ವರ್ತಕ ಮನೋಜ್ ಕೃಷ್ಣ ಬಳ್ಳೇರಿ ಮಾತನಾಡಿ, ‘ಕೋವಿಡ್ ಪ್ರಕರಣ ಹೆಚ್ಚಿರುವ ಮಂಗಳೂರು, ಬೆಂಗಳೂರು ಪ್ರದೇಶಗಳಲ್ಲಿ ವಾರಾಂತ್ಯ ಕರ್ಫ್ಯೂ ಪಾಲನೆಯಾಗುತ್ತಿಲ್ಲ. ಆದರೆ, ಕಡಬಕ್ಕೆ ಪ್ರತ್ಯೇಕ ನಿಯಮ ಪಾಲನೆ ಮಾಡಲು ಹೇಳುವುದು ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ವರ್ತಕರಾದ ವಿವೇಕಾನಂದ ಬೊಳ್ಳಾಜೆ, ಅಬ್ಬಾಸ್ ಕಡಬ, ಅನ್ವರ್, ಸಂತೋಷ್ ಉಳಿಪ್ಪು, ಸತೀಶ್ ನಾಯ್ಕ್ ಮೇಲಿನಮನೆ, ಟಿ.ಎಂ. ಮ್ಯಾಥ್ಯೂ, ಸುಜಿತ್ ಪಿ.ಕೆ, ಚಂದ್ರಶೇಖರ ಕರ್ಕೇರ, ಗೋಪಾಲ್ ಮೇಲಿನಮನೆ, ಮಹಮ್ಮದ್ ಅಶ್ರಫ್, ಮುತ್ತುಕುಮಾರ್, ರತ್ನಾಕರ ಹೆಗ್ಡೆ, ಅಶೋಕ್ ಹೆಗ್ಡೆ, ಇ.ಜೆ. ಮ್ಯಾಥ್ಯೂ, ರಾಕೇಶ್ ಚೌದರಿ, ಅಶೋಕ್ ರೈ ಅಬ್ದುಲ್ ರಶೀದ್, ಉಮ್ಮರ್ ಫಾರೂಕ್, ಕೆ.ಎಮ್. ಹನೀಫ್ ಇದ್ದರು.