<p><strong>ದಾವಣಗೆರೆ:</strong>ಜಯಣ್ಣ ಅವರ ಹೋರಾಟದ ಫಲವಾಗಿ ಭದ್ರಾ ಮೇಲ್ದಂಡೆ ಯೋಜನೆ ಸಾಕಾರಗೊಂಡಿದೆ. ಇದೀಗ ರಾಷ್ಟ್ರೀಯ ಯೋಜನೆಯಾಗಿ ಮಾರ್ಪಾಡಾಗುತ್ತಿದ್ದು, ಕೇಂದ್ರ ಸರ್ಕಾರದಿಂದ ₹ 16 ಸಾವಿರ ಕೋಟಿ ಬಿಡುಗಡೆಯಾಗಲಿದೆ. ಇದನ್ನು ಕಣ್ತುಂಬಿಕೊಳ್ಳಲು ಜಯಣ್ಣ ಇನ್ನಷ್ಟು ವರ್ಷ ಬದುಕಿರಬೇಕಿತ್ತುಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.</p>.<p>ಜಿಲ್ಲಾ ಮಾದಿಗ ನೌಕರರ ಬಳಗದಿಂದ ನಗರದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ಆಯೋಜಿಸಿದ್ದ ಜನಪರ ದಲಿತ ಹೋರಾಟಗಾರ ದಿ.ಎಂ. ಜಯಣ್ಣನವರ ಒಂದು ನೆನಪು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಭದ್ರಾ ಮೇಲ್ದಂಡೆ ಯೋಜನೆಯಲ್ಲದೇ ತುಮಕೂರು, ಚಿತ್ರದುರ್ಗ ಹಾಗೂ ದಾವಣಗೆರೆ ನೇರ ರೈಲುಮಾರ್ಗದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಈ ಯೋಜನೆಗಳು ಶೀಘ್ರ ಕಾರ್ಯಗತ<br />ಗೊಳ್ಳಲಿದ್ದು, ಈ ಯೋಜನೆಯ ಫಲ ಉಣ್ಣುವ ಮೊದಲೇ ನಿಧನರಾಗಿದ್ದು, ನೋವಿನ ಸಂಗತಿ. ಅವರನ್ನು ದಾವಣಗೆರೆ, ಚಿತ್ರದುರ್ಗ ಮಾತ್ರವಲ್ಲದೆ ತುಮಕೂರು ಜಿಲ್ಲೆಯವರೂ ಸ್ಮರಿಸಬೇಕು’ ಎಂದು ಹೇಳಿದರು.</p>.<p>‘ಭದ್ರಾ ಮೇಲ್ದಂಡೆ ಯೋಜನೆಯಡಿ ನಿಯಮದಂತೆ ಭದ್ರಾ ಮತ್ತು ತುಂಗಾದ ಹೆಚ್ಚುವರಿ ನೀರು ಎತ್ತುವಳಿ ಮಾಡಿ ನೀಡಬಹುದು. ಭದ್ರಾ ನೀರು ಜಿಲ್ಲೆಯ ಜನರ ಜೀವನಾಡಿ. ಯಾವುದೇ ಕಾರಣಕ್ಕೂ ಭದ್ರೆ ಅಭದ್ರವಾಗಲು ಬಿಡುವುದಿಲ್ಲ. ಜಿಲ್ಲೆಯ ಅಚ್ಚುಕಟ್ಟು ರೈತರಿಗೆ ತೊಂದರೆಯಾಗಲು ಬಿಡುವುದಿಲ್ಲ’ ಎಂದು ಅಭಯ ನೀಡಿದರು.</p>.<p>ಉಬ್ರಾಣಿ, ರಾಜನಹಳ್ಳಿ ಏತ ನೀರಾವರಿ, ಹರಪನಹಳ್ಳಿಯ 60 ಕೆರೆ ಭರ್ತಿ ಮಾಡುವುದು ಸೇರಿ ಇನ್ನು ಮೂರ್ನಾಲ್ಕು ವರ್ಷದಲ್ಲಿ ದಾವಣಗೆರೆಯನ್ನು ನೀರಾವರಿ ಜಿಲ್ಲೆಯಾಗಿಸುವ ಆಶಯ ತಮ್ಮದಾಗಿದೆ ಎಂದು ಹೇಳಿಕೊಂಡರು.</p>.<p>ಚಿತ್ರದುರ್ಗ ಸಂಸದ ಎ. ನಾರಾಯಣಸ್ವಾಮಿ ಮಾತ<br />ನಾಡಿ,‘ಇಂದು ರಾಜಕೀಯ ಪಕ್ಷಗಳು ದಲಿತರನ್ನು ಓಲೈಸಲು ಅಂಬೇಡ್ಕರ್ ಅವರನ್ನು ಪಲ್ಲಕ್ಕಿಯ ಮೇಲೆ ಕುಳ್ಳಿರಿಸಿ ಮೆರವಣಿಗೆ ಮಾಡುತ್ತಿವೆ. ಯಾರೊಬ್ಬರಿಗೂ ನಿವೇಶನ ನೀಡಲಿಲ್ಲ. ಈ ಮುಗ್ಧ ಸಮಾಜಕ್ಕೆ ಸರ್ಕಾರದ ಯೋಜನೆಗಳನ್ನು ತಲಪಿಸುವ ಯೋಗ್ಯತೆ, ರಾಜಕಾರಣಿಗಳು ಹಾಗೂ ಸಂಘಟನೆಗಳಿಗೆ ಇಲ್ಲ’ ಎಂದರು.</p>.<p>ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ‘ಎಲ್ಲ ವರ್ಗದ ಪರವಾಗಿ ಜಯಣ್ಣ ಹೋರಾಟ ಮಾಡಿದ್ದಾರೆ. ಸಾವಿನ ನಂತರವೂ ಅವರು ಬದುಕಿದ್ದಾರೆ. ರಾಜಕೀಯಕ್ಕೆ ಬಂದರೂ ವೈಯಕ್ತಿಕ ಲಾಭ ಮಾಡಿಕೊಳ್ಳಲಿಲ್ಲ. ಅವರ ಹೆಸರಲ್ಲಿ ಮೆಮೊರಿಯಲ್ ಟ್ರಸ್ಟ್ ರಚಿಸಲಾಗಿದೆ. 2 ಎಕರೆಯಲ್ಲಿ ಸಮಾಧಿ ಅಭಿವೃದ್ಧಿಪಡಿಸಲಾಗುತ್ತಿದೆ’ ಎಂದರು.</p>.<p>ಕಾರ್ಯಕ್ರಮದಲ್ಲಿ ಶಾಸಕ ಪ್ರೊ.ಎಂ.ಲಿಂಗಣ್ಣ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ, ಸದಸ್ಯ ಆಲೂರು ನಿಂಗರಾಜ್, ಎಂ. ಪ್ರಸನ್ನಕುಮಾರ್, ಕುಕ್ಕುವಾಡ ಮಲ್ಲೇಶಿ, ಮಾದಿಗ ನೌಕರರ ಬಳಗದ ಅಧ್ಯಕ್ಷ ಪಿ. ನಾಗರಾಜಪ್ಪ<br />ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ:</strong>ಜಯಣ್ಣ ಅವರ ಹೋರಾಟದ ಫಲವಾಗಿ ಭದ್ರಾ ಮೇಲ್ದಂಡೆ ಯೋಜನೆ ಸಾಕಾರಗೊಂಡಿದೆ. ಇದೀಗ ರಾಷ್ಟ್ರೀಯ ಯೋಜನೆಯಾಗಿ ಮಾರ್ಪಾಡಾಗುತ್ತಿದ್ದು, ಕೇಂದ್ರ ಸರ್ಕಾರದಿಂದ ₹ 16 ಸಾವಿರ ಕೋಟಿ ಬಿಡುಗಡೆಯಾಗಲಿದೆ. ಇದನ್ನು ಕಣ್ತುಂಬಿಕೊಳ್ಳಲು ಜಯಣ್ಣ ಇನ್ನಷ್ಟು ವರ್ಷ ಬದುಕಿರಬೇಕಿತ್ತುಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.</p>.<p>ಜಿಲ್ಲಾ ಮಾದಿಗ ನೌಕರರ ಬಳಗದಿಂದ ನಗರದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ಆಯೋಜಿಸಿದ್ದ ಜನಪರ ದಲಿತ ಹೋರಾಟಗಾರ ದಿ.ಎಂ. ಜಯಣ್ಣನವರ ಒಂದು ನೆನಪು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಭದ್ರಾ ಮೇಲ್ದಂಡೆ ಯೋಜನೆಯಲ್ಲದೇ ತುಮಕೂರು, ಚಿತ್ರದುರ್ಗ ಹಾಗೂ ದಾವಣಗೆರೆ ನೇರ ರೈಲುಮಾರ್ಗದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಈ ಯೋಜನೆಗಳು ಶೀಘ್ರ ಕಾರ್ಯಗತ<br />ಗೊಳ್ಳಲಿದ್ದು, ಈ ಯೋಜನೆಯ ಫಲ ಉಣ್ಣುವ ಮೊದಲೇ ನಿಧನರಾಗಿದ್ದು, ನೋವಿನ ಸಂಗತಿ. ಅವರನ್ನು ದಾವಣಗೆರೆ, ಚಿತ್ರದುರ್ಗ ಮಾತ್ರವಲ್ಲದೆ ತುಮಕೂರು ಜಿಲ್ಲೆಯವರೂ ಸ್ಮರಿಸಬೇಕು’ ಎಂದು ಹೇಳಿದರು.</p>.<p>‘ಭದ್ರಾ ಮೇಲ್ದಂಡೆ ಯೋಜನೆಯಡಿ ನಿಯಮದಂತೆ ಭದ್ರಾ ಮತ್ತು ತುಂಗಾದ ಹೆಚ್ಚುವರಿ ನೀರು ಎತ್ತುವಳಿ ಮಾಡಿ ನೀಡಬಹುದು. ಭದ್ರಾ ನೀರು ಜಿಲ್ಲೆಯ ಜನರ ಜೀವನಾಡಿ. ಯಾವುದೇ ಕಾರಣಕ್ಕೂ ಭದ್ರೆ ಅಭದ್ರವಾಗಲು ಬಿಡುವುದಿಲ್ಲ. ಜಿಲ್ಲೆಯ ಅಚ್ಚುಕಟ್ಟು ರೈತರಿಗೆ ತೊಂದರೆಯಾಗಲು ಬಿಡುವುದಿಲ್ಲ’ ಎಂದು ಅಭಯ ನೀಡಿದರು.</p>.<p>ಉಬ್ರಾಣಿ, ರಾಜನಹಳ್ಳಿ ಏತ ನೀರಾವರಿ, ಹರಪನಹಳ್ಳಿಯ 60 ಕೆರೆ ಭರ್ತಿ ಮಾಡುವುದು ಸೇರಿ ಇನ್ನು ಮೂರ್ನಾಲ್ಕು ವರ್ಷದಲ್ಲಿ ದಾವಣಗೆರೆಯನ್ನು ನೀರಾವರಿ ಜಿಲ್ಲೆಯಾಗಿಸುವ ಆಶಯ ತಮ್ಮದಾಗಿದೆ ಎಂದು ಹೇಳಿಕೊಂಡರು.</p>.<p>ಚಿತ್ರದುರ್ಗ ಸಂಸದ ಎ. ನಾರಾಯಣಸ್ವಾಮಿ ಮಾತ<br />ನಾಡಿ,‘ಇಂದು ರಾಜಕೀಯ ಪಕ್ಷಗಳು ದಲಿತರನ್ನು ಓಲೈಸಲು ಅಂಬೇಡ್ಕರ್ ಅವರನ್ನು ಪಲ್ಲಕ್ಕಿಯ ಮೇಲೆ ಕುಳ್ಳಿರಿಸಿ ಮೆರವಣಿಗೆ ಮಾಡುತ್ತಿವೆ. ಯಾರೊಬ್ಬರಿಗೂ ನಿವೇಶನ ನೀಡಲಿಲ್ಲ. ಈ ಮುಗ್ಧ ಸಮಾಜಕ್ಕೆ ಸರ್ಕಾರದ ಯೋಜನೆಗಳನ್ನು ತಲಪಿಸುವ ಯೋಗ್ಯತೆ, ರಾಜಕಾರಣಿಗಳು ಹಾಗೂ ಸಂಘಟನೆಗಳಿಗೆ ಇಲ್ಲ’ ಎಂದರು.</p>.<p>ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ‘ಎಲ್ಲ ವರ್ಗದ ಪರವಾಗಿ ಜಯಣ್ಣ ಹೋರಾಟ ಮಾಡಿದ್ದಾರೆ. ಸಾವಿನ ನಂತರವೂ ಅವರು ಬದುಕಿದ್ದಾರೆ. ರಾಜಕೀಯಕ್ಕೆ ಬಂದರೂ ವೈಯಕ್ತಿಕ ಲಾಭ ಮಾಡಿಕೊಳ್ಳಲಿಲ್ಲ. ಅವರ ಹೆಸರಲ್ಲಿ ಮೆಮೊರಿಯಲ್ ಟ್ರಸ್ಟ್ ರಚಿಸಲಾಗಿದೆ. 2 ಎಕರೆಯಲ್ಲಿ ಸಮಾಧಿ ಅಭಿವೃದ್ಧಿಪಡಿಸಲಾಗುತ್ತಿದೆ’ ಎಂದರು.</p>.<p>ಕಾರ್ಯಕ್ರಮದಲ್ಲಿ ಶಾಸಕ ಪ್ರೊ.ಎಂ.ಲಿಂಗಣ್ಣ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ, ಸದಸ್ಯ ಆಲೂರು ನಿಂಗರಾಜ್, ಎಂ. ಪ್ರಸನ್ನಕುಮಾರ್, ಕುಕ್ಕುವಾಡ ಮಲ್ಲೇಶಿ, ಮಾದಿಗ ನೌಕರರ ಬಳಗದ ಅಧ್ಯಕ್ಷ ಪಿ. ನಾಗರಾಜಪ್ಪ<br />ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>