<p><strong>ಮೂಡುಬಿದಿರೆ: </strong>ರಾಮಾಯಣವು ಒಂದು ದುರಂತ ಪ್ರೇಮ ಕತೆ ಹಾಗೂ ಕೌಟುಂಬಿಕ ಕಲಹದ ಕತೆಯೂ ಆಗಿರುವುದರಿಂದಲೇ ಅದು ಜನಪ್ರಿಯವಾಗಲು ಕಾರಣವಾಯಿತು. ಈ ರಾಮಾಯಣದ ವಸ್ತುವನ್ನಿಟ್ಟುಕೊಂಡೇ ಸ್ತ್ರೀಯೊಬ್ಬಳು ಅಧ್ಯಯನ ಹಾಗೂ ಪ್ರಯೋಗಾತ್ಮಕವಾಗಿ ಅದನ್ನು ಹೇಗೆ ಭಿನ್ನವಾಗಿ ನಿರ್ವಹಿಸಬಹುದೆಂಬುದಕ್ಕೆ ಎಚ್.ವಿ.ಸಾವಿತ್ರಮ್ಮನವರ 'ಸೀತೆ ರಾಮ ರಾವಣ' ಕಾದಂಬರಿ ಮಾದರಿಯಾಗುತ್ತದೆ ಎಂದು ಹಿರಿಯ ಸಾಹಿತಿ ಬಿ.ಎಂ.ರೋಹಿಣಿ ಹೇಳಿದರು. <br /> <br /> ಕಾಂತಾವರ ಕನ್ನಡ ಸಂಘದಲ್ಲಿ ಭಾನುವಾರ ಕನ್ನಡದ ಮರೆಯಬಾರದ ಕಾದಂಬರಿಗಳ ಮರು ಓದು ಕಾರ್ಯಕ್ರಮದಲ್ಲಿ ಎಚ್.ವಿ.ಸಾವಿತ್ರಮ್ಮನವರ 'ಸೀತೆ - ರಾಮ - ರಾವಣ' ಕಾದಂಬರಿ ಬಗ್ಗೆ ಅವರು ಮಾತನಾಡಿದರು.<br /> <br /> ತನ್ನ ಮಧ್ಯವಯಸ್ಸಿನ ನಂತರ ಲೇಖನಿ ಹಿಡಿದ ಸಾವಿತ್ರಮ್ಮನವರು ಪ್ರಾರಂಭದಲ್ಲಿ ಅನುವಾದ ಸಾಹಿತ್ಯದಲ್ಲಿ ತೊಡಗಿಕೊಂಡು ಅನೇಕ ಆಂಗ್ಲ ಗ್ರಂಥಗಳನ್ನು ಕನ್ನಡಕ್ಕೆ ಅನುವಾದಿಸಿದರು. ನಂತರ ಸ್ವತಂತ್ರವಾಗಿ ಕನ್ನಡದಲ್ಲಿ ಕಥೆ ಕಾದಂಬರಿಗಳನ್ನು ಬರೆಯಲು ಪ್ರಾರಂಭಿಸಿದರು. ಹೀಗೆ 1980ರಲ್ಲಿ ಪ್ರಕಟಗೊಂಡ ಅವರ ವಿಶಿಷ್ಟ ಕಾದಂಬರಿಯೇ 'ಸೀತೆ - ರಾಮ - ರಾವಣ'. ರಾಮಾಯಣದ ವಸ್ತುವನ್ನು ತೆಗೆದುಕೊಂಡು ಅಲ್ಲಿನ ಪ್ರತಿಯೊಂದು ಪಾತ್ರಕ್ಕೂ ತನ್ನದೇ ಆದ ಒಂದು ವ್ಯಕ್ತಿತ್ವವನ್ನು ನೀಡುತ್ತಾ ಅದನ್ನು ರೂಪಿಸಿದ ರೀತಿ ಅದ್ಭುತವಾಗಿತ್ತು. ಹೆಣ್ಣನ್ನು ಆರಾಧಿಸುವುದಕ್ಕಿಂತ ಪ್ರೀತಿ ಮಾಡುವವರು ಬೇಕು ಅನ್ನುವ ಸಂದೇಶವನ್ನೂ ಸೂಕ್ಷ್ಮವಾಗಿ ಈ ಕಾದಂಬರಿಯಲ್ಲಿ ಕಾಣಬಹುದಾಗಿದೆ ಎಂದರು.<br /> <br /> ದುಷ್ಟ ಪಾತ್ರಗಳನ್ನೂ ಇಲ್ಲಿ ಉದಾತ್ತೀಕರಣಗೊಳಿಸಿ ಪ್ರತಿಯೊಂದು ಸ್ತ್ರೀಪುರುಷ ಪಾತ್ರಗಳನ್ನೂ ಸಂಯಮದಿಂದ ಸಂಸ್ಕಾರಯುಕ್ತ ಮಾತುಗಳಿಂದ ಬೆಳೆಸಿದ್ದಾರೆ. ಇಡೀ ರಾಮಾಯಣದ ಕಥೆಯನ್ನು ಒಂದು ಮಹಿಳಾಪರ ಕಥೆಯಾಗಿ ಈ ಕಾದಂಬರಿಯನ್ನು ರಚಿಸಿರುವುದರಿಂದ ಮಹಿಳಾವಾದಿ ಅಧ್ಯಯನದ ದೃಷ್ಟಿಯಿಂದ ಈ ಕಾದಂಬರಿ ಮಹತ್ವದ್ದಾಗಿದೆ ಎಂದರು.<br /> <br /> ಸಿ.ಕೆ.ಪಡಿವಾಳ್ ವೇದಿಕೆಯಲ್ಲಿದ್ದರು. ಡಾ. ನಾ ಮೊಗಸಾಲೆ ಸ್ವಾಗತಿಸಿದರು. ಬಾಬು ಶೆಟ್ಟಿ ನಾರಾವಿ ನಿರೂಪಿಸಿದರು. ಸದಾನಂದ ನಾರಾವಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೂಡುಬಿದಿರೆ: </strong>ರಾಮಾಯಣವು ಒಂದು ದುರಂತ ಪ್ರೇಮ ಕತೆ ಹಾಗೂ ಕೌಟುಂಬಿಕ ಕಲಹದ ಕತೆಯೂ ಆಗಿರುವುದರಿಂದಲೇ ಅದು ಜನಪ್ರಿಯವಾಗಲು ಕಾರಣವಾಯಿತು. ಈ ರಾಮಾಯಣದ ವಸ್ತುವನ್ನಿಟ್ಟುಕೊಂಡೇ ಸ್ತ್ರೀಯೊಬ್ಬಳು ಅಧ್ಯಯನ ಹಾಗೂ ಪ್ರಯೋಗಾತ್ಮಕವಾಗಿ ಅದನ್ನು ಹೇಗೆ ಭಿನ್ನವಾಗಿ ನಿರ್ವಹಿಸಬಹುದೆಂಬುದಕ್ಕೆ ಎಚ್.ವಿ.ಸಾವಿತ್ರಮ್ಮನವರ 'ಸೀತೆ ರಾಮ ರಾವಣ' ಕಾದಂಬರಿ ಮಾದರಿಯಾಗುತ್ತದೆ ಎಂದು ಹಿರಿಯ ಸಾಹಿತಿ ಬಿ.ಎಂ.ರೋಹಿಣಿ ಹೇಳಿದರು. <br /> <br /> ಕಾಂತಾವರ ಕನ್ನಡ ಸಂಘದಲ್ಲಿ ಭಾನುವಾರ ಕನ್ನಡದ ಮರೆಯಬಾರದ ಕಾದಂಬರಿಗಳ ಮರು ಓದು ಕಾರ್ಯಕ್ರಮದಲ್ಲಿ ಎಚ್.ವಿ.ಸಾವಿತ್ರಮ್ಮನವರ 'ಸೀತೆ - ರಾಮ - ರಾವಣ' ಕಾದಂಬರಿ ಬಗ್ಗೆ ಅವರು ಮಾತನಾಡಿದರು.<br /> <br /> ತನ್ನ ಮಧ್ಯವಯಸ್ಸಿನ ನಂತರ ಲೇಖನಿ ಹಿಡಿದ ಸಾವಿತ್ರಮ್ಮನವರು ಪ್ರಾರಂಭದಲ್ಲಿ ಅನುವಾದ ಸಾಹಿತ್ಯದಲ್ಲಿ ತೊಡಗಿಕೊಂಡು ಅನೇಕ ಆಂಗ್ಲ ಗ್ರಂಥಗಳನ್ನು ಕನ್ನಡಕ್ಕೆ ಅನುವಾದಿಸಿದರು. ನಂತರ ಸ್ವತಂತ್ರವಾಗಿ ಕನ್ನಡದಲ್ಲಿ ಕಥೆ ಕಾದಂಬರಿಗಳನ್ನು ಬರೆಯಲು ಪ್ರಾರಂಭಿಸಿದರು. ಹೀಗೆ 1980ರಲ್ಲಿ ಪ್ರಕಟಗೊಂಡ ಅವರ ವಿಶಿಷ್ಟ ಕಾದಂಬರಿಯೇ 'ಸೀತೆ - ರಾಮ - ರಾವಣ'. ರಾಮಾಯಣದ ವಸ್ತುವನ್ನು ತೆಗೆದುಕೊಂಡು ಅಲ್ಲಿನ ಪ್ರತಿಯೊಂದು ಪಾತ್ರಕ್ಕೂ ತನ್ನದೇ ಆದ ಒಂದು ವ್ಯಕ್ತಿತ್ವವನ್ನು ನೀಡುತ್ತಾ ಅದನ್ನು ರೂಪಿಸಿದ ರೀತಿ ಅದ್ಭುತವಾಗಿತ್ತು. ಹೆಣ್ಣನ್ನು ಆರಾಧಿಸುವುದಕ್ಕಿಂತ ಪ್ರೀತಿ ಮಾಡುವವರು ಬೇಕು ಅನ್ನುವ ಸಂದೇಶವನ್ನೂ ಸೂಕ್ಷ್ಮವಾಗಿ ಈ ಕಾದಂಬರಿಯಲ್ಲಿ ಕಾಣಬಹುದಾಗಿದೆ ಎಂದರು.<br /> <br /> ದುಷ್ಟ ಪಾತ್ರಗಳನ್ನೂ ಇಲ್ಲಿ ಉದಾತ್ತೀಕರಣಗೊಳಿಸಿ ಪ್ರತಿಯೊಂದು ಸ್ತ್ರೀಪುರುಷ ಪಾತ್ರಗಳನ್ನೂ ಸಂಯಮದಿಂದ ಸಂಸ್ಕಾರಯುಕ್ತ ಮಾತುಗಳಿಂದ ಬೆಳೆಸಿದ್ದಾರೆ. ಇಡೀ ರಾಮಾಯಣದ ಕಥೆಯನ್ನು ಒಂದು ಮಹಿಳಾಪರ ಕಥೆಯಾಗಿ ಈ ಕಾದಂಬರಿಯನ್ನು ರಚಿಸಿರುವುದರಿಂದ ಮಹಿಳಾವಾದಿ ಅಧ್ಯಯನದ ದೃಷ್ಟಿಯಿಂದ ಈ ಕಾದಂಬರಿ ಮಹತ್ವದ್ದಾಗಿದೆ ಎಂದರು.<br /> <br /> ಸಿ.ಕೆ.ಪಡಿವಾಳ್ ವೇದಿಕೆಯಲ್ಲಿದ್ದರು. ಡಾ. ನಾ ಮೊಗಸಾಲೆ ಸ್ವಾಗತಿಸಿದರು. ಬಾಬು ಶೆಟ್ಟಿ ನಾರಾವಿ ನಿರೂಪಿಸಿದರು. ಸದಾನಂದ ನಾರಾವಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>