ನವರಾತ್ರಿ ಮತ್ತು ದೀಪಾವಳಿ ನಡುವೆ ತೆನೆ ಹೊತ್ತು ನಿಂತ ಭೂತಾಯಿಯ ಬಸಿರ ಬಯಕೆ ತೀರಿಸಲಾಗುತ್ತದೆ. ಸಾಂಪ್ರದಾಯಿಕವಾಗಿ ಗಂಗಾ ಪೂಜೆ, ಭತ್ತ, ಅಡಿಕೆ ಮರಕ್ಕೆ ಹಸಿರು ಸೀರೆ ಉಡಿಸಿ ಬಳೆ, ಸೀರೆ, ಕುಪ್ಪಸ ತೊಡಿಸಲಾಗುತ್ತದೆ. ಕಡುಬು, ಬುತ್ತಿ, ಚಿತ್ರಾನ್ನ, ಸೇರಿ ವಿವಿಧ ಭಕ್ಷ್ಯಗಳನ್ನು ಎಡೆ ಇಟ್ಟು, ಬಳಿಕ ಪೂಜೆ ನೆರವೇರಿಸುತ್ತಾರೆ. ತೆನೆಕಟ್ಟಿದ ಬೆಳೆ ಯಾವುದೇ ಅಡ್ಡಿ ಆತಂಕ ಇಲ್ಲದೆ ಕಣಕ್ಕೆ ಬಂದು ರಾಶಿ ಆಗಲಿ ಎಂದು ಪ್ರಾರ್ಥಿಸಲಾಗುವುದು ಎಂದು ಸ್ಥಳೀಯರು ತಿಳಿಸಿದರು.