ವಿನೋಬನಗರ ಮೂರನೇ ಮೇನ್, ಒಂದನೇ ಕ್ರಾಸ್ನ ಸೋಮಶೇಖರಪ್ಪ ಅವರ ಪತ್ನು ಚನ್ನಮ್ಮ (54) ಗುರುವಾರ ಮಧ್ಯಾಹ್ನ ಸಾಯಿಬಾಬಾ ದೇವಸ್ಥಾನಕ್ಕೆ ಹೊರಟಿದ್ದರು. ಎಂಸಿಸಿ ಎ ಬ್ಲಾಕ್ನ 1ನೇ ಕ್ರಾಸ್ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್ ಒಂದು ಅವರ ಪಕ್ಕಕ್ಕೆ ಬಂದಿದ್ದು, ಚನ್ನಮ್ಮ ಅವರ ಕುತ್ತಿಗೆಗೆ ಹಿಂಬದಿ ಸವಾರ ಕೂ ಹಾಕಿ 40 ಗ್ರಾಂ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡಿದ್ದಾನೆ. ಕೂಡಲೇ ಬೈಕ್ ಮುಂದಕ್ಕೆ ಸಾಗಿದೆ. ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.