<p><strong>ದಾವಣಗೆರೆ:</strong> ಕನಸಿದ್ದರೆ, ಕನಸನ್ನು ನನಸು ಮಾಡಬೇಕು ಎಂಬ ಛಲ ಇದ್ದರೆ ಚಿಂದಿ ಆಯುವವ ಕೂಡ ಜಿಲ್ಲಾಧಿಕಾರಿ ಆಗಬಹುದು ಎಂಬ ಉತ್ತಮ ಸಂದೇಶವನ್ನು ‘ಪಾರು’ ಚಿತ್ರ ಸಾರುತ್ತದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.</p>.<p>ಇಲ್ಲಿನ ಪದ್ಮಾಂಜಲಿ ಚಿತ್ರಮಂದಿರದಲ್ಲಿ ಶನಿವಾರ ‘ಪಾರು’ ಮಕ್ಕಳ ಚಿತ್ರ ವೀಕ್ಷಿಸಿದ ಬಳಿಕ ಸಂವಾದದಲ್ಲಿ ಅವರು ಮಾತನಾಡಿದರು.</p>.<p>‘ಐದು ವರ್ಷಗಳ ಬಳಿಕ ಚಿತ್ರಮಂದಿರದೊಳಗೆ ಬಂದು ಸಿನಿಮಾ ನೋಡಿದೆ. ನಾನು ಕೂಡ ಇದೇ ರೀತಿ ಕಷ್ಟಪಟ್ಟು ಮೇಲೆ ಬಂದವನು. ಕನಸು ಕಾಣುವುದಕ್ಕೆ ಯಾವುದೇ ಮೀಸಲಾತಿ ಇಲ್ಲ. ರೊಕ್ಕ ಕೊಡಬೇಕಿಲ್ಲ. ಮಕ್ಕಳಲ್ಲಿ ಕನಸು ಬಿತ್ತುವ ಕಾರ್ಯ ಮಾಡಬೇಕು’ ಎಂದು ತಿಳಿಸಿದರು.</p>.<p>‘ಸರ್ಕಾರಿ ಶಾಲೆಗಳಲ್ಲಿ ಕನಸು ಬಿತ್ತುವ, ರಾಷ್ಟ್ರ ಕಟ್ಟುವ ಕೆಲಸವನ್ನು ಸರ್ಕಾರಿ ಶಾಲೆಗಳಲ್ಲಿ ನಾವು ಮಾಡುತ್ತಿದ್ದೇವೆ. ಈ ಚಿತ್ರ ಕೂಡ ಅಂಥದ್ದೆ ಕೆಲಸ ಮಾಡಿದೆ. ಮಕ್ಕಳು ಬಹಳ ಅದ್ಭುತವಾಗಿ ನಟನೆ ಮಾಡಿದ್ದಾರೆ. ಏನಾದರೂ ಸಾಧನೆ ಮಾಡಬೇಕು ಅನ್ನಿಸಿದರೆ ಈ ಸಮಾಜ ಒಳ್ಳೆಯದಿದೆ. ನಿಮಗೆ ಯಾರಾದರೂ ಸಹಾಯ ಮಾಡೇ ಮಾಡುತ್ತಾರೆ’ ಎಂದು ಹುರಿದುಂಬಿಸಿದರು.</p>.<p>ಶಾಸಕ ಪ್ರೊ. ಎನ್. ಲಿಂಗಣ್ಣ, ‘ಸಮಾಜದಲ್ಲಿ ಬದಲಾವಣೆಯನ್ನು ತರುವ ಇಂಥ ಚಿತ್ರಗಳಿಗೆ ಸರ್ಕಾರ ಪ್ರೋತ್ಸಾಹ ನೀಡಬೇಕು’ ಎಂದು ಆಗ್ರಹಿಸಿದರು. ‘ನಾನು ಬಾಲಕಾರ್ಮಿಕನಾಗಿದ್ದ ದಿನಗಳ ನೋವನ್ನು ಈ ಚಿತ್ರ ನೆನಪಿಸಿತು’ ಎಂದು ರವಿ ನಾರಾಯಣ ತಿಳಿಸಿದರು.</p>.<p>ಲಾಂಗು, ಮಚ್ಚುಗಳಿಲ್ಲದ, ಈ ನೆಲದ ಭಾಷೆಯನ್ನು ಬಳಸಿಕೊಂಡು ಚಿತ್ರ ಮಾಡಿದ್ದಾರೆ ಎಂದು ಹಿರಿಯ ರಂಗಕರ್ಮಿ ಬಾ.ಮ. ಬಸವರಾಜಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲೆಗಳಲ್ಲಿ ತೋರಿಸಬೇಕು ಎಂದು ಪತ್ರಕರ್ತ ಬಿ.ಎನ್. ಮಲ್ಲೇಶ್, ಅನ್ನ ತಿನ್ನುವ ಎಲ್ಲರೂ ನೋಡಬೇಕು ಎಂದು ಉಪನ್ಯಾಸಕ ದಾದಾಪೀರ್ ನವಿಲೇಹಾಳ್ ಸಲಹೆ ನೀಡಿದರು.</p>.<p>ಪಾರು ಪಾತ್ರ ಮಾಡಿದ ಹುಡುಗಿಯ ಶಿಕ್ಷಣದ ವೆಚ್ಚವನ್ನು ಆಕೆ ಕಲಿಯುತ್ತಿರುವ ಶಾಲೆಯವರೇ ಭರಿಸುವುದಾಗಿ ತಿಳಿಸಿದ್ದಾರೆ ಎಂದು ಉದ್ಯಮಿ ವಾಸುದೇವ ರಾಯ್ಕರ್ ಮಾಹಿತಿ ನೀಡಿದರು. ಈ ಚಿತ್ರದಲ್ಲಿ ಅಭಿನಯಿಸಿದ ಮಕ್ಕಳ ಎಸ್ಸೆಸ್ಸೆಲ್ಸಿ ವರೆಗಿನ ವೆಚ್ಚವನ್ನು ನಮ್ಮ ವೇದಿಕೆ ಭರಿಸಲಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ರಾಮೇಗೌಡ ಭರವಸೆ ನೀಡಿದರು.</p>.<p>ಉಪನ್ಯಾಸಕ ಡಾ. ಎಚ್. ವಿಶ್ವನಾಥ್ ₹ 10 ಸಾವಿರವನ್ನು ಈ ಚಿತ್ರದ ನಿರ್ದೇಶಕ ಹನುಮಂತ್ ಪೂಜಾರ್ ಅವರಿಗೆ ಹಸ್ತಾಂತರಿಸಿದರು. ರಂಗಕರ್ಮಿ ಸಿದ್ಧರಾಜು ಕಾರ್ಯಕ್ರಮ ಸಂಯೋಜಿಸಿದ್ದರು. ಬಾಲಕೃಷ್ಣ, ಆನಂದ ಋಗ್ವೇದಿ, ಸುಕನ್ಯಾ ತ್ಯಾವಣಿ, ಚಿದಾನಂದ, ವಿವಿಧ ಸಂಘಟನೆಗಳ ಸದಸ್ಯರು, ಚಿತ್ರದ ಕಲಾವಿದರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ:</strong> ಕನಸಿದ್ದರೆ, ಕನಸನ್ನು ನನಸು ಮಾಡಬೇಕು ಎಂಬ ಛಲ ಇದ್ದರೆ ಚಿಂದಿ ಆಯುವವ ಕೂಡ ಜಿಲ್ಲಾಧಿಕಾರಿ ಆಗಬಹುದು ಎಂಬ ಉತ್ತಮ ಸಂದೇಶವನ್ನು ‘ಪಾರು’ ಚಿತ್ರ ಸಾರುತ್ತದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.</p>.<p>ಇಲ್ಲಿನ ಪದ್ಮಾಂಜಲಿ ಚಿತ್ರಮಂದಿರದಲ್ಲಿ ಶನಿವಾರ ‘ಪಾರು’ ಮಕ್ಕಳ ಚಿತ್ರ ವೀಕ್ಷಿಸಿದ ಬಳಿಕ ಸಂವಾದದಲ್ಲಿ ಅವರು ಮಾತನಾಡಿದರು.</p>.<p>‘ಐದು ವರ್ಷಗಳ ಬಳಿಕ ಚಿತ್ರಮಂದಿರದೊಳಗೆ ಬಂದು ಸಿನಿಮಾ ನೋಡಿದೆ. ನಾನು ಕೂಡ ಇದೇ ರೀತಿ ಕಷ್ಟಪಟ್ಟು ಮೇಲೆ ಬಂದವನು. ಕನಸು ಕಾಣುವುದಕ್ಕೆ ಯಾವುದೇ ಮೀಸಲಾತಿ ಇಲ್ಲ. ರೊಕ್ಕ ಕೊಡಬೇಕಿಲ್ಲ. ಮಕ್ಕಳಲ್ಲಿ ಕನಸು ಬಿತ್ತುವ ಕಾರ್ಯ ಮಾಡಬೇಕು’ ಎಂದು ತಿಳಿಸಿದರು.</p>.<p>‘ಸರ್ಕಾರಿ ಶಾಲೆಗಳಲ್ಲಿ ಕನಸು ಬಿತ್ತುವ, ರಾಷ್ಟ್ರ ಕಟ್ಟುವ ಕೆಲಸವನ್ನು ಸರ್ಕಾರಿ ಶಾಲೆಗಳಲ್ಲಿ ನಾವು ಮಾಡುತ್ತಿದ್ದೇವೆ. ಈ ಚಿತ್ರ ಕೂಡ ಅಂಥದ್ದೆ ಕೆಲಸ ಮಾಡಿದೆ. ಮಕ್ಕಳು ಬಹಳ ಅದ್ಭುತವಾಗಿ ನಟನೆ ಮಾಡಿದ್ದಾರೆ. ಏನಾದರೂ ಸಾಧನೆ ಮಾಡಬೇಕು ಅನ್ನಿಸಿದರೆ ಈ ಸಮಾಜ ಒಳ್ಳೆಯದಿದೆ. ನಿಮಗೆ ಯಾರಾದರೂ ಸಹಾಯ ಮಾಡೇ ಮಾಡುತ್ತಾರೆ’ ಎಂದು ಹುರಿದುಂಬಿಸಿದರು.</p>.<p>ಶಾಸಕ ಪ್ರೊ. ಎನ್. ಲಿಂಗಣ್ಣ, ‘ಸಮಾಜದಲ್ಲಿ ಬದಲಾವಣೆಯನ್ನು ತರುವ ಇಂಥ ಚಿತ್ರಗಳಿಗೆ ಸರ್ಕಾರ ಪ್ರೋತ್ಸಾಹ ನೀಡಬೇಕು’ ಎಂದು ಆಗ್ರಹಿಸಿದರು. ‘ನಾನು ಬಾಲಕಾರ್ಮಿಕನಾಗಿದ್ದ ದಿನಗಳ ನೋವನ್ನು ಈ ಚಿತ್ರ ನೆನಪಿಸಿತು’ ಎಂದು ರವಿ ನಾರಾಯಣ ತಿಳಿಸಿದರು.</p>.<p>ಲಾಂಗು, ಮಚ್ಚುಗಳಿಲ್ಲದ, ಈ ನೆಲದ ಭಾಷೆಯನ್ನು ಬಳಸಿಕೊಂಡು ಚಿತ್ರ ಮಾಡಿದ್ದಾರೆ ಎಂದು ಹಿರಿಯ ರಂಗಕರ್ಮಿ ಬಾ.ಮ. ಬಸವರಾಜಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲೆಗಳಲ್ಲಿ ತೋರಿಸಬೇಕು ಎಂದು ಪತ್ರಕರ್ತ ಬಿ.ಎನ್. ಮಲ್ಲೇಶ್, ಅನ್ನ ತಿನ್ನುವ ಎಲ್ಲರೂ ನೋಡಬೇಕು ಎಂದು ಉಪನ್ಯಾಸಕ ದಾದಾಪೀರ್ ನವಿಲೇಹಾಳ್ ಸಲಹೆ ನೀಡಿದರು.</p>.<p>ಪಾರು ಪಾತ್ರ ಮಾಡಿದ ಹುಡುಗಿಯ ಶಿಕ್ಷಣದ ವೆಚ್ಚವನ್ನು ಆಕೆ ಕಲಿಯುತ್ತಿರುವ ಶಾಲೆಯವರೇ ಭರಿಸುವುದಾಗಿ ತಿಳಿಸಿದ್ದಾರೆ ಎಂದು ಉದ್ಯಮಿ ವಾಸುದೇವ ರಾಯ್ಕರ್ ಮಾಹಿತಿ ನೀಡಿದರು. ಈ ಚಿತ್ರದಲ್ಲಿ ಅಭಿನಯಿಸಿದ ಮಕ್ಕಳ ಎಸ್ಸೆಸ್ಸೆಲ್ಸಿ ವರೆಗಿನ ವೆಚ್ಚವನ್ನು ನಮ್ಮ ವೇದಿಕೆ ಭರಿಸಲಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ರಾಮೇಗೌಡ ಭರವಸೆ ನೀಡಿದರು.</p>.<p>ಉಪನ್ಯಾಸಕ ಡಾ. ಎಚ್. ವಿಶ್ವನಾಥ್ ₹ 10 ಸಾವಿರವನ್ನು ಈ ಚಿತ್ರದ ನಿರ್ದೇಶಕ ಹನುಮಂತ್ ಪೂಜಾರ್ ಅವರಿಗೆ ಹಸ್ತಾಂತರಿಸಿದರು. ರಂಗಕರ್ಮಿ ಸಿದ್ಧರಾಜು ಕಾರ್ಯಕ್ರಮ ಸಂಯೋಜಿಸಿದ್ದರು. ಬಾಲಕೃಷ್ಣ, ಆನಂದ ಋಗ್ವೇದಿ, ಸುಕನ್ಯಾ ತ್ಯಾವಣಿ, ಚಿದಾನಂದ, ವಿವಿಧ ಸಂಘಟನೆಗಳ ಸದಸ್ಯರು, ಚಿತ್ರದ ಕಲಾವಿದರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>