<p><strong>ಹೆಬ್ರಿ:</strong> ಮಲೆನಾಡ ಮಡಿಲ ಸುಂದರ ಭವ್ಯ ಪುಣ್ಯ ಕ್ಷೇತ್ರ ಪುರಾತನ ಅಜೆಕಾರು ಮಹಾವಿಷ್ಣುಮೂರ್ತಿ ದೇವಸ್ಥಾನದ ಸಂಪೂರ್ಣ ನವೀಕರಣ ಕಾರ್ಯ ಭರದಿಂದ ನಡೆಯುತ್ತಿದ್ದು, ಏಪ್ರಿಲ್ 5ರಿಂದ 20ರ ತನಕ ಅಷ್ಟಬಂಧ ಪ್ರತಿಷ್ಠಾ ಬ್ರಹ್ಮಕಲಶಾಭಿಪೇಕ ಮತ್ತು ಕಾಲಾವಧಿ ಮಹೋತ್ಸವ ನಡೆಯಲಿದೆ.<br /> <br /> ಸುಮಾರು 800 ವರ್ಷಗಳ ಐತಿಹಾಸಿಕ ಹಿನ್ನಲೆಯ ಶಿಲಾಮಯ ಗರ್ಭಗುಡಿಯನ್ನು ಹೊಂದಿರುವ ಅಜೆಕಾರು ವಿಷ್ಣುಮೂರ್ತಿ ದೇವಾಲಯದಲ್ಲಿ ಗಣಪತಿ, ದುರ್ಗಾಪರಮೇಶ್ವರಿ, ಗೋಪಾಲಕೃಷ್ಣ ಮತ್ತು ದಕ್ಷಿಣದಲ್ಲಿ ನಾಗ ಸನ್ನಿಧಿಯಿದೆ. ದೇವಸ್ಥಾನದ ಪಕ್ಕದಲ್ಲಿರುವ ಪುಷ್ಕರಣಿ ದೇವಳದ ಅಂದವನ್ನು ಹೆಚ್ಚಿಸಿದೆ.<br /> <br /> ಅಷ್ಟ ಮಂಗಳ ಪ್ರಶ್ನೆಯ ಪ್ರಕಾರ ಬಹು ಪುರಾತನವಾದ ರಾಜಮನೆತನಕ್ಕೆ ಸೇರಿದ್ದ ಈ ದೇವಸ್ಥಾನದಲ್ಲಿ ವಿಶೇಷ ಶಕ್ತಿಯಿದೆ. ಈ ಹಿಂದೆ ಹಲವು ಭಾರೀ ದೇವಸ್ಥಾನದಲ್ಲಿ ವಿವಿಧ ಅಭಿವೃದ್ದಿ ನಡೆದಿದ್ದವು. 1999ರಿಂದ ಆಡಳಿತ ಮೋಕ್ತೆಸರರಾಗಿ ಹೊಣೆಹೊತ್ತ ಅಜೆಕಾರು ದೇವಸ್ಯ ಶಿವರಾಮ ಜಿ.ಶೆಟ್ಟಿ ಸೇವೆ ಸಲ್ಲಿಸುತ್ತಿದ್ದು, ಗರ್ಭಗುಡಿ ಸಹಿತ ಸಂಪೂರ್ಣ ಜೀರ್ಣೋದ್ಧಾರದ ಕೆಲಸಗಳು ನಡೆಯುತ್ತಿದೆ.<br /> <br /> ಸುತ್ತು ಪೌಳಿ, ಗರ್ಭಗುಡಿ, ತೀರ್ಥಮಂಟಪ, ಗೋಪಾಲಕೃಷ್ಣ, ದುರ್ಗಾಪರಮೇಶ್ವರಿ, ಗಣಪತಿ ದೇವರ ಗುಡಿ, ತೀರ್ಥ ಭಾವಿ, ತಂತ್ರಿಗಳ ಅರ್ಚಕರ ಕೊಠಡಿ, ಪಾಠ ಶಾಲೆ, ಭದ್ರತಾ ಕೊಠಡಿ, ವಸಂತ ಮಂಟಪ, ಧ್ವಜಸ್ತಂಭ, ಆಡಳಿತ ಕಛೇರಿ ಸೇರಿ ದೇವಸ್ಥಾನದ ವಿವಿಧ ಅಭಿವೃದ್ಧಿ ಕಾಮಾಗಾರಿಗಳು ನಡೆಯುತ್ತಿದೆ.<br /> <br /> ದೇವಸ್ಥಾನದ ಸಂಪರ್ಕ ರಸ್ತೆಗೆ ಡಾಂಬಾರು ಹಾಕುವ ಕೆಲಸವೂ ನಡೆಯುತ್ತಿದೆ. ವೇದಮೂರ್ತಿ ಕೊರಂಗ್ರಪಾಡಿ ರಾಘವೇಂದ್ರ ತಂತ್ರಿ, ವಾದಿರಾಜ ತಂತ್ರಿ, ಅರ್ಚಕರಾದ ವೆಂಕಟರಮಣ ಭಟ್, ರಂಗನಾಥ ಭಟ್ ಅವರ ಮಾರ್ಗ-ದರ್ಶನದಲ್ಲಿ ಆಡಳಿತ ಮೋಕ್ತೆಸರ ದೇವಸ್ಯ ಶಿವರಾಮ ಜಿ.ಶೆಟ್ಟಿ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸುಂದರ ಎಂ.ಶೆಟ್ಟಿ, ವ್ಯವಸ್ಥಾಪನ ಸಮಿತಿ, ವಿವಿಧ ಉಪ ಸಮಿತಿಗಳು, ಮುಂಬೈ ಸಮಿತಿ, ಅಭಿವೃದ್ದಿ ಟ್ರಸ್ಟ್ ಪದಾಧಿಕಾರಿಗಳು ಅಭಿವೃದ್ದಿಯ ಮಂಗಳ ಕಾರ್ಯ ನಡೆಸುತ್ತಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೆಬ್ರಿ:</strong> ಮಲೆನಾಡ ಮಡಿಲ ಸುಂದರ ಭವ್ಯ ಪುಣ್ಯ ಕ್ಷೇತ್ರ ಪುರಾತನ ಅಜೆಕಾರು ಮಹಾವಿಷ್ಣುಮೂರ್ತಿ ದೇವಸ್ಥಾನದ ಸಂಪೂರ್ಣ ನವೀಕರಣ ಕಾರ್ಯ ಭರದಿಂದ ನಡೆಯುತ್ತಿದ್ದು, ಏಪ್ರಿಲ್ 5ರಿಂದ 20ರ ತನಕ ಅಷ್ಟಬಂಧ ಪ್ರತಿಷ್ಠಾ ಬ್ರಹ್ಮಕಲಶಾಭಿಪೇಕ ಮತ್ತು ಕಾಲಾವಧಿ ಮಹೋತ್ಸವ ನಡೆಯಲಿದೆ.<br /> <br /> ಸುಮಾರು 800 ವರ್ಷಗಳ ಐತಿಹಾಸಿಕ ಹಿನ್ನಲೆಯ ಶಿಲಾಮಯ ಗರ್ಭಗುಡಿಯನ್ನು ಹೊಂದಿರುವ ಅಜೆಕಾರು ವಿಷ್ಣುಮೂರ್ತಿ ದೇವಾಲಯದಲ್ಲಿ ಗಣಪತಿ, ದುರ್ಗಾಪರಮೇಶ್ವರಿ, ಗೋಪಾಲಕೃಷ್ಣ ಮತ್ತು ದಕ್ಷಿಣದಲ್ಲಿ ನಾಗ ಸನ್ನಿಧಿಯಿದೆ. ದೇವಸ್ಥಾನದ ಪಕ್ಕದಲ್ಲಿರುವ ಪುಷ್ಕರಣಿ ದೇವಳದ ಅಂದವನ್ನು ಹೆಚ್ಚಿಸಿದೆ.<br /> <br /> ಅಷ್ಟ ಮಂಗಳ ಪ್ರಶ್ನೆಯ ಪ್ರಕಾರ ಬಹು ಪುರಾತನವಾದ ರಾಜಮನೆತನಕ್ಕೆ ಸೇರಿದ್ದ ಈ ದೇವಸ್ಥಾನದಲ್ಲಿ ವಿಶೇಷ ಶಕ್ತಿಯಿದೆ. ಈ ಹಿಂದೆ ಹಲವು ಭಾರೀ ದೇವಸ್ಥಾನದಲ್ಲಿ ವಿವಿಧ ಅಭಿವೃದ್ದಿ ನಡೆದಿದ್ದವು. 1999ರಿಂದ ಆಡಳಿತ ಮೋಕ್ತೆಸರರಾಗಿ ಹೊಣೆಹೊತ್ತ ಅಜೆಕಾರು ದೇವಸ್ಯ ಶಿವರಾಮ ಜಿ.ಶೆಟ್ಟಿ ಸೇವೆ ಸಲ್ಲಿಸುತ್ತಿದ್ದು, ಗರ್ಭಗುಡಿ ಸಹಿತ ಸಂಪೂರ್ಣ ಜೀರ್ಣೋದ್ಧಾರದ ಕೆಲಸಗಳು ನಡೆಯುತ್ತಿದೆ.<br /> <br /> ಸುತ್ತು ಪೌಳಿ, ಗರ್ಭಗುಡಿ, ತೀರ್ಥಮಂಟಪ, ಗೋಪಾಲಕೃಷ್ಣ, ದುರ್ಗಾಪರಮೇಶ್ವರಿ, ಗಣಪತಿ ದೇವರ ಗುಡಿ, ತೀರ್ಥ ಭಾವಿ, ತಂತ್ರಿಗಳ ಅರ್ಚಕರ ಕೊಠಡಿ, ಪಾಠ ಶಾಲೆ, ಭದ್ರತಾ ಕೊಠಡಿ, ವಸಂತ ಮಂಟಪ, ಧ್ವಜಸ್ತಂಭ, ಆಡಳಿತ ಕಛೇರಿ ಸೇರಿ ದೇವಸ್ಥಾನದ ವಿವಿಧ ಅಭಿವೃದ್ಧಿ ಕಾಮಾಗಾರಿಗಳು ನಡೆಯುತ್ತಿದೆ.<br /> <br /> ದೇವಸ್ಥಾನದ ಸಂಪರ್ಕ ರಸ್ತೆಗೆ ಡಾಂಬಾರು ಹಾಕುವ ಕೆಲಸವೂ ನಡೆಯುತ್ತಿದೆ. ವೇದಮೂರ್ತಿ ಕೊರಂಗ್ರಪಾಡಿ ರಾಘವೇಂದ್ರ ತಂತ್ರಿ, ವಾದಿರಾಜ ತಂತ್ರಿ, ಅರ್ಚಕರಾದ ವೆಂಕಟರಮಣ ಭಟ್, ರಂಗನಾಥ ಭಟ್ ಅವರ ಮಾರ್ಗ-ದರ್ಶನದಲ್ಲಿ ಆಡಳಿತ ಮೋಕ್ತೆಸರ ದೇವಸ್ಯ ಶಿವರಾಮ ಜಿ.ಶೆಟ್ಟಿ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸುಂದರ ಎಂ.ಶೆಟ್ಟಿ, ವ್ಯವಸ್ಥಾಪನ ಸಮಿತಿ, ವಿವಿಧ ಉಪ ಸಮಿತಿಗಳು, ಮುಂಬೈ ಸಮಿತಿ, ಅಭಿವೃದ್ದಿ ಟ್ರಸ್ಟ್ ಪದಾಧಿಕಾರಿಗಳು ಅಭಿವೃದ್ದಿಯ ಮಂಗಳ ಕಾರ್ಯ ನಡೆಸುತ್ತಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>