<p>ದಾವಣಗೆರೆ: ‘ವಚನಗಳು, ಬಸವತತ್ವವನ್ನು ಕೆಲವರು ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನಿಸಿ, ಬಸವಣ್ಣನವರನ್ನು ಹಿಂದೂ ಧರ್ಮದಿಂದ ಬೇರ್ಪಡಿಸುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.</p>.<p>ಇಲ್ಲಿ ಹರ ಸಾಹಿತ್ಯ ಸಂಕುಲ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಸಂಶೋಧಕ ಡಿ.ಎ. ಉಪಾಧ್ಯ ಅವರ ‘ಬಸವಶೈವದಲ್ಲಿ ಹಿಂದುತ್ವ’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.</p>.<p>‘ಬಸವಣ್ಣನವರನ್ನು ನಾಸ್ತಿಕ ಎಂಬಂತೆ ಬಿಂಬಿಸಲಾಗುತ್ತಿದೆ. ಪಾಪ–ಪುಣ್ಯ, ಸ್ವರ್ಗ–ನರಕ ಅಲ್ಲಗಳೆದರೆಂದು ನಂಬಿಸಲಾಗುತ್ತಿದೆ. ಕರ್ಮ ಸಿದ್ಧಾಂತ ಟೀಕಿಸಿದ್ದಾರೆಂಬ ತಪ್ಪು ಭಾವನೆ ಮೂಡಿಸಲಾಗುತ್ತಿದೆ. ಬಸವಣ್ಣನವರು ಹೀಗೆ ಎಲ್ಲಿ ಹೇಳಿದ್ದಾರೆ ತೋರಿಸಿ?’ ಎಂದು ಸವಾಲು ಹಾಕಿದರು.</p>.<p>‘ಬಸವತತ್ವ ಪಾಲಿಸುವವರನ್ನು ನಾಸ್ತಿಕರನ್ನಾಗಿಸಲಾಗುತ್ತಿದೆ. ವೀರಶೈವ ಲಿಂಗಾಯತರು ಹಿಂದೂಗಳಲ್ಲ ಎಂದು ಪ್ರತಿಪಾದಿಸುವವರು ಮೊದಲು ಶಿವಯೋಗ ಸಾಧನೆ ಮಾಡಬೇಕು’ ಎಂದು ಸಲಹೆ ಹೇಳಿದರು.</p>.<p>‘ಶೈವ ಪರಂಪರೆ ಬಸವಾದಿ ಶರಣರ ಪೂರ್ವದಿಂದಲೂ ಇದೆ. ಲಿಂಗ ಪೂಜೆ ಬಸವಣ್ಣನವರಿಗಿಂತ ಮೊದಲೇ ಇತ್ತು. ಕಾಯಕ ಸಮುದಾಯಗಳಿಗೆ ಇಷ್ಟಲಿಂಗ ದೀಕ್ಷೆ ನೀಡಿದ ಬಸವಣ್ಣ ಇಷ್ಟಲಿಂಗದಲ್ಲಿ ದೇವರನ್ನು ಕಾಣುವಂತೆ ಜಾಗೃತಿ ಮೂಡಿಸಿದರು’ ಎಂದು ಪ್ರತಿಪಾದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದಾವಣಗೆರೆ: ‘ವಚನಗಳು, ಬಸವತತ್ವವನ್ನು ಕೆಲವರು ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನಿಸಿ, ಬಸವಣ್ಣನವರನ್ನು ಹಿಂದೂ ಧರ್ಮದಿಂದ ಬೇರ್ಪಡಿಸುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.</p>.<p>ಇಲ್ಲಿ ಹರ ಸಾಹಿತ್ಯ ಸಂಕುಲ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಸಂಶೋಧಕ ಡಿ.ಎ. ಉಪಾಧ್ಯ ಅವರ ‘ಬಸವಶೈವದಲ್ಲಿ ಹಿಂದುತ್ವ’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.</p>.<p>‘ಬಸವಣ್ಣನವರನ್ನು ನಾಸ್ತಿಕ ಎಂಬಂತೆ ಬಿಂಬಿಸಲಾಗುತ್ತಿದೆ. ಪಾಪ–ಪುಣ್ಯ, ಸ್ವರ್ಗ–ನರಕ ಅಲ್ಲಗಳೆದರೆಂದು ನಂಬಿಸಲಾಗುತ್ತಿದೆ. ಕರ್ಮ ಸಿದ್ಧಾಂತ ಟೀಕಿಸಿದ್ದಾರೆಂಬ ತಪ್ಪು ಭಾವನೆ ಮೂಡಿಸಲಾಗುತ್ತಿದೆ. ಬಸವಣ್ಣನವರು ಹೀಗೆ ಎಲ್ಲಿ ಹೇಳಿದ್ದಾರೆ ತೋರಿಸಿ?’ ಎಂದು ಸವಾಲು ಹಾಕಿದರು.</p>.<p>‘ಬಸವತತ್ವ ಪಾಲಿಸುವವರನ್ನು ನಾಸ್ತಿಕರನ್ನಾಗಿಸಲಾಗುತ್ತಿದೆ. ವೀರಶೈವ ಲಿಂಗಾಯತರು ಹಿಂದೂಗಳಲ್ಲ ಎಂದು ಪ್ರತಿಪಾದಿಸುವವರು ಮೊದಲು ಶಿವಯೋಗ ಸಾಧನೆ ಮಾಡಬೇಕು’ ಎಂದು ಸಲಹೆ ಹೇಳಿದರು.</p>.<p>‘ಶೈವ ಪರಂಪರೆ ಬಸವಾದಿ ಶರಣರ ಪೂರ್ವದಿಂದಲೂ ಇದೆ. ಲಿಂಗ ಪೂಜೆ ಬಸವಣ್ಣನವರಿಗಿಂತ ಮೊದಲೇ ಇತ್ತು. ಕಾಯಕ ಸಮುದಾಯಗಳಿಗೆ ಇಷ್ಟಲಿಂಗ ದೀಕ್ಷೆ ನೀಡಿದ ಬಸವಣ್ಣ ಇಷ್ಟಲಿಂಗದಲ್ಲಿ ದೇವರನ್ನು ಕಾಣುವಂತೆ ಜಾಗೃತಿ ಮೂಡಿಸಿದರು’ ಎಂದು ಪ್ರತಿಪಾದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>