<p><strong>ಮಂಗಳೂರು: </strong>ನಗರಕ್ಕೆ ನೀರು ಪೂರೈ ಸುವ ತುಂಬೆ ಕಿಂಡಿ ಅಣೆಕಟ್ಟೆಯ ಸಿವಿಲ್ ಕಾಮಗಾರಿ ಪೂರ್ಣಗೊಂಡಿದ್ದು, ವಿದ್ಯು ತ್ ಸಂಪರ್ಕ ಹಾಗೂ ಬಣ್ಣ ಬಳಿಯುವ ಕಾಮಗಾರಿ ಮಾತ್ರ ಬಾಕಿ ಇದೆ. ಮಳೆ ಗಾಲದ ನಂತರ ಈ ಕಾಮಗಾರಿ ಪೂರ್ಣಗೊಳಿಸುವುದಾಗಿ ನಗರಾಭಿವೃದ್ಧಿ ಸಚಿವ ಆರ್. ರೋಷನ್ ಬೇಗ್ ಹೇಳಿದರು.<br /> <br /> ಗುರುವಾರ ತುಂಬೆ ಅಣೆಕಟ್ಟೆಗೆ ಭೇಟಿ ನೀಡಿ, ಪರಿಶೀಲಿಸಿದ ನಂತರ ನಗರದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾ ಡಿದರು. ಮಂಗಳೂರು ನಗರಕ್ಕೆ ಅಗತ್ಯ ಪ್ರಮಾಣದ ನೀರಿಗಾಗಿ ಲಕ್ಯಾ ಜಲಾಶ ಯವನ್ನು ಅವಲಂಬಿಸಬೇಕಾ ಗಿದೆ. ಈ ಹಿನ್ನೆಲೆಯಲ್ಲಿ ಕುಡಿಯುವ ನೀರಿ ಗಾಗಿ ಅವಕಾಶ ನೀಡುವಂತೆ ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಲು, ಮಹಾ ನಗರ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.<br /> <br /> ಲಕ್ಯಾ ಜಲಾಶಯದ ನೀರನ್ನು ಸುರ ತ್ಕಲ್ ಭಾಗಕ್ಕೆ ಪೂರೈಕೆ ಮಾಡಲಾಗು ತ್ತಿದೆ. ಇದರಿಂದ ನೀರಿನ ಸಮಸ್ಯೆಗೆ ದೊಡ್ಡ ಪರಿಹಾರ ಸಿಕ್ಕಂತಾಗಿದೆ. ಈ ನಿಟ್ಟಿನಲ್ಲಿ ಪಾಲಿಕೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ ಎಂದರು.<br /> <br /> ಪೌರ ಕಾರ್ಮಿಕರಿಗಾಗಿ ರಾಜೀವ್ ಗಾಂಧಿ ವಸತಿ ನಿಗಮದಿಂದ ನಗರದ ಕುಲಶೇಖರದಲ್ಲಿ ವಸತಿ ಗೃಹಗಳನ್ನು ನಿರ್ಮಿಸಲಾಗುತ್ತಿದೆ. ಈಗಾಗಲೇ ಅಂ ದಾಜು ವೆಚ್ಚ, ಕ್ರಿಯಾ ಯೋಜನೆ ಸಿದ್ಧಪ ಡಿಸಲಾಗಿದ್ದು, ಮೂರು ಮಹಡಿಯ ಕಟ್ಟಡಗಳ ನಿರ್ಮಾಣ ಮಾಡಲಾಗು ವುದು ಎಂದು ತಿಳಿಸಿದರು.<br /> <br /> ಎಡಿಬಿ ಎರಡನೇ ಹಂತದ ಯೋಜ ನೆಯಡಿ ನಿರಂತರ ನೀರಿಗಾಗಿ ಮಂಗ ಳೂರು ನಗರಕ್ಕೆ ಈಗಾಗಲೇ ₹160 ಕೋಟಿ ಮಂಜೂರು ಮಾಡಲಾಗಿದೆ. ಒಳಚರಂಡಿ ಯೋಜನೆಗೂ ₹120 ಕೋಟಿ ನೀಡಲಾಗಿದೆ. ಅಟಲ್ ಮಿಷನ್ ಯೋಜನೆಯಡಿ ₹160 ಕೋಟಿ ಅನು ದಾನ ಮಂಗಳೂರಿಗೆ ಮಂಜೂರಾಗಿದ್ದು, ಇದರಲ್ಲಿ ₹154 ಕೋಟಿಯನ್ನು ಒಳಚ ರಂಡಿ ಯೋಜನೆಗೆ ಬಳಕೆ ಮಾಡಲಾ ಗುವುದು. ಅಲ್ಲದೇ ಮಳೆ ನೀರು ಹರಿದು ಹೋಗಲು ಚರಂಡಿ ನಿರ್ಮಾಣಕ್ಕೆ ₹4 ಕೋಟಿ ನೀಡಲಾಗಿದ್ದು, ಉದ್ಯಾನಗಳ ಅಭಿವೃದ್ಧಿಗೆ ₹2ಕೋಟಿ ಮಂಜೂರು ಮಾಡಲಾಗಿದೆ ಎಂದು ವಿವರಿಸಿದರು.<br /> <br /> ವಸತಿಗೃಹ ನಿರ್ಮಾಣಕ್ಕೆ ಶಿಲಾನ್ಯಾಸ: ಗೃಹಭಾಗ್ಯ ಯೋಜನೆಯಡಿ ಪೌರ ಕಾರ್ಮಿಕರಿಗೆ ಮಹಾಕಾಳಿಪಡ್ಪು (₹2. 40 ಕೋಟಿ), ಬಿ.ವಿ. ರೋಡ್ (₹1.80 ಕೋಟಿ), ಗಣಪತಿ ಹೈಸ್ಕೂಲ್ ರೋಡ್ (₹1.50 ಕೋಟಿ)ಗಳಲ್ಲಿ ನಿರ್ಮಿಸಲಾಗು ತ್ತಿರುವ ವಸತಿ ಗೃಹಗಳಿಗೆ ಸಚಿವ ರೋಷನ್ ಬೇಗ್ ಶಿಲಾನ್ಯಾಸ ನೆರವೇರಿಸಿದರು.<br /> <br /> ಮಹಾಕಾಳಿಪಡ್ಪು ಬಳಿ 8 ಮಹಡಿಯ ಕಟ್ಟಡ ನಿರ್ಮಿಸಲಾಗು ತ್ತಿದ್ದು, 10 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿ ಸಿರುವ 32 ಕಾಯಂ ಪೌರಕಾರ್ಮಿಕರಿಗೆ ಈ ಮನೆಗಳನ್ನು ಹಂಚಿಕೆ ಮಾಡಲಾಗಿದೆ. 400 ಚದರ ಅಡಿ ವಿಸ್ತಾರದ ಮನೆ ಇದಾಗಿದ್ದು, ವೆಚ್ಚದ ಶೇ 20 (₹1.5 ಲಕ್ಷ) ರಷ್ಟನ್ನು ಫಲಾನುಭವಿಗಳು ಭರಿಸಬೇಕಾಗಿದೆ.<br /> <br /> ಶಾಸಕರಾದ ಜೆ.ಆರ್. ಲೋಬೊ, ಬಿ.ಎ. ಮೊಯಿದ್ದೀನ್ ಬಾವ, ಮೇಯರ್ ಹರಿನಾಥ, ಉಪಮೇಯರ್ ಸುಮಿತ್ರ ಕೆ, ಪ್ರತಿಪಕ್ಷದ ನಾಯಕಿ ರೂಪಾ ಡಿ. ಬಂ ಗೇರ, ಪಾಲಿಕೆ ಸದಸ್ಯರಾದ ಎಂ. ಶಶಿ ಧರ್ ಹೆಗ್ಡೆ, ಶೈಲಜಾ, ಆಯುಕ್ತ ಮುಹ ಮ್ಮದ್ ನಜೀರ್ ಹಾಜರಿದ್ದರು.<br /> <br /> <strong>ಪ್ರತಿಭಟನೆಯ ಬಿಸಿ</strong><br /> ಗೃಹ ಭಾಗ್ಯ ಯೋಜನೆಯಡಿ ಪೌರ ಕಾರ್ಮಿಕರಿಗೆ ಅನ್ಯಾಯ ಮಾಡಲಾಗಿದೆ. ಕಾಯಂ ಹಾಗೂ ನಿವೃತ್ತಿ ಹೊಂದಿದ ಪೌರಕಾರ್ಮಿಕರನ್ನು ಕಡೆಗಣಿಸಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಪೌರ ಕಾರ್ಮಿಕರ ಕುಟುಂಬದ ಸದಸ್ಯರು ಪ್ರತಿಭಟನೆ ನಡೆಸಿದರು.</p>.<p>ಮಹಾಕಾಳಿಪಡ್ಪು ಬಳಿ ಗೃಹಭಾಗ್ಯ ಯೋಜನೆಯ ಶಿಲಾನ್ಯಾಸ ನೆರವೇರಿಸಿದ ನಂತರ ಸಚಿವ ರೋಷನ್ ಬೇಗ್ ಅವರಿಗೆ ಮನವಿ ಸಲ್ಲಿಸಿದ ಕುಟುಂಬದ ಸದಸ್ಯರು, ಅನ್ಯಾಯವನ್ನು ಸರಿಪಡಿಸುವಂತೆ ಆಗ್ರಹಿಸಿದರು. ಮನವಿ ಸ್ವೀಕರಿಸಿದ ಸಚಿವ ಬೇಗ್, ಆದಷ್ಟು ಶೀಘ್ರ ಈ ಕುರಿತು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು: </strong>ನಗರಕ್ಕೆ ನೀರು ಪೂರೈ ಸುವ ತುಂಬೆ ಕಿಂಡಿ ಅಣೆಕಟ್ಟೆಯ ಸಿವಿಲ್ ಕಾಮಗಾರಿ ಪೂರ್ಣಗೊಂಡಿದ್ದು, ವಿದ್ಯು ತ್ ಸಂಪರ್ಕ ಹಾಗೂ ಬಣ್ಣ ಬಳಿಯುವ ಕಾಮಗಾರಿ ಮಾತ್ರ ಬಾಕಿ ಇದೆ. ಮಳೆ ಗಾಲದ ನಂತರ ಈ ಕಾಮಗಾರಿ ಪೂರ್ಣಗೊಳಿಸುವುದಾಗಿ ನಗರಾಭಿವೃದ್ಧಿ ಸಚಿವ ಆರ್. ರೋಷನ್ ಬೇಗ್ ಹೇಳಿದರು.<br /> <br /> ಗುರುವಾರ ತುಂಬೆ ಅಣೆಕಟ್ಟೆಗೆ ಭೇಟಿ ನೀಡಿ, ಪರಿಶೀಲಿಸಿದ ನಂತರ ನಗರದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾ ಡಿದರು. ಮಂಗಳೂರು ನಗರಕ್ಕೆ ಅಗತ್ಯ ಪ್ರಮಾಣದ ನೀರಿಗಾಗಿ ಲಕ್ಯಾ ಜಲಾಶ ಯವನ್ನು ಅವಲಂಬಿಸಬೇಕಾ ಗಿದೆ. ಈ ಹಿನ್ನೆಲೆಯಲ್ಲಿ ಕುಡಿಯುವ ನೀರಿ ಗಾಗಿ ಅವಕಾಶ ನೀಡುವಂತೆ ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಲು, ಮಹಾ ನಗರ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.<br /> <br /> ಲಕ್ಯಾ ಜಲಾಶಯದ ನೀರನ್ನು ಸುರ ತ್ಕಲ್ ಭಾಗಕ್ಕೆ ಪೂರೈಕೆ ಮಾಡಲಾಗು ತ್ತಿದೆ. ಇದರಿಂದ ನೀರಿನ ಸಮಸ್ಯೆಗೆ ದೊಡ್ಡ ಪರಿಹಾರ ಸಿಕ್ಕಂತಾಗಿದೆ. ಈ ನಿಟ್ಟಿನಲ್ಲಿ ಪಾಲಿಕೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ ಎಂದರು.<br /> <br /> ಪೌರ ಕಾರ್ಮಿಕರಿಗಾಗಿ ರಾಜೀವ್ ಗಾಂಧಿ ವಸತಿ ನಿಗಮದಿಂದ ನಗರದ ಕುಲಶೇಖರದಲ್ಲಿ ವಸತಿ ಗೃಹಗಳನ್ನು ನಿರ್ಮಿಸಲಾಗುತ್ತಿದೆ. ಈಗಾಗಲೇ ಅಂ ದಾಜು ವೆಚ್ಚ, ಕ್ರಿಯಾ ಯೋಜನೆ ಸಿದ್ಧಪ ಡಿಸಲಾಗಿದ್ದು, ಮೂರು ಮಹಡಿಯ ಕಟ್ಟಡಗಳ ನಿರ್ಮಾಣ ಮಾಡಲಾಗು ವುದು ಎಂದು ತಿಳಿಸಿದರು.<br /> <br /> ಎಡಿಬಿ ಎರಡನೇ ಹಂತದ ಯೋಜ ನೆಯಡಿ ನಿರಂತರ ನೀರಿಗಾಗಿ ಮಂಗ ಳೂರು ನಗರಕ್ಕೆ ಈಗಾಗಲೇ ₹160 ಕೋಟಿ ಮಂಜೂರು ಮಾಡಲಾಗಿದೆ. ಒಳಚರಂಡಿ ಯೋಜನೆಗೂ ₹120 ಕೋಟಿ ನೀಡಲಾಗಿದೆ. ಅಟಲ್ ಮಿಷನ್ ಯೋಜನೆಯಡಿ ₹160 ಕೋಟಿ ಅನು ದಾನ ಮಂಗಳೂರಿಗೆ ಮಂಜೂರಾಗಿದ್ದು, ಇದರಲ್ಲಿ ₹154 ಕೋಟಿಯನ್ನು ಒಳಚ ರಂಡಿ ಯೋಜನೆಗೆ ಬಳಕೆ ಮಾಡಲಾ ಗುವುದು. ಅಲ್ಲದೇ ಮಳೆ ನೀರು ಹರಿದು ಹೋಗಲು ಚರಂಡಿ ನಿರ್ಮಾಣಕ್ಕೆ ₹4 ಕೋಟಿ ನೀಡಲಾಗಿದ್ದು, ಉದ್ಯಾನಗಳ ಅಭಿವೃದ್ಧಿಗೆ ₹2ಕೋಟಿ ಮಂಜೂರು ಮಾಡಲಾಗಿದೆ ಎಂದು ವಿವರಿಸಿದರು.<br /> <br /> ವಸತಿಗೃಹ ನಿರ್ಮಾಣಕ್ಕೆ ಶಿಲಾನ್ಯಾಸ: ಗೃಹಭಾಗ್ಯ ಯೋಜನೆಯಡಿ ಪೌರ ಕಾರ್ಮಿಕರಿಗೆ ಮಹಾಕಾಳಿಪಡ್ಪು (₹2. 40 ಕೋಟಿ), ಬಿ.ವಿ. ರೋಡ್ (₹1.80 ಕೋಟಿ), ಗಣಪತಿ ಹೈಸ್ಕೂಲ್ ರೋಡ್ (₹1.50 ಕೋಟಿ)ಗಳಲ್ಲಿ ನಿರ್ಮಿಸಲಾಗು ತ್ತಿರುವ ವಸತಿ ಗೃಹಗಳಿಗೆ ಸಚಿವ ರೋಷನ್ ಬೇಗ್ ಶಿಲಾನ್ಯಾಸ ನೆರವೇರಿಸಿದರು.<br /> <br /> ಮಹಾಕಾಳಿಪಡ್ಪು ಬಳಿ 8 ಮಹಡಿಯ ಕಟ್ಟಡ ನಿರ್ಮಿಸಲಾಗು ತ್ತಿದ್ದು, 10 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿ ಸಿರುವ 32 ಕಾಯಂ ಪೌರಕಾರ್ಮಿಕರಿಗೆ ಈ ಮನೆಗಳನ್ನು ಹಂಚಿಕೆ ಮಾಡಲಾಗಿದೆ. 400 ಚದರ ಅಡಿ ವಿಸ್ತಾರದ ಮನೆ ಇದಾಗಿದ್ದು, ವೆಚ್ಚದ ಶೇ 20 (₹1.5 ಲಕ್ಷ) ರಷ್ಟನ್ನು ಫಲಾನುಭವಿಗಳು ಭರಿಸಬೇಕಾಗಿದೆ.<br /> <br /> ಶಾಸಕರಾದ ಜೆ.ಆರ್. ಲೋಬೊ, ಬಿ.ಎ. ಮೊಯಿದ್ದೀನ್ ಬಾವ, ಮೇಯರ್ ಹರಿನಾಥ, ಉಪಮೇಯರ್ ಸುಮಿತ್ರ ಕೆ, ಪ್ರತಿಪಕ್ಷದ ನಾಯಕಿ ರೂಪಾ ಡಿ. ಬಂ ಗೇರ, ಪಾಲಿಕೆ ಸದಸ್ಯರಾದ ಎಂ. ಶಶಿ ಧರ್ ಹೆಗ್ಡೆ, ಶೈಲಜಾ, ಆಯುಕ್ತ ಮುಹ ಮ್ಮದ್ ನಜೀರ್ ಹಾಜರಿದ್ದರು.<br /> <br /> <strong>ಪ್ರತಿಭಟನೆಯ ಬಿಸಿ</strong><br /> ಗೃಹ ಭಾಗ್ಯ ಯೋಜನೆಯಡಿ ಪೌರ ಕಾರ್ಮಿಕರಿಗೆ ಅನ್ಯಾಯ ಮಾಡಲಾಗಿದೆ. ಕಾಯಂ ಹಾಗೂ ನಿವೃತ್ತಿ ಹೊಂದಿದ ಪೌರಕಾರ್ಮಿಕರನ್ನು ಕಡೆಗಣಿಸಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಪೌರ ಕಾರ್ಮಿಕರ ಕುಟುಂಬದ ಸದಸ್ಯರು ಪ್ರತಿಭಟನೆ ನಡೆಸಿದರು.</p>.<p>ಮಹಾಕಾಳಿಪಡ್ಪು ಬಳಿ ಗೃಹಭಾಗ್ಯ ಯೋಜನೆಯ ಶಿಲಾನ್ಯಾಸ ನೆರವೇರಿಸಿದ ನಂತರ ಸಚಿವ ರೋಷನ್ ಬೇಗ್ ಅವರಿಗೆ ಮನವಿ ಸಲ್ಲಿಸಿದ ಕುಟುಂಬದ ಸದಸ್ಯರು, ಅನ್ಯಾಯವನ್ನು ಸರಿಪಡಿಸುವಂತೆ ಆಗ್ರಹಿಸಿದರು. ಮನವಿ ಸ್ವೀಕರಿಸಿದ ಸಚಿವ ಬೇಗ್, ಆದಷ್ಟು ಶೀಘ್ರ ಈ ಕುರಿತು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>