ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀರೆ ಅಂಗಡಿಯಲ್ಲಿ ಹಣ ಕಳ್ಳತನ ಮಾಡಿದ್ದ ಇಬ್ಬರ ಬಂಧನ

Last Updated 14 ಜುಲೈ 2021, 11:53 IST
ಅಕ್ಷರ ಗಾತ್ರ

ದಾವಣಗೆರೆ: ನಗರದ ಬಿ.ಟಿ. ಗಲ್ಲಿಯಲ್ಲಿನ ಕ್ರಾಂತಿ ಡಿಸ್ಟ್ರಿಬ್ಯೂಟರ್ (ಸೀರೆ ಅಂಗಡಿ)ಯಲ್ಲಿ ಕಳ್ಳತನ ಮಾಡಿದ್ದ ಇಬ್ಬರನ್ನು ಬಂಧಿಸಿರುವ ಬಸವನಗರ ಠಾಣೆಯ ಪೊಲೀಸರು ₹ 1.90 ಲಕ್ಷವನ್ನು ವಶಪಡಿಸಿಕೊಂಡಿದ್ದಾರೆ.

ಹೊಂಡದ ಸರ್ಕಲ್ ನಿವಾಸಿ ನವೀನ್ (20) ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಬಂಧಿತರು. ಸೀರೆ ಅಂಗಡಿಯಲ್ಲಿ ಡ್ರಾ ದಲ್ಲಿ ಇಟ್ಟಿದ್ದ ₹ 2.50 ಲಕ್ಷ ಕಳ್ಳತನವಾಗಿತ್ತು. ಕ್ರಾಂತಿ ಡಿಸ್ಟ್ರಿಬ್ಯೂಟರ್ ಮಾಲೀಕ ಮನೀಶ್ ಮೆಹ್ತಾ ಅವರು ಬಸವನಗರ ಠಾಣೆಗೆ ಮಂಗಳವಾರ ದೂರು ನೀಡಿದ್ದರು.

ತನಿಖೆ ಕೈಗೊಂಡ ಠಾಣೆಯ ಎಸ್‌ಐ ನಾಗಪ್ಪ ಬಂಕಾಳಿ ಹಾಗೂ ಪಿಎಸ್‌ಐ ಶೀಲಾ ಹೊಂಗಲ್ ಹಾಗೂ ತಂಡ ಆರೋಪಿಗಳನ್ನು ಬಂಧಿಸಿದೆ. ಸಿಬ್ಬಂದಿ ಫಕೃದ್ದೀನ್ ಅಲಿ, ವಿಶ್ವನಾಥ ಗಡ್ಡಿ, ಅನಸೂಯ ಅವರು ಅವರು ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT