<p><strong>ಸುರತ್ಕಲ್</strong>: ಇಲ್ಲಿಗೆ ಸಮಿಪದ ಚೊಕ್ಕಬೆಟ್ಟುವಿನ ಮನೆಯಿಂದ ಕಳವಿಗೆ ಯತ್ನಿಸಿದ ಕಳ್ಳರು, ಮನೆಯವರನ್ನು ಕಂಡು, ಕಳವಿಗೆ ಬಳಸುವ ವಸ್ತುಗಳನ್ನೂ ಬಿಟ್ಟು ಪರಾರಿಯಾದ ಘಟನೆ ಭಾನುವಾರ ರಾತ್ರಿ ನಡೆದಿದೆ.<br /> <br /> ಕಳವಿಗೆ ಉಪಯೋಗಿಸುವ ಅತ್ಯಾಧುನಿಕ ಮಾದರಿಯ ಕೊಕ್ಕೆ, ಕೀಲಿ ಕೈಗಳು, ಹೆಕ್ಸೋ ಬ್ಲೇಡ್, ಗಮ್, ಕೊಕ್ಕೆಯ ಉದ್ದಕ್ಕೆ ಸಹಕಾರಿಯಾಗಿರುವ ತುಂಡು ಪೈಪ್ಗಳನ್ನು ಬಿಟ್ಟು ಪರಾರಿಯಾಗಿದ್ದಾರೆ.<br /> <br /> ಭಾನುವಾರ ರಜಾದಿನವಾಗಿದ್ದರಿಂದ ಮನೆ ಮಂದಿ ರಾತ್ರಿ ಹೋಟೆಲ್ನಲ್ಲಿ ಊಟ ಮುಗಿಸಿ ಮನೆಗೆ ಹಿಂತಿರುಗಿದಾಗ ಅಪರಿಚಿತ ವ್ಯಕ್ತಿಗಳು ಓಡಾಡುತ್ತಿದ್ದರು. ಗಾಬರಿಗೊಂಡ ಮನೆಯವರು ಬೊಬ್ಬೆಹಾಕಿದಾಗ ಕಳ್ಳರು ಕಾಲ್ಕಿತ್ತರು. ಓಡುವ ಅವಸರದಲ್ಲಿ ತಂದಿದ್ದ ವಸ್ತುಗಳನ್ನು ಬಿಟ್ಟುಹೋದರು.<br /> <br /> <strong>ಪೊಲೀಸ್ ನಿರಾಸಕ್ತಿ: </strong>ಈ ಪ್ರಕರಣದಲ್ಲಿ ಜಾಗೃತರಾಗಬೇಕಿದ್ದ ಪೊಲೀಸರು ನಿರಾಸಕ್ತಿ ವಹಿಸಿದ್ದಾರೆಂದು ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. <br /> <br /> ಕಳವಿನ ಬಗ್ಗೆ ರಾತ್ರಿ ಸುರತ್ಕಲ್ ಪೊಲೀಸರಿಗೆ ದೂರವಾಣಿ ಕರೆ ಮಾಡಿದಾಗ ಹಾರಿಕೆಯ ಉತ್ತರ ನೀಡಿದರು ಎನ್ನಲಾಗಿದೆ. ಸ್ಥಳಕ್ಕಾಗಮಿಸಿದ ಸುದ್ದಿಗಾರರು ಠಾಣಾಧಿಕಾರಿಗೆ ವಿಷಯದ ತಿಳಿಸಿದಾಗ ಪೊಲೀಸ್ ಸಿಬ್ಬಂದಿ ಬರುವ ಮನಸ್ಸು ಮಾಡಿದರು.<br /> <br /> ಕಳವು ಪ್ರಕರಣ ನಿಗ್ರಹಿಸಲು ಇಲಾಖೆಗೆ ಅತ್ಯಾಧುನಿಕ ವಾಹನ ನೀಡಿದ್ದು ಪೊಲೀಸರು ಅದನ್ನು ನೈಜ ಉದ್ದೇಶಕ್ಕೆ ಬಳಸುತ್ತಿಲ್ಲ ಎಂದೂ ಸ್ಥಳೀಯರು ದೂರಿದ್ದಾರೆ.<br /> <br /> ಸೋಮವಾರ ಬೆಳಿಗ್ಗೆ ಸುರತ್ಕಲ್ ಠಾಣಾಧಿಕಾರಿ ಕೆ.ಯು.ಬೆಳ್ಳಿಯಪ್ಪ, ಸಬ್ ಇನ್ಸ್ಪೆಕ್ಟರ್ ಎಚ್. ರಮೇಶ್ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರಿಗೆ ಹಾಗೂ ಮನೆಮಂದಿಗೆ ರಕ್ಷಣೆಯ ಭರವಸೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುರತ್ಕಲ್</strong>: ಇಲ್ಲಿಗೆ ಸಮಿಪದ ಚೊಕ್ಕಬೆಟ್ಟುವಿನ ಮನೆಯಿಂದ ಕಳವಿಗೆ ಯತ್ನಿಸಿದ ಕಳ್ಳರು, ಮನೆಯವರನ್ನು ಕಂಡು, ಕಳವಿಗೆ ಬಳಸುವ ವಸ್ತುಗಳನ್ನೂ ಬಿಟ್ಟು ಪರಾರಿಯಾದ ಘಟನೆ ಭಾನುವಾರ ರಾತ್ರಿ ನಡೆದಿದೆ.<br /> <br /> ಕಳವಿಗೆ ಉಪಯೋಗಿಸುವ ಅತ್ಯಾಧುನಿಕ ಮಾದರಿಯ ಕೊಕ್ಕೆ, ಕೀಲಿ ಕೈಗಳು, ಹೆಕ್ಸೋ ಬ್ಲೇಡ್, ಗಮ್, ಕೊಕ್ಕೆಯ ಉದ್ದಕ್ಕೆ ಸಹಕಾರಿಯಾಗಿರುವ ತುಂಡು ಪೈಪ್ಗಳನ್ನು ಬಿಟ್ಟು ಪರಾರಿಯಾಗಿದ್ದಾರೆ.<br /> <br /> ಭಾನುವಾರ ರಜಾದಿನವಾಗಿದ್ದರಿಂದ ಮನೆ ಮಂದಿ ರಾತ್ರಿ ಹೋಟೆಲ್ನಲ್ಲಿ ಊಟ ಮುಗಿಸಿ ಮನೆಗೆ ಹಿಂತಿರುಗಿದಾಗ ಅಪರಿಚಿತ ವ್ಯಕ್ತಿಗಳು ಓಡಾಡುತ್ತಿದ್ದರು. ಗಾಬರಿಗೊಂಡ ಮನೆಯವರು ಬೊಬ್ಬೆಹಾಕಿದಾಗ ಕಳ್ಳರು ಕಾಲ್ಕಿತ್ತರು. ಓಡುವ ಅವಸರದಲ್ಲಿ ತಂದಿದ್ದ ವಸ್ತುಗಳನ್ನು ಬಿಟ್ಟುಹೋದರು.<br /> <br /> <strong>ಪೊಲೀಸ್ ನಿರಾಸಕ್ತಿ: </strong>ಈ ಪ್ರಕರಣದಲ್ಲಿ ಜಾಗೃತರಾಗಬೇಕಿದ್ದ ಪೊಲೀಸರು ನಿರಾಸಕ್ತಿ ವಹಿಸಿದ್ದಾರೆಂದು ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. <br /> <br /> ಕಳವಿನ ಬಗ್ಗೆ ರಾತ್ರಿ ಸುರತ್ಕಲ್ ಪೊಲೀಸರಿಗೆ ದೂರವಾಣಿ ಕರೆ ಮಾಡಿದಾಗ ಹಾರಿಕೆಯ ಉತ್ತರ ನೀಡಿದರು ಎನ್ನಲಾಗಿದೆ. ಸ್ಥಳಕ್ಕಾಗಮಿಸಿದ ಸುದ್ದಿಗಾರರು ಠಾಣಾಧಿಕಾರಿಗೆ ವಿಷಯದ ತಿಳಿಸಿದಾಗ ಪೊಲೀಸ್ ಸಿಬ್ಬಂದಿ ಬರುವ ಮನಸ್ಸು ಮಾಡಿದರು.<br /> <br /> ಕಳವು ಪ್ರಕರಣ ನಿಗ್ರಹಿಸಲು ಇಲಾಖೆಗೆ ಅತ್ಯಾಧುನಿಕ ವಾಹನ ನೀಡಿದ್ದು ಪೊಲೀಸರು ಅದನ್ನು ನೈಜ ಉದ್ದೇಶಕ್ಕೆ ಬಳಸುತ್ತಿಲ್ಲ ಎಂದೂ ಸ್ಥಳೀಯರು ದೂರಿದ್ದಾರೆ.<br /> <br /> ಸೋಮವಾರ ಬೆಳಿಗ್ಗೆ ಸುರತ್ಕಲ್ ಠಾಣಾಧಿಕಾರಿ ಕೆ.ಯು.ಬೆಳ್ಳಿಯಪ್ಪ, ಸಬ್ ಇನ್ಸ್ಪೆಕ್ಟರ್ ಎಚ್. ರಮೇಶ್ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರಿಗೆ ಹಾಗೂ ಮನೆಮಂದಿಗೆ ರಕ್ಷಣೆಯ ಭರವಸೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>