<p><strong>ಮಂಗಳೂರು:</strong> `ರಾಜ್ಯದ ಶಿಕ್ಷಕರು, ಪದವೀಧರರು ವಿಧಾನಪರಿಷತ್ ಚುನಾವಣೆಯಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿರುವ ಬಿಜೆಪಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸುವ ಮೂಲಕ ರಾಜ್ಯದ ಮಾನವನ್ನು ಕಾಪಾಡಬೇಕು~ ಎಂದು ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಹೇಳಿದರು. <br /> <br /> ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ಆಪರೇಷನ್ ಕಮಲ ನಡೆಸಲು ಹಣ ಹಾಗೂ ಜಾತಿ ಬಲ ಬಳಸಿದ್ದಾಗಿ ಬಿಜೆಪಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರೇ ಒಪ್ಪಿಕೊಂಡಿದ್ದಾರೆ. ಮಕ್ಕಳಿಗೆ ಸನ್ನಡತೆ ಪಾಠ ಹೇಳುವ ಶಿಕ್ಷಕರು ಈ ಚುನಾವಣೆಯಲ್ಲಿ ಯೋಚಿಸಿ ಮತ ಹಾಕಬೇಕು~ ಎಂದರು. <br /> <br /> `ನಿತ್ಯಾನಂದ ಸ್ವಾಮಿ ನಡೆಸಿರುವ ಕಾರ್ಮಕಾಂಡಗಳನ್ನು ಮಾಧ್ಯಮಗಳು ಬೆಳಕಿಗೆಗೆ ತಂದರೂ ಸರ್ಕಾರ ಅಕ್ರಮ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಕೈಗೊಂಡಿಲ್ಲ. ಸ್ವಾಮೀಜಿ ಕಡೆಯವರು ಮಾಧ್ಯಮದವರ ಮೇಲೆ ಹಲ್ಲೆ ನಡೆಸಿದರೂ ಮುಖ್ಯಮಂತ್ರಿಯಾಗಲೀ ಗೃಹ ಸಚಿವರಾಗಲೀ ಮಾತನಾಡುತ್ತಿಲ್ಲ. ಮಾಧ್ಯಮಗಳನ್ನು ದುರ್ಬಲಗೊಳಿಸಿದರೆ ಪ್ರಜಾಪ್ರಭುತ್ವ ಉಳಿಯುತ್ತದಾ?~ ಎಂದು ಪ್ರಶ್ನಿಸಿದರು.<br /> <br /> `ಭ್ರಷ್ಟಾಚಾರ, ಲೋಕಪಾಲ ಮಸೂದೆ ಬಗ್ಗೆ ಮಾತನಾಡುವ ಅಣ್ಣಾ ನೇತೃತ್ವದ ತಂಡ ರಾಜ್ಯದಲ್ಲಿ ಲೋಕಾಯುಕ್ತರನ್ನು ನೇಮಿಸದ ಬಗ್ಗೆ ಕುರುಡಾಗಿದೆ~ ಎಂದು ಟೀಕಿಸಿದರು. <br /> <br /> `ಯಾವುದೇ ಸಿದ್ಧತೆ ನಡೆಸದೆ ಚುನಾವಣೆ ಸಮೀಪಿಸಿದಾಗ ಪತ್ರಿಕಾ ಹೇಳಿಕೆ ನೀಡುವ ಕಾಂಗ್ರೆಸ್ ನಾಯಕರು ಪತ್ರಿಕಾ ಹುಲಿಗಳು~ ಎಂಬ ಜೆಡಿಎಸ್ ಟೀಕೆಗೆ ಪ್ರತಿಕ್ರಿಯಿಸಿದ ಪೂಜಾರಿ, `ಟೀಕೆಯಲ್ಲಿ ನಿಜಾಂಶವಿದೆ. ಈ ಬಾರಿಯ ಚುನಾವಣೆಯಲ್ಲಿ ಆರಂಭದಲ್ಲೇ ಸಿದ್ಧತೆ ನಡೆಸಿದ್ದೇವೆ~ ಎಂದರು. <br /> <br /> ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಹೆಸರು ಕೇಳಿಬಂದ ಕುರಿತು ಪ್ರತಿಕ್ರಿಯಿಸಿದ ಪೂಜಾರಿ `ಆ ಸ್ಥಾನ ಖಾಲಿ ಇಲ್ಲ~ ಎಂದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ, ಪಕ್ಷದ ಮುಖಂಡರಾದ ಸುರೇಶ್ ಬಲ್ಲಾಳ್, ಹರಿಕೃಷ್ಣ ಬಂಟ್ವಾಳ್ ಅರುಣ್ ಕುವೆಲ್ಲೊ, ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು:</strong> `ರಾಜ್ಯದ ಶಿಕ್ಷಕರು, ಪದವೀಧರರು ವಿಧಾನಪರಿಷತ್ ಚುನಾವಣೆಯಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿರುವ ಬಿಜೆಪಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸುವ ಮೂಲಕ ರಾಜ್ಯದ ಮಾನವನ್ನು ಕಾಪಾಡಬೇಕು~ ಎಂದು ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಹೇಳಿದರು. <br /> <br /> ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ಆಪರೇಷನ್ ಕಮಲ ನಡೆಸಲು ಹಣ ಹಾಗೂ ಜಾತಿ ಬಲ ಬಳಸಿದ್ದಾಗಿ ಬಿಜೆಪಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರೇ ಒಪ್ಪಿಕೊಂಡಿದ್ದಾರೆ. ಮಕ್ಕಳಿಗೆ ಸನ್ನಡತೆ ಪಾಠ ಹೇಳುವ ಶಿಕ್ಷಕರು ಈ ಚುನಾವಣೆಯಲ್ಲಿ ಯೋಚಿಸಿ ಮತ ಹಾಕಬೇಕು~ ಎಂದರು. <br /> <br /> `ನಿತ್ಯಾನಂದ ಸ್ವಾಮಿ ನಡೆಸಿರುವ ಕಾರ್ಮಕಾಂಡಗಳನ್ನು ಮಾಧ್ಯಮಗಳು ಬೆಳಕಿಗೆಗೆ ತಂದರೂ ಸರ್ಕಾರ ಅಕ್ರಮ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಕೈಗೊಂಡಿಲ್ಲ. ಸ್ವಾಮೀಜಿ ಕಡೆಯವರು ಮಾಧ್ಯಮದವರ ಮೇಲೆ ಹಲ್ಲೆ ನಡೆಸಿದರೂ ಮುಖ್ಯಮಂತ್ರಿಯಾಗಲೀ ಗೃಹ ಸಚಿವರಾಗಲೀ ಮಾತನಾಡುತ್ತಿಲ್ಲ. ಮಾಧ್ಯಮಗಳನ್ನು ದುರ್ಬಲಗೊಳಿಸಿದರೆ ಪ್ರಜಾಪ್ರಭುತ್ವ ಉಳಿಯುತ್ತದಾ?~ ಎಂದು ಪ್ರಶ್ನಿಸಿದರು.<br /> <br /> `ಭ್ರಷ್ಟಾಚಾರ, ಲೋಕಪಾಲ ಮಸೂದೆ ಬಗ್ಗೆ ಮಾತನಾಡುವ ಅಣ್ಣಾ ನೇತೃತ್ವದ ತಂಡ ರಾಜ್ಯದಲ್ಲಿ ಲೋಕಾಯುಕ್ತರನ್ನು ನೇಮಿಸದ ಬಗ್ಗೆ ಕುರುಡಾಗಿದೆ~ ಎಂದು ಟೀಕಿಸಿದರು. <br /> <br /> `ಯಾವುದೇ ಸಿದ್ಧತೆ ನಡೆಸದೆ ಚುನಾವಣೆ ಸಮೀಪಿಸಿದಾಗ ಪತ್ರಿಕಾ ಹೇಳಿಕೆ ನೀಡುವ ಕಾಂಗ್ರೆಸ್ ನಾಯಕರು ಪತ್ರಿಕಾ ಹುಲಿಗಳು~ ಎಂಬ ಜೆಡಿಎಸ್ ಟೀಕೆಗೆ ಪ್ರತಿಕ್ರಿಯಿಸಿದ ಪೂಜಾರಿ, `ಟೀಕೆಯಲ್ಲಿ ನಿಜಾಂಶವಿದೆ. ಈ ಬಾರಿಯ ಚುನಾವಣೆಯಲ್ಲಿ ಆರಂಭದಲ್ಲೇ ಸಿದ್ಧತೆ ನಡೆಸಿದ್ದೇವೆ~ ಎಂದರು. <br /> <br /> ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಹೆಸರು ಕೇಳಿಬಂದ ಕುರಿತು ಪ್ರತಿಕ್ರಿಯಿಸಿದ ಪೂಜಾರಿ `ಆ ಸ್ಥಾನ ಖಾಲಿ ಇಲ್ಲ~ ಎಂದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ, ಪಕ್ಷದ ಮುಖಂಡರಾದ ಸುರೇಶ್ ಬಲ್ಲಾಳ್, ಹರಿಕೃಷ್ಣ ಬಂಟ್ವಾಳ್ ಅರುಣ್ ಕುವೆಲ್ಲೊ, ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>