ಹೊನ್ನಾಳಿ ತಾಲ್ಲೂಕು ಕತ್ತಿಗೆ ಗ್ರಾಮದಲ್ಲಿ ಶನಿವಾರ ಹೋರಿ ಬೆದರಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಥಳೀಯ ಶಾಸಕರಾಗಿರುವ ರೇಣುಕಾಚಾರ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆಗ ಹೋರಿ ಹಿಡಿದುಕೊಳ್ಳುವಂತೆ ಸ್ಥಳೀಯರು ಪುಸಲಾಯಿಸಿದ್ದಾರೆ. ರೇಣುಕಾಚಾರ್ಯ ಹಿಡಿದುಕೊಳ್ಳಲು ಹೋಗುತ್ತಿದ್ದಂತೆ ಹೋರಿ ತಿವಿಯಲು ಬಂದಿದೆ.ಅದೇ ಹೊತ್ತಿಗೆ ಬೆಂಬಲಿಗರು ಅವರನ್ನು ಎಳೆದುಕೊಂಡಿದ್ದರಿಂದ ಪಾರಾಗಿದ್ದಾರೆ.