<p><span style="font-size: 26px;">ಬದಿಯಡ್ಕ:`ಪ್ರತಿಯೊಬ್ಬನಿಗೂ ಹಸಿವಿನ ತುತ್ತು ಎತ್ತುವಾಗ ಮಾತೃಸಮಾನಳಾದ ಗೋವಿನ ನೆನಪಾಗಿ ಆಕೆಯ ರಕ್ಷಣೆಯ ದೀಕ್ಷೆ ಜಾಗೃತವಾಗಬೇಕು. ಅದುವೇ ಪ್ರತಿಯೊಬ್ಬನೂ ಮಾಡುವ ಸಾರ್ಥಕ ಗೋಸೇವೆ. ಗೋವಿನಲ್ಲಿ ಅಖಂಡ ಭಾರತದ ಅನುಕರಣೀಯ ತತ್ವಸಿದ್ಧಾಂತಗಳು ಅಡಕವಾಗಿದೆ' ಎಂದು ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸಾಮೀಜಿ ಹೇಳಿದರು.</span></p>.<p><br /> ಪೆರ್ಲದ ಸತ್ಯನಾರಾಯಣ ಪ್ರೌಢಶಾಲಾ ಪರಿಸರದಲ್ಲಿ ಭಾನುವಾರ ಸಂಜೆ ನಡೆದ ಜನಜನನೀ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು. `ಗೋವು ಕೇವಲ ಪಶುವಲ್ಲ. ಅದು ಪವಿತ್ರ ಕಾಮಧೇನು. ಸಮಾಜದಲ್ಲಿ ಹೋರಿಗಳು ಸ್ವಾಭಿಮಾನ ಹಾಗೂ ಗೋವುಗಳು ಪ್ರೀತಿ ವಾತ್ಸಲ್ಯದ ಸಂಕೇತವಾಗಿವೆ. ಸಾಮಾಜಿಕವಾಗಿ ಗೋರಕ್ಷಣೆಯ ಬಗ್ಗೆ ಹೆಚ್ಚಿನ ಚಿಂತನೆ ಅಗತ್ಯ. ಗೋವಿನ ಅವಲಂಬನೆ ಇಲ್ಲದ ಬದುಕನ್ನು ಮಾನವನಿಗೆ ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ' ಎಂದು ಅವರು ಹೇಳಿದರು.<br /> <br /> ಸಭೆಯಲ್ಲಿ ಕೊಂಡೆವೂರು ಯೋಗಾನಂದ ಸರಸ್ವತಿ ಸ್ವಾಮೀಜಿ, ಪಳ್ಳತ್ತಡ್ಕ ರಘುರಾಮ ಆಳ್ವ, ಎ.ಎಸ್ ಭಟ್, ವಿಜಯ ಕೃಷ್ಣನ್, ಯುಧ್ಠಿರ ಶರ್ಮ, ಚಂದ್ರಶೇಖರ ಏತಡ್ಕ, ಡಾ.ವೈ.ವಿ.ಕೃಷ್ಣಮೂರ್ತಿ ಮೊದಲಾದವರು ಭಾಗವಹಿಸಿದ್ದರು.<br /> ಭಾನುವಾರ ಬೆಳಗ್ಗೆ ನಿರ್ವಿಷ ನಿರಂತರ ಗೋ ಆಧರಿತ ಕೃಷಿ ಎಂಬ ವಿಷಯದ ಮೇಲೆ ಗೋಷ್ಠಿ ನಡೆಯಿತು. ಕಾರ್ಯಕ್ರಮದಲ್ಲಿ ಗೋಪೂಜೆ, ಗೋವರ್ಧನ ಗೋಪೂಜೆ, ಗೋಪಾಲಕೃಷ್ಣ ಕಲ್ಪೋಕ್ತ ಪೂಜೆ, ಬಂಗಾರಿಗೆ ಬಾಗಿನ ಮೊದಲಾದ ಕಾರ್ಯಕ್ರಮಗಳು ನಡೆದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size: 26px;">ಬದಿಯಡ್ಕ:`ಪ್ರತಿಯೊಬ್ಬನಿಗೂ ಹಸಿವಿನ ತುತ್ತು ಎತ್ತುವಾಗ ಮಾತೃಸಮಾನಳಾದ ಗೋವಿನ ನೆನಪಾಗಿ ಆಕೆಯ ರಕ್ಷಣೆಯ ದೀಕ್ಷೆ ಜಾಗೃತವಾಗಬೇಕು. ಅದುವೇ ಪ್ರತಿಯೊಬ್ಬನೂ ಮಾಡುವ ಸಾರ್ಥಕ ಗೋಸೇವೆ. ಗೋವಿನಲ್ಲಿ ಅಖಂಡ ಭಾರತದ ಅನುಕರಣೀಯ ತತ್ವಸಿದ್ಧಾಂತಗಳು ಅಡಕವಾಗಿದೆ' ಎಂದು ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸಾಮೀಜಿ ಹೇಳಿದರು.</span></p>.<p><br /> ಪೆರ್ಲದ ಸತ್ಯನಾರಾಯಣ ಪ್ರೌಢಶಾಲಾ ಪರಿಸರದಲ್ಲಿ ಭಾನುವಾರ ಸಂಜೆ ನಡೆದ ಜನಜನನೀ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು. `ಗೋವು ಕೇವಲ ಪಶುವಲ್ಲ. ಅದು ಪವಿತ್ರ ಕಾಮಧೇನು. ಸಮಾಜದಲ್ಲಿ ಹೋರಿಗಳು ಸ್ವಾಭಿಮಾನ ಹಾಗೂ ಗೋವುಗಳು ಪ್ರೀತಿ ವಾತ್ಸಲ್ಯದ ಸಂಕೇತವಾಗಿವೆ. ಸಾಮಾಜಿಕವಾಗಿ ಗೋರಕ್ಷಣೆಯ ಬಗ್ಗೆ ಹೆಚ್ಚಿನ ಚಿಂತನೆ ಅಗತ್ಯ. ಗೋವಿನ ಅವಲಂಬನೆ ಇಲ್ಲದ ಬದುಕನ್ನು ಮಾನವನಿಗೆ ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ' ಎಂದು ಅವರು ಹೇಳಿದರು.<br /> <br /> ಸಭೆಯಲ್ಲಿ ಕೊಂಡೆವೂರು ಯೋಗಾನಂದ ಸರಸ್ವತಿ ಸ್ವಾಮೀಜಿ, ಪಳ್ಳತ್ತಡ್ಕ ರಘುರಾಮ ಆಳ್ವ, ಎ.ಎಸ್ ಭಟ್, ವಿಜಯ ಕೃಷ್ಣನ್, ಯುಧ್ಠಿರ ಶರ್ಮ, ಚಂದ್ರಶೇಖರ ಏತಡ್ಕ, ಡಾ.ವೈ.ವಿ.ಕೃಷ್ಣಮೂರ್ತಿ ಮೊದಲಾದವರು ಭಾಗವಹಿಸಿದ್ದರು.<br /> ಭಾನುವಾರ ಬೆಳಗ್ಗೆ ನಿರ್ವಿಷ ನಿರಂತರ ಗೋ ಆಧರಿತ ಕೃಷಿ ಎಂಬ ವಿಷಯದ ಮೇಲೆ ಗೋಷ್ಠಿ ನಡೆಯಿತು. ಕಾರ್ಯಕ್ರಮದಲ್ಲಿ ಗೋಪೂಜೆ, ಗೋವರ್ಧನ ಗೋಪೂಜೆ, ಗೋಪಾಲಕೃಷ್ಣ ಕಲ್ಪೋಕ್ತ ಪೂಜೆ, ಬಂಗಾರಿಗೆ ಬಾಗಿನ ಮೊದಲಾದ ಕಾರ್ಯಕ್ರಮಗಳು ನಡೆದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>