<p>ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯವನ್ನು ಸಂಪರ್ಕಿಸುವ ಕುಮಾರಧಾರ ಮುಳುಗು ಸೇತುವೆ ಮೇಲ್ದರ್ಜೆಗೆ ಏರಿಸುವ ಕಾರ್ಯ ಈಡೇರಿದ್ದರಿಂದ ಮತ್ತೆ ಇಲ್ಲಿ ಸಮಸ್ಯೆಗಳು ಎದುರಾಗುವ ಆತಂಕ ತಲೆದೋರಿದೆ.<br /> <br /> ಪ್ರಸಿದ್ಧ ಪುಣ್ಯ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯವನ್ನು ಗುಂಡ್ಯ ಹಾಗೂ ಉಪ್ಪಿನಂಗಡಿ ಮಾರ್ಗವಾಗಿ ಸಂಪರ್ಕಿಸುವ ರಸ್ತೆಯ ಮಧ್ಯೆ ಎದುರಾಗುವ ಕುಮಾರಧಾರಾ ಸೇತುವೆ ಬಹಳ ಹಿಂದೆಯೇ ನಿರ್ಮಾಣಗೊಂಡಿತ್ತು. ಹಳೆಯದಾದ ಈ ಸೇತುವೆ ಮಳೆಗಾಲದಲ್ಲಿ ಆಗಾಗ ಮುಳುಗಡೆಯಾಗುತ್ತಿದೆ. ಮಳೆಗಾಲದಲ್ಲಿ ಘಟ್ಟ ಪ್ರದೇಶದಿಂದ ಭಾರಿ ಮಳೆಯ ಪರಿಣಾಮ ಈ ನದಿ ಉಕ್ಕಿ ಹರಿಯುತ್ತದೆ. ತಗ್ಗಿನಲ್ಲಿರುವ ಈ ಸೇತುವೆಯೂ ಮುಳುಗಡೆಯಾಗುತ್ತದೆ.<br /> <br /> ಇದರಿಂದ ಕ್ಷೇತ್ರಕ್ಕೆ ಬರುವ ದೂರ ದೂರದ ಯಾತ್ರಾರ್ಥಿಗಳು ಸೇರದಂತೆ ಜನಸಾಮಾನ್ಯರು ಶಾಲಾ ಮಕ್ಕಳು ತೀವ್ರ ತೊಂದರೆಗೆ ಸಿಲುಕುತ್ತಾರೆ. ವರ್ಷದಲ್ಲಿ ಹತ್ತಾರು ಭಾರಿ ಮುಳುಗುವ ಈ ಸೇತುವೆ ಮುಳುಗಡೆಯಾದಾಗ ಕೆಲವೊಮ್ಮೆ ಎರಡರಿಂದ ಮೂರು ದಿನಗಳ ಕಾಲ ಸಂಪರ್ಕ ಕಡಿತಗೊಂಡು ಜನಜೀವನ ಅಸ್ತವ್ಯಸ್ತವಾಗುತ್ತದೆ.<br /> <br /> ಪ್ರಯಾಣಿಕರು ರಸ್ತೆಯ ಇಕ್ಕೆಲಗಳಲ್ಲಿ ತಾಸುಗಟ್ಟಲೆ ಕಾಯುವುದಲ್ಲದೆ, ಕ್ಷೇತ್ರವಿಡೀ ಸಂಪರ್ಕವನ್ನೇ ಕಡಿದುಕೊಂಡು ಬಿಡುತ್ತದೆ. ಹೊರಗಿನಿಂದ ಬರುವ ಭಕ್ತರು 2 ಬದಿಗಳಲ್ಲಿ ಉಳಿದುಕೊಂಡು ತೊಂದರೆ ಅನುಭವಿಸುತ್ತಾರೆ.<br /> <br /> ರೈಲಿನಲ್ಲಿ ಬರುವ ಭಕ್ತರು ಈ ಮೂಲಕ ಕ್ಷೇತ್ರ ತಲುಪಬೇಕು. ಹಾಗಾಗೀ ಇವರಿಗೂ ಬರಲು ತೆರಳಲು ಕಷ್ಟವಾಗುತ್ತದೆ. ನೆಟ್ಟಣ, ಮರ್ಧಾಳ, ಇಚಿಲಂಪಾಡಿ, ಗುಂಡ್ಯ, ಕಡಬ, ಧರ್ಮಸ್ಥಳ ಮಾರ್ಗವಾಗಿ ಸಂಚರಿಸುವ ಬೆಂಗಳೂರು, ಹಾಸನ, ಮಂಗಳೂರು ಮುಂತಾದ ದೂರದ ಊರಿನವರು ಸೇರದಂತೆ ಎಲ್ಲರೂ ಈ ಮುಳುಗು ಸೇತುವೆಯಿಂದ ತ್ರಾಸ ಪಡಬೇಕಾಗುತ್ತದೆ. ಶಾಲಾ ಕಾಲೇಜುಗಳು ಆರಂಭ ಮತ್ತು ಬಿಡುವ ಸಂದರ್ಭದಲ್ಲಿ ಸೇತುವೆ ಮುಳುಗಡೆಯಾದರೆ ವಿದ್ಯಾರ್ಥಿಗಳು ಮನೆ ತಲುಪಲು ಅನಾನುಕೂಲವಾಗುತ್ತದೆ.<br /> <br /> ಮುಳುಗು ಸೇತುವೆಯನ್ನು ಮೇಲ್ದರ್ಜೆಗೆ ಏರಿಸುವ ಕುರಿತು ಹಲವು ಬಾರಿ ಪ್ರಸ್ತಾಪಗಳು ಕೇಳಿ ಬಂದಿದ್ದರೂ ಕ್ರಮೇಣ ಮೂಲೆ ಸೇರಿವೆ. ಕೆಲಸ ಕಾರ್ಯಗಳು ನಿಧಾನಗತಿಯಿಂದಾಗಿ ನಿರಂತರವಾಗಿ ಮಳೆಗಾಲದ ಸಂಧರ್ಭ ಮುಳುಗಡೆಯಾಗುತ್ತಿರುವ ಈ ಸೇತುವೆಗೆ ಕಾಯಕಲ್ಪ ನೀಡುವಲ್ಲಿ ವಿಳಂಬವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯವನ್ನು ಸಂಪರ್ಕಿಸುವ ಕುಮಾರಧಾರ ಮುಳುಗು ಸೇತುವೆ ಮೇಲ್ದರ್ಜೆಗೆ ಏರಿಸುವ ಕಾರ್ಯ ಈಡೇರಿದ್ದರಿಂದ ಮತ್ತೆ ಇಲ್ಲಿ ಸಮಸ್ಯೆಗಳು ಎದುರಾಗುವ ಆತಂಕ ತಲೆದೋರಿದೆ.<br /> <br /> ಪ್ರಸಿದ್ಧ ಪುಣ್ಯ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯವನ್ನು ಗುಂಡ್ಯ ಹಾಗೂ ಉಪ್ಪಿನಂಗಡಿ ಮಾರ್ಗವಾಗಿ ಸಂಪರ್ಕಿಸುವ ರಸ್ತೆಯ ಮಧ್ಯೆ ಎದುರಾಗುವ ಕುಮಾರಧಾರಾ ಸೇತುವೆ ಬಹಳ ಹಿಂದೆಯೇ ನಿರ್ಮಾಣಗೊಂಡಿತ್ತು. ಹಳೆಯದಾದ ಈ ಸೇತುವೆ ಮಳೆಗಾಲದಲ್ಲಿ ಆಗಾಗ ಮುಳುಗಡೆಯಾಗುತ್ತಿದೆ. ಮಳೆಗಾಲದಲ್ಲಿ ಘಟ್ಟ ಪ್ರದೇಶದಿಂದ ಭಾರಿ ಮಳೆಯ ಪರಿಣಾಮ ಈ ನದಿ ಉಕ್ಕಿ ಹರಿಯುತ್ತದೆ. ತಗ್ಗಿನಲ್ಲಿರುವ ಈ ಸೇತುವೆಯೂ ಮುಳುಗಡೆಯಾಗುತ್ತದೆ.<br /> <br /> ಇದರಿಂದ ಕ್ಷೇತ್ರಕ್ಕೆ ಬರುವ ದೂರ ದೂರದ ಯಾತ್ರಾರ್ಥಿಗಳು ಸೇರದಂತೆ ಜನಸಾಮಾನ್ಯರು ಶಾಲಾ ಮಕ್ಕಳು ತೀವ್ರ ತೊಂದರೆಗೆ ಸಿಲುಕುತ್ತಾರೆ. ವರ್ಷದಲ್ಲಿ ಹತ್ತಾರು ಭಾರಿ ಮುಳುಗುವ ಈ ಸೇತುವೆ ಮುಳುಗಡೆಯಾದಾಗ ಕೆಲವೊಮ್ಮೆ ಎರಡರಿಂದ ಮೂರು ದಿನಗಳ ಕಾಲ ಸಂಪರ್ಕ ಕಡಿತಗೊಂಡು ಜನಜೀವನ ಅಸ್ತವ್ಯಸ್ತವಾಗುತ್ತದೆ.<br /> <br /> ಪ್ರಯಾಣಿಕರು ರಸ್ತೆಯ ಇಕ್ಕೆಲಗಳಲ್ಲಿ ತಾಸುಗಟ್ಟಲೆ ಕಾಯುವುದಲ್ಲದೆ, ಕ್ಷೇತ್ರವಿಡೀ ಸಂಪರ್ಕವನ್ನೇ ಕಡಿದುಕೊಂಡು ಬಿಡುತ್ತದೆ. ಹೊರಗಿನಿಂದ ಬರುವ ಭಕ್ತರು 2 ಬದಿಗಳಲ್ಲಿ ಉಳಿದುಕೊಂಡು ತೊಂದರೆ ಅನುಭವಿಸುತ್ತಾರೆ.<br /> <br /> ರೈಲಿನಲ್ಲಿ ಬರುವ ಭಕ್ತರು ಈ ಮೂಲಕ ಕ್ಷೇತ್ರ ತಲುಪಬೇಕು. ಹಾಗಾಗೀ ಇವರಿಗೂ ಬರಲು ತೆರಳಲು ಕಷ್ಟವಾಗುತ್ತದೆ. ನೆಟ್ಟಣ, ಮರ್ಧಾಳ, ಇಚಿಲಂಪಾಡಿ, ಗುಂಡ್ಯ, ಕಡಬ, ಧರ್ಮಸ್ಥಳ ಮಾರ್ಗವಾಗಿ ಸಂಚರಿಸುವ ಬೆಂಗಳೂರು, ಹಾಸನ, ಮಂಗಳೂರು ಮುಂತಾದ ದೂರದ ಊರಿನವರು ಸೇರದಂತೆ ಎಲ್ಲರೂ ಈ ಮುಳುಗು ಸೇತುವೆಯಿಂದ ತ್ರಾಸ ಪಡಬೇಕಾಗುತ್ತದೆ. ಶಾಲಾ ಕಾಲೇಜುಗಳು ಆರಂಭ ಮತ್ತು ಬಿಡುವ ಸಂದರ್ಭದಲ್ಲಿ ಸೇತುವೆ ಮುಳುಗಡೆಯಾದರೆ ವಿದ್ಯಾರ್ಥಿಗಳು ಮನೆ ತಲುಪಲು ಅನಾನುಕೂಲವಾಗುತ್ತದೆ.<br /> <br /> ಮುಳುಗು ಸೇತುವೆಯನ್ನು ಮೇಲ್ದರ್ಜೆಗೆ ಏರಿಸುವ ಕುರಿತು ಹಲವು ಬಾರಿ ಪ್ರಸ್ತಾಪಗಳು ಕೇಳಿ ಬಂದಿದ್ದರೂ ಕ್ರಮೇಣ ಮೂಲೆ ಸೇರಿವೆ. ಕೆಲಸ ಕಾರ್ಯಗಳು ನಿಧಾನಗತಿಯಿಂದಾಗಿ ನಿರಂತರವಾಗಿ ಮಳೆಗಾಲದ ಸಂಧರ್ಭ ಮುಳುಗಡೆಯಾಗುತ್ತಿರುವ ಈ ಸೇತುವೆಗೆ ಕಾಯಕಲ್ಪ ನೀಡುವಲ್ಲಿ ವಿಳಂಬವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>