ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ | ಮಳೆ ಕೊರತೆ: ಎಲ್ಲೆಲ್ಲೂ ಆತಂಕದ ಕಾರ್ಮೋಡ

ಮೊಳಕೆಯೊಡೆದ ಮೆಕ್ಕೆಜೋಳಕ್ಕೆ ಬೇಕಿದೆ ವರುಣನ ಕೃಪೆ; ರೈತರಲ್ಲಿ ಚಿಂತೆ
ಚಂದ್ರಶೇಖರ ಆರ್.
Published : 21 ಜೂನ್ 2024, 7:15 IST
Last Updated : 21 ಜೂನ್ 2024, 7:15 IST
ಫಾಲೋ ಮಾಡಿ
Comments
ನ್ಯಾಮತಿಯ ಜಮೀನಿನಲ್ಲಿ ಮೆಕ್ಕೆಜೋಳಕ್ಕೆ ಎಡೆಕುಂಟೆ ಹೊಡೆಯುತ್ತಿರುವುದು
ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ನ್ಯಾಮತಿಯ ಜಮೀನಿನಲ್ಲಿ ಮೆಕ್ಕೆಜೋಳಕ್ಕೆ ಎಡೆಕುಂಟೆ ಹೊಡೆಯುತ್ತಿರುವುದು ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
8 ಎಕರೆಯಲ್ಲಿ ಮೆಕ್ಕೆಜೋಳ ಬಿತ್ತಿದ್ದೇನೆ. ಮೊಳಕೆ ಬಂದಿದೆ. ಈ ಹಂತದಲ್ಲಿ ತುಂತುರು ಮಳೆ ಬಂದರೂ ಸಾಕು. ಇನ್ನೂ ಎರಡು ದಿನಗಳಲ್ಲಿ ಮಳೆ ಆಗದಿದ್ದರೆ ಇಳುವರಿ ಬರುವುದು ಅನುಮಾನ.
ವಿ. ವೆಂಕಟೇಶ್‌ ರೈತ ಜಗಳೂರು ಗೊಲ್ಲರಹಟ್ಟಿ
ಇನ್ನು 4 ದಿನಗಳಲ್ಲಿ ಮಳೆಯಾಗದಿದ್ದರೆ ಮೆಕ್ಕೆಜೋಳ ಅಳಿಸುವುದು ಅನಿವಾರ್ಯ. ಏನು ಮಾಡಬೇಕೆಂಬುದೇ ತೋಚುತ್ತಿಲ್ಲ. ಸರ್ಕಾರ ಬೆಳೆ ಪರಿಹಾರ ಕೊಡಲು ಮುಂದಾಗಬೇಕು.
ಶಿವು ರೈತ ಆರುಂಡಿ
ಜಿಲ್ಲೆಯ ಮಳೆ ವಿವರ (ಜೂನ್‌ 14ರಿಂದ 20ರವರೆಗೆ ಮಿ.ಮೀಗಳಲ್ಲಿ)
ತಾಲ್ಲೂಕು; ವಾಡಿಕೆ ಮಳೆ; ಸುರಿದ ಮಳೆ ಚನ್ನಗಿರಿ; 22.4;14.9 ದಾವಣಗೆರೆ;16.9;14.0 ಹರಿಹರ;15.4;8.1 ಹೊನ್ನಾಳಿ;19.5;6.6 ನ್ಯಾಮತಿ;30;7.3 ಜಗಳೂರು;14.2;10.4
ಆರಂಭದಲ್ಲೇ ಬರೆ ಎಳೆದ ವರುಣ
‘ಈ ಬಾರಿ ಉತ್ತಮ ಮಳೆ ಆಗುತ್ತದೆ ಎಂದು ಹವಾಮಾನ ಇಲಾಖೆಯವರು ಹೇಳಿದ್ದರು. ಆದರೆ ಮಳೆಯೇ ಇಲ್ಲ. ಆರಂಭದಲ್ಲೇ ಬರೆ ಎಳೆದಂತಾಗಿದೆ. 5 ಎಕರೆಯಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದೇವೆ. ಈ ಭಾಗದಲ್ಲಿ ಮೆಕ್ಕೆಜೋಳ ಪ್ರಮುಖ ಬೆಳೆ. ಮಳೆ ಅಗತ್ಯವಾಗಿ ಬೇಕು. ಆಕಾಶದತ್ತ  ನೋಡುವುದೇ ರೈತರ ಕಾಯಕವಾಗಿದೆ’ ಎಂದು ಜಗಳೂರು ಕಸಬಾ ಹೋಬಳಿ ಪಿ. ತಿಪ್ಪೇಸ್ವಾಮಿ ವಾಸ್ತವ ತೆರೆದಿಟ್ಟರು. ‘‌ಬಿತ್ತನೆ ಬೀಜ ರಸಗೊಬ್ಬರದ ಬೆಲೆಯೂ ಏರಿಕೆಯಾಗಿದ್ದು ಸಂಕಷ್ಟ ಅನುಭವಿಸುವಂತಾಗಿದೆ. ಮೆಕ್ಕೆಜೋಳ ಕೈಗೆ ಬರದಿದ್ದರೆ ಮುಂದೆ ಏನು ಎಂಬ ಚಿಂತೆ ಕಾಡುತ್ತಿದೆ. ಕೊಳವೆಬಾವಿಯಲ್ಲೂ ನೀರು ಇಲ್ಲ. ಮೊದಲು ನ್ಯಾಮತಿ ಭಾಗದಲ್ಲಿ ತರಕಾರಿ ಬೆಳೆಯುತ್ತಿದ್ದರು. ನೀರಿನ ಕೊರತೆಯ ಕಾರಣ  ರೈತರು ವಿಮುಖರಾಗುತ್ತಿದ್ದಾರೆ’ ಎಂದು ನ್ಯಾಮತಿಯ ರೈತ ಸಂತೋಷ್‌ಕುಮಾರ್‌ ಹೇಳಿದರು. ಜಲಮೂಲಗಳಿಗಿಲ್ಲ ಜೀವಕಳೆ ಜೂನ್‌ ತಿಂಗಳಲ್ಲಿ ವಾಡಿಕೆ ಆಗಬೇಕಿದ್ದ ಮಳೆ ಒಂದೆರಡು ದಿನಗಳಲ್ಲಿ ಸುರಿದಿದೆ. ಆದರೆ ಮತ್ತೆ ಮಳೆಯೇ ಆಗಿಲ್ಲ. ಇದರಿಂದ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ.  ಮಳೆಯಾಗದ ಕಾರಣ ಕೆರೆಕಟ್ಟೆಗಳು ಈ ಭಾಗದ ರೈತರ ಜೀವನಾಡಿ ಭದ್ರಾ ಜಲಾಶಯ ತುಂಬಿಲ್ಲ. ಅಂತರ್ಜಲ ಮಟ್ಟವೂ ಏರಿಕೆಯಾಗದ ಕಾರಣ ಬೇಸಿಗೆಯಲ್ಲಿ ಬತ್ತಿದ್ದ ಕೊಳವೆಬಾವಿಗಳಲ್ಲಿ ನೀರು ಬಂದಿಲ್ಲ. ನೀರಿನ ಮೂಲಗಳೂ ಜೀವಕಳೆ ಪಡೆದಿಲ್ಲ. ಇದರಿಂದ ರೈತರು ಜಾನುವಾರುಗಳು ಸಂಕಷ‌್ಟ ಎದುರಿಸುವಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT