ಬೆಂಗಳೂರಿನ ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿ ಪ್ರಕರಣದಲ್ಲಿ ಸರ್ಕಾರ ಹೇಗೆ ನಡೆದುಕೊಂಡಿತ್ತು ಎಂದು ನೀವು ನೋಡಿದ್ದೀರಿ, ಹುಬ್ಬಳ್ಳಿ ಘಟನೆಯಾದಾಗ 48 ಗಂಟೆಯೊಳಗಾಗಿ ಮೌಲ್ವಿಯನ್ನು ಎಳೆದು ತಂದಿದ್ದೇವೆ. ಸಿಎಎ ವಿಚಾರಕ್ಕೆ ಸಂಬಂಧಪಟ್ಟಂತೆ ಮಂಗಳೂರಿನಲ್ಲಿ ಮತಾಂಧ ಶಕ್ತಿಗಳನ್ನು ನಿಯಂತ್ರಣಕ್ಕೆ ತಂದಿದ್ದು ಕೂಡಾ ಇದೇ ಸರ್ಕಾರ ಎಂಬುದನ್ನು ಯಾರೂ ಮರೆಯಬಾರದು ಎಂದು ಹೇಳಿದರು.