ತೋಟಗಾರಿಕೆ ಇಲಾಖೆಯಡಿ ಈರುಳ್ಳಿ ಘಟಕ ನಿರ್ಮಾಣ, ಕೃಷಿ ಹೊಂಡ, ಸಮುದಾಯಿಕ ಕೃಷಿಹೊಂಡ ನಿರ್ಮಾಣ, ಹಣ್ಣುಗಳ ಪ್ಯಾಕ್ ಹೌಸ್ ನಿರ್ಮಾಣ ಹಾಗೂ ಟ್ರ್ಯಾಕ್ಟರ್ ಟ್ರೇಲರ್ ಮತ್ತು ವಿವಿಧ ಯಾಂತ್ರಗಳಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ಈಹಿಂದೆ ಶೇ 90ರಷ್ಟು ಸಹಾಯಧನ ನೀಡಲಾಗುತ್ತಿತ್ತು. ಆದರೀಗ ಸಹಾಯಧನವನ್ನು ಕಡಿತಗೊಳಿಸಿದ್ದು, ಪರಿಶಿಷ್ಟ ಸಮುದಾಯದವರಿಗೆ ನೆರವು ದೊರೆಯದಂತಾಗಿದೆ.