ಅಶೋಕ ರೈಲ್ವೆ ಗೇಟ್ನಲ್ಲಿ ಹಳಿಯನ್ನು ದಾಟುವ ರಸ್ತೆ ಕಿತ್ತು ಹೋಗಿ ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿತ್ತು. ಇಕ್ಕಟ್ಟಾದ ಈ ರಸ್ತೆಯಲ್ಲಿ ವಿಶೇಷವಾಗಿ ದ್ವಿಚಕ್ರ ವಾಹನಗಳ ಸವಾರರು ಹೋಗವಾಗ ಸರ್ಕಸ್ ಮಾಡಬೇಕಾಗುತ್ತಿತ್ತು. ನಾಗರಿಕರು ಪಡುತ್ತಿದ್ದ ಪಡಿಪಾಟಲನ್ನು ಮನಗಂಡ ರೈಲ್ವೆ ಇಲಾಖೆಯು, ಹಳಿಯ ಅಕ್ಕ ಪಕ್ಕ ಪೇವರ್ಸ್ ಹಾಕುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ.