ಮಹಿಳೆಯ ಹೃದಯದ ಆರೋಗ್ಯದ ಬಗ್ಗೆ ಸಾಮಾನ್ಯವಾಗಿ ಕಾಳಜಿ ವಹಿಸಲಾಗುತ್ತಿಲ್ಲ. ಆಕೆಯ ಹೃದಯ ಕೇವಲ ಆಕೆಗೆ ಮಾತ್ರವಲ್ಲ, ಇಡೀ ಕುಟುಂಬದ ಅಗತ್ಯ ಎಂಬ ಸಂದೇಶ ಹರಡಲಾಯಿತು. ಕೆಎಂಸಿ ಆಸ್ಪತ್ರೆಯ ಹೃದ್ರೋಗ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ನರಸಿಂಹ ಪೈ ವಿಶ್ವ ಹೃದಯ ದಿನದ ಕುರಿತು ಮಾತನಾಡಿದರು. ಕೆಎಂಸಿ ಡೀನ್ ಬಿ.ಉಣ್ಣಿಕೃಷ್ಣನ್, ಆಸ್ಪತ್ರೆಯ ಮುಖ್ಯ ಪ್ರಾದೇಶಿಕ ಕಾರ್ಯಾಚರಣೆ ಅಧಿಕಾರಿ ಸಗೀರ್ ಸಿದ್ದಿಕಿ, ಮಾಹೆ ಕ್ಯಾಂಪಸ್ನ ಪ್ರೊ. ದಿಲೀಪ್ ಜಿ.ನಾಯಕ್, ಹೃದ್ರೋಗ ತಜ್ಞರಾದ ಡಾ. ಎಂ.ಎನ್.ಭಟ್, ಡಾ.ರಾಜೇಶ್ ಪೈ, ಡಾ.ಮನೀಶ್ ರೈ, ಡಾ.ಮಾಧವ್ ಕಾಮತ್, ಡಾ.ಸೂರಜ್ ಪೈ, ಡಾ.ಹರೀಶ್ ರಾಘವನ್ ಮತ್ತು ಡಾ. ಐರೇಶ್ ಶೆಟ್ಟಿ ಇದ್ದರು.