<p><strong>ದಾವಣಗೆರೆ: </strong>ಜಿಲ್ಲೆಯಲ್ಲಿ 209 ಮಂದಿಗೆ ಕೊರೊನಾ ವೈರಸ್ ಸೋಂಕು ಇರುವುದು ಬುಧವಾರ ದೃಢಪಟ್ಟಿದೆ. 15 ವೃದ್ಧರು, ಆರು ಮಂದಿ ವೃದ್ಧೆಯರು, ತಲಾ ಒಬ್ಬ ಬಾಲಕ, ಬಾಲಕಿ ಸೇರಿ85 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.</p>.<p>26 ವೃದ್ಧರು, 15 ವೃದ್ಧೆಯರು, ನಾಲ್ವರು ಬಾಲಕರು, ಒಬ್ಬ ಬಾಲಕಿಗೂ ಕೊರೊನಾ ಬಂದಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸಿಬ್ಬಂದಿಗೆ, ಸೃಷ್ಟಿ ಆಸ್ಪತ್ರೆಯ ಸಿಬ್ಬಂದಿಗೂ ಸೋಂಕು ತಗುಲಿದೆ.</p>.<p>ದಾವಣಗೆರೆ ತಾಲ್ಲೂಕಿನಲ್ಲಿ 114 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಆಲೂರಹಟ್ಟಿ, ಎಲೆಬೇರೂರು, ಬುಗ್ಗೇಹಳ್ಳಿ, ಶಿರಮಗೊಂಡನಹಳ್ಳಿ, ಕಾಡಜ್ಜಿ, ಕುರುಡಿ, ಚಟ್ಟೋಬನಹಳ್ಳಿ, ನಾಗನೂರು ಹೀಗೆ 13 ಮಂದಿ ಗ್ರಾಮೀಣ ಪ್ರದೇಶದವರಾಗಿದ್ದಾರೆ. ಉಳಿದವರು ಮಹಾನಗರ ಪಾಲಿಕೆ ವ್ಯಾಪ್ತಿಯವರು.</p>.<p>ಸಿದ್ಧವೀರಪ್ಪ ಬಡಾವಣೆ ವಿನೋಬನಗರ, ಎಸ್ಎಸ್ ಬಡಾವಣೆ, ನಿಟುವಳ್ಳಿ, ಎಂಸಿಸಿ ‘ಬಿ’ ಬ್ಲಾಕ್, ಪಿ.ಜೆ. ಬಡಾವಣೆಗಲ್ಲಿ ಐದಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿವೆ.</p>.<p>ಹರಿಹರ ತಾಲ್ಲೂಕಿನ 42, ಹೊನ್ನಾಳಿ–ನ್ಯಾಮತಿ ತಾಲ್ಲೂಕಿನ 31, ಚನ್ನಗಿರಿ ತಾಲ್ಲೂಕಿನ 14, ಜಗಳೂರು ತಾಲ್ಲೂಕಿನ 3 ಮಂದಿಗೆ ಕೊರೊನಾ ಬಂದಿದೆ. ದಾವಣಗೆರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಿತ್ರದುರ್ಗದ ಮೂವರು, ಹೊಳಲ್ಕೆರೆ ಮತ್ತು ಹಾವೇರಿಯ ತಲಾ ಒಬ್ಬರಲ್ಲೂ ಕೊರೊನಾ ಕಾಣಿಸಿಕೊಂಡಿದೆ.</p>.<p>ಜಿಲ್ಲೆಯಲ್ಲಿ ಈವರೆಗೆ 13,834 ಮಂದಿಗೆ ಕೊರೊನಾ ಬಂದಿದೆ. 10,733 ಮಂದಿ ಗುಣಮುಖರಾಗಿದ್ದಾರೆ. 227 ಮಂದಿ ಮೃತಪಟ್ಟಿದ್ದಾರೆ. 2,874 ಸಕ್ರಿಯ ಪ್ರಕರಣಗಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ: </strong>ಜಿಲ್ಲೆಯಲ್ಲಿ 209 ಮಂದಿಗೆ ಕೊರೊನಾ ವೈರಸ್ ಸೋಂಕು ಇರುವುದು ಬುಧವಾರ ದೃಢಪಟ್ಟಿದೆ. 15 ವೃದ್ಧರು, ಆರು ಮಂದಿ ವೃದ್ಧೆಯರು, ತಲಾ ಒಬ್ಬ ಬಾಲಕ, ಬಾಲಕಿ ಸೇರಿ85 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.</p>.<p>26 ವೃದ್ಧರು, 15 ವೃದ್ಧೆಯರು, ನಾಲ್ವರು ಬಾಲಕರು, ಒಬ್ಬ ಬಾಲಕಿಗೂ ಕೊರೊನಾ ಬಂದಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸಿಬ್ಬಂದಿಗೆ, ಸೃಷ್ಟಿ ಆಸ್ಪತ್ರೆಯ ಸಿಬ್ಬಂದಿಗೂ ಸೋಂಕು ತಗುಲಿದೆ.</p>.<p>ದಾವಣಗೆರೆ ತಾಲ್ಲೂಕಿನಲ್ಲಿ 114 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಆಲೂರಹಟ್ಟಿ, ಎಲೆಬೇರೂರು, ಬುಗ್ಗೇಹಳ್ಳಿ, ಶಿರಮಗೊಂಡನಹಳ್ಳಿ, ಕಾಡಜ್ಜಿ, ಕುರುಡಿ, ಚಟ್ಟೋಬನಹಳ್ಳಿ, ನಾಗನೂರು ಹೀಗೆ 13 ಮಂದಿ ಗ್ರಾಮೀಣ ಪ್ರದೇಶದವರಾಗಿದ್ದಾರೆ. ಉಳಿದವರು ಮಹಾನಗರ ಪಾಲಿಕೆ ವ್ಯಾಪ್ತಿಯವರು.</p>.<p>ಸಿದ್ಧವೀರಪ್ಪ ಬಡಾವಣೆ ವಿನೋಬನಗರ, ಎಸ್ಎಸ್ ಬಡಾವಣೆ, ನಿಟುವಳ್ಳಿ, ಎಂಸಿಸಿ ‘ಬಿ’ ಬ್ಲಾಕ್, ಪಿ.ಜೆ. ಬಡಾವಣೆಗಲ್ಲಿ ಐದಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿವೆ.</p>.<p>ಹರಿಹರ ತಾಲ್ಲೂಕಿನ 42, ಹೊನ್ನಾಳಿ–ನ್ಯಾಮತಿ ತಾಲ್ಲೂಕಿನ 31, ಚನ್ನಗಿರಿ ತಾಲ್ಲೂಕಿನ 14, ಜಗಳೂರು ತಾಲ್ಲೂಕಿನ 3 ಮಂದಿಗೆ ಕೊರೊನಾ ಬಂದಿದೆ. ದಾವಣಗೆರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಿತ್ರದುರ್ಗದ ಮೂವರು, ಹೊಳಲ್ಕೆರೆ ಮತ್ತು ಹಾವೇರಿಯ ತಲಾ ಒಬ್ಬರಲ್ಲೂ ಕೊರೊನಾ ಕಾಣಿಸಿಕೊಂಡಿದೆ.</p>.<p>ಜಿಲ್ಲೆಯಲ್ಲಿ ಈವರೆಗೆ 13,834 ಮಂದಿಗೆ ಕೊರೊನಾ ಬಂದಿದೆ. 10,733 ಮಂದಿ ಗುಣಮುಖರಾಗಿದ್ದಾರೆ. 227 ಮಂದಿ ಮೃತಪಟ್ಟಿದ್ದಾರೆ. 2,874 ಸಕ್ರಿಯ ಪ್ರಕರಣಗಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>