<p><strong>ಮಂಗಳೂರು</strong>: ರಾಮಕೃಷ್ಣ ಮಿಷನ್ನ ‘ಸ್ವಚ್ಛ ಮಂಗಳೂರು’ ಅಭಿಯಾನದ ಪ್ರೇರಣೆಯಿಂದ ಆರಂಭಗೊಂಡ ಮಂಗಳಾ ಸಂಪನ್ಮೂಲ ನಿರ್ವಹಣಾ ಸಂಸ್ಥೆಯು ಕೋಡಿಯಾಲ್ ಬೈಲ್ನಲ್ಲಿರುವ ‘ದೀಪಾ ರೆಸಿಡೆನ್ಸಿ’ ಅಪಾರ್ಟ್ಮೆಂಟ್ನ 57 ವಸತಿ ಗೃಹಗಳಲ್ಲಿ ಹಸಿ ಕಸ ನಿರ್ವಹಣೆಯ ಹೊಣೆ ವಹಿಸಿಕೊಂಡಿದೆ. ಬುಧವಾರ ಇದಕ್ಕೆ ಅಧಿಕೃತ ಚಾಲನೆ ನೀಡಲಾಯಿತು.</p>.<p>ಈಗಾಗಲೇ ನಗರದ ಹಲವಾರು ವಸತಿ ಸಮುಚ್ಚಯಗಳಲ್ಲಿ ಮೂರು ಮಣ್ಣಿನ ಮಡಿಕೆಯ ಮೂಲಕ ಯಾವುದೇ ವಿದ್ಯುತ್ ಅಥವಾ ಇತರೇ ಇಂಧನಗಳನ್ನು ಬಳಸದೆ ಕಡಿಮೆ ಖರ್ಚಿನಲ್ಲಿ ನೈಸರ್ಗಿಕವಾಗಿ ಹಸಿ ಕಸವನ್ನು ನಿರ್ವಹಿಸಲಾಗುತ್ತಿದೆ. ಒಂದೂವರೆ ವರ್ಷಗಳಿಂದ 15 ವಸತಿ ಸಮುಚ್ಚಯಗಳ 500ಕ್ಕೂ ಹೆಚ್ಚಿನ ಫ್ಲಾಟ್ಗಳಲ್ಲಿ ಈ ಯೋಜನೆ ಯಶಸ್ವಿಯಾಗಿ ನಡೆಯುತ್ತಿದೆ.</p>.<p>ಮಂಗಳಾ ಸಂಪನ್ಮೂಲ ನಿರ್ವಹಣಾ ಸಂಸ್ಥೆಯ ಆಡಳಿತ ನಿರ್ದೇಶಕ ದಿಲ್ರಾಜ್ ಆಳ್ವ ಮತ್ತು ಅಪಾರ್ಟ್ಮೆಂಟ್ ಮಾಲೀಕರ ಸಂಘದ ಅಧ್ಯಕ್ಷ ಸಿ.ಎ. ಪ್ರವೀಣ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಗೋಪಾಲಕೃಷ್ಣ ಶೆಟ್ಟಿ, ಖಾಜಾಂಜಿ ಶಾಂತಲಕ್ಷ್ಮಿ ಪ್ರಭು ಇದ್ದರು.</p>.<p>ಮಂಗಳಾ ಸಂಪನ್ಮೂಲ ನಿರ್ವಹಣಾ ಸಂಸ್ಥೆಯ ಯೋಜನಾ ಮುಖ್ಯಸ್ಥ ಪುನೀತ್ ಪೂಜಾರಿ ತ್ಯಾಜ್ಯ ನಿರ್ವಹಣೆಯ ಕುರಿತು ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು</strong>: ರಾಮಕೃಷ್ಣ ಮಿಷನ್ನ ‘ಸ್ವಚ್ಛ ಮಂಗಳೂರು’ ಅಭಿಯಾನದ ಪ್ರೇರಣೆಯಿಂದ ಆರಂಭಗೊಂಡ ಮಂಗಳಾ ಸಂಪನ್ಮೂಲ ನಿರ್ವಹಣಾ ಸಂಸ್ಥೆಯು ಕೋಡಿಯಾಲ್ ಬೈಲ್ನಲ್ಲಿರುವ ‘ದೀಪಾ ರೆಸಿಡೆನ್ಸಿ’ ಅಪಾರ್ಟ್ಮೆಂಟ್ನ 57 ವಸತಿ ಗೃಹಗಳಲ್ಲಿ ಹಸಿ ಕಸ ನಿರ್ವಹಣೆಯ ಹೊಣೆ ವಹಿಸಿಕೊಂಡಿದೆ. ಬುಧವಾರ ಇದಕ್ಕೆ ಅಧಿಕೃತ ಚಾಲನೆ ನೀಡಲಾಯಿತು.</p>.<p>ಈಗಾಗಲೇ ನಗರದ ಹಲವಾರು ವಸತಿ ಸಮುಚ್ಚಯಗಳಲ್ಲಿ ಮೂರು ಮಣ್ಣಿನ ಮಡಿಕೆಯ ಮೂಲಕ ಯಾವುದೇ ವಿದ್ಯುತ್ ಅಥವಾ ಇತರೇ ಇಂಧನಗಳನ್ನು ಬಳಸದೆ ಕಡಿಮೆ ಖರ್ಚಿನಲ್ಲಿ ನೈಸರ್ಗಿಕವಾಗಿ ಹಸಿ ಕಸವನ್ನು ನಿರ್ವಹಿಸಲಾಗುತ್ತಿದೆ. ಒಂದೂವರೆ ವರ್ಷಗಳಿಂದ 15 ವಸತಿ ಸಮುಚ್ಚಯಗಳ 500ಕ್ಕೂ ಹೆಚ್ಚಿನ ಫ್ಲಾಟ್ಗಳಲ್ಲಿ ಈ ಯೋಜನೆ ಯಶಸ್ವಿಯಾಗಿ ನಡೆಯುತ್ತಿದೆ.</p>.<p>ಮಂಗಳಾ ಸಂಪನ್ಮೂಲ ನಿರ್ವಹಣಾ ಸಂಸ್ಥೆಯ ಆಡಳಿತ ನಿರ್ದೇಶಕ ದಿಲ್ರಾಜ್ ಆಳ್ವ ಮತ್ತು ಅಪಾರ್ಟ್ಮೆಂಟ್ ಮಾಲೀಕರ ಸಂಘದ ಅಧ್ಯಕ್ಷ ಸಿ.ಎ. ಪ್ರವೀಣ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಗೋಪಾಲಕೃಷ್ಣ ಶೆಟ್ಟಿ, ಖಾಜಾಂಜಿ ಶಾಂತಲಕ್ಷ್ಮಿ ಪ್ರಭು ಇದ್ದರು.</p>.<p>ಮಂಗಳಾ ಸಂಪನ್ಮೂಲ ನಿರ್ವಹಣಾ ಸಂಸ್ಥೆಯ ಯೋಜನಾ ಮುಖ್ಯಸ್ಥ ಪುನೀತ್ ಪೂಜಾರಿ ತ್ಯಾಜ್ಯ ನಿರ್ವಹಣೆಯ ಕುರಿತು ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>