡಿ ಶಾಲಾ ವಿದ್ಯಾರ್ಥಿಗಳ 14 ಮತ್ತು 17 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ಟೂರ್ನಿ ಇದೇ 12ರಂದು ಮಂಗಳ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ತಿಳಿಸಿದರು. </p>.<p>ಸಮಾನ ಮನಸ್ಕರ ವೇದಿಕೆಯ ಪ್ರಶಾಂತ್ ನೆಲ್ಯಾಡಿ, ಪ್ರಶಾಂತ್ ವರ್ಗೀಸ್, ಕೆ.ಜೆ ಜೋಸ್ ಮತ್ತು ಮೋಹನ್ ಶಿರ್ಲಾಲ್ ಇದ್ದರು.</p>.<p><strong>ಶ್ರೀ ಗೋಪಾಲಕೃಷ್ಣ ಟ್ರೋಫಿ 6ರಂದು</strong> </p><p>ಉಪ್ಪಿನಕುದ್ರು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಶ್ರೀ ಗೋಪಾಲಕೃಷ್ಣ ಯುವ ಸೇವಾ ಸಮಿತಿ ಮತ್ತು ಉಪ್ಪಿನಕುದ್ರು ವಾಲಿಬಾಲ್ ಫ್ರೆಂಡ್ಸ್ ಆಯೋಜಿಸಿರುವ ಅಂತರರಾಜ್ಯ ಆಹ್ವಾನಿತ ವಾಲಿಬಾಲ್ ಟೂರ್ನಿ ಇದೇ 6ರಂದು ಸಂಜೆ 7 ಗಂಟೆಯಿಂದ ಗೋಪಾಲಕೃಷ್ಣ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ. ಪ್ರಶಸ್ತಿ ವಿಜೇತ ತಂಡಕ್ಕೆ ₹ 1 ಲಕ್ಷ ಮತ್ತು ಟ್ರೋಫಿ ರನ್ನರ್ ಅಪ್ ತಂಡಕ್ಕೆ ₹ 60 ಸಾವಿರ ಮತ್ತು ಟ್ರೋಫಿ ಸೆಮಿಫೈನಲ್ನಲ್ಲಿ ಸೋತ ತಂಡಗಳಿಗೆ ತಲಾ ₹ 30 ಸಾವಿರ ನೀಡಲಾಗುವುದು. ಸಿಐಎಸ್ಎಫ್ ರಾಂಚಿ ಬೆಂಗಳೂರು ಸ್ಪೈಕರ್ಸ್ ಹೈದರಾಬಾದ್ ಸ್ಪೈಕರ್ಸ್ ಭಾರತೀಯ ರೈಲ್ವೆ ಕೇರಳ ಸ್ಪೈಕರ್ಸ್ ಮತ್ತು ಚೆನ್ನೈ ಚಾಂಪಿಯನ್ಸ್ ತಂಡಗಳು ಪಾಲ್ಗೊಳ್ಳಲಿವೆ ಎಂದು ಪ್ರಕಟಣೆ ತಿಳಿಸಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>