‘ಕೋವಿಡ್–19 ಹಿನ್ನೆಲೆಯಲ್ಲಿ ನೆರೆಯ ರಾಜ್ಯಗಳಿಗೆ ಹೋಗುತ್ತಿದ್ದ ಭತ್ತ ಶೇ 50ರಷ್ಟು ಕಡಿಮೆಯಾಗಿದೆ. ಸ್ಪಿರಿಟ್ಗಾಗಿ ಮಾತ್ರ ಜರೇಕಟ್ಟೆ ಹಾಗೂ ತ್ಯಾವಣಗಿಯಿಂದ ಸ್ವಲ್ಪ ಪ್ರಮಾಣದಲ್ಲಿ ಭತ್ತ ಆಂದ್ರಕ್ಕೆ ಹೋಗುತ್ತಿದೆ. ಬೆಂಬಲ ಬೆಲೆಯಲ್ಲಿ ಒಬ್ಬ ರೈತರಿಂದ 45 ಚೀಲ ಮಾತ್ರ ಕೊಂಡುಕೊಳ್ಳುತ್ತಿದ್ದು, ಒಂದು ಎಕರೆಗೆ ರೈತ ಇಷ್ಟು ಪ್ರಮಾಣದ ಭತ್ತ ಬೆಳೆಯುತ್ತಾನೆ. ಉಳಿದ ಭತ್ತವನ್ನು ಎಲ್ಲಿ ಮಾರಾಟ ಮಾಡಬೇಕು? ರೈತರಿಗೆ ಒಂದು ಎಕರೆಗೆ ಕನಿಷ್ಠ ₹10 ಸಾವಿರ ನಷ್ಟವಾಗುತ್ತಿದೆ’ ಎನ್ನುತ್ತಾರೆ ವರ್ತಕ ಪ್ರತಿನಿಧಿ ದೊಗ್ಗಳ್ಳಿ ಬಸವರಾಜು.