<p><strong>ಸಂತೇಬೆನ್ನೂರು</strong>: ‘ಗಗನಯಾನಿಗಳಾದ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಕ್ಷೇಮವಾಗಿ ಭೂಮಿಗೆ ಮರಳಿರುವುದು ಸಂಭ್ರಮದ ಕ್ಷಣ’ ಎಂದು ಚೈತನ್ಯ ಗುರುಕುಲ ಸಂಸ್ಥೆಯ ಅಧ್ಯಕ್ಷ ಆರ್.ನಾಗರಾಜ್ ಹೇಳಿದರು.</p>.<p>ಇಲ್ಲಿನ ಚೈತನ್ಯ ಗುರುಕುಲ ವಿದ್ಯಾಸಂಸ್ಥೆಯಲ್ಲಿ ಗುರುವಾರ ಗಗನಯಾನಿಗಳು ಕ್ಷೇಮವಾಗಿ ಭೂಮಿಗೆ ಮರಳಿದ ಸಂಭ್ರಮಾಚರಣೆಯಲ್ಲಿ ಅವರು ಮಾತನಾಡಿದರು.</p>.<p>‘ಎಂಟು ದಿನಗಳಲ್ಲಿ ಭೂಮಿಗೆ ಹಿಂತಿರುಗಿ ಬರಬೇಕಾಗಿದ್ದ ಗಗನ ಯಾತ್ರಿಗಳು ಪ್ರೊಪಲ್ಶನ್ ವ್ಯವಸ್ಥೆಯಲ್ಲಿನ ಸಮಸ್ಯೆಯಿಂದಾಗಿ 287 ದಿನಗಳು ಬಾಹ್ಯಾಕಾಶದಲ್ಲಿಯೇ ಇರಬೇಕಾಯಿತು. ಆದರೂ ದೃತಿಗೆಡದೆ 150ಕ್ಕೂ ಹೆಚ್ಚು ಪ್ರಯೋಗಳನ್ನು ನಡೆಸಿರುವುದು ಅವರ ಕಾರ್ಯದಕ್ಷತೆಗೆ ಸಾಕ್ಷಿ’ ಎಂದು ಶ್ಲಾಘಿಸಿದರು.</p>.<p>‘ಜೀವದ ಹಂಗು ತೊರೆದು ಸ್ಥಿರ ಮನಸ್ಥಿತಿಯಲ್ಲಿ ಗುರಿ ಮುಟ್ಟಿದ ಅಭೂತಪೂರ್ವ ಸಾಧಕರು. ಭಾರತೀಯ ಮೂಲದ ಸುನಿತಾ ಅವರ ಸಾಧನೆ ಮಹಿಳೆಯರಿಗೆ ಸ್ಫೂರ್ತಿ’ ಎಂದರು.</p>.<p>‘ಮಕ್ಕಳು ಬಾಹ್ಯಾಕಾಶದ ಬಗ್ಗೆ ಕುತೂಹಲ ಬೆಳೆಸಿಕೊಳ್ಳಬೇಕು. ಸಾಮಾನ್ಯರು ಊಹಿಸಲಾಗದ ಸಾಧನೆಯ ಮೈಲುಗಲ್ಲುಗಳನ್ನು ಅರಿಯಬೇಕು. ಬಾಹ್ಯಾಕಾಶದ ವಾತಾವರಣ, ತಾಂತ್ರಿಕ ಸಾಧನಗಳ ಬಳಕೆ, ಸಂಶೋಧನೆಗಳ ಪ್ರಯೋಜನಗಳ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ಕೌತುಕ ಪಡುವ ಸಂಗತಿಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಬೇಕು’ ಎಂದು ತಿಳಿಸಿದರು.</p>.<p>ವ್ಯವಸ್ಥಾಪಕ ನಿರ್ದೇಶಕ ಆರ್.ಎನ್.ಶಿವುಸ್ವಾಮಿ ಹಾಗೂ ಶಿಕ್ಷಕ ಸಿಬ್ಬಂದಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಂತೇಬೆನ್ನೂರು</strong>: ‘ಗಗನಯಾನಿಗಳಾದ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಕ್ಷೇಮವಾಗಿ ಭೂಮಿಗೆ ಮರಳಿರುವುದು ಸಂಭ್ರಮದ ಕ್ಷಣ’ ಎಂದು ಚೈತನ್ಯ ಗುರುಕುಲ ಸಂಸ್ಥೆಯ ಅಧ್ಯಕ್ಷ ಆರ್.ನಾಗರಾಜ್ ಹೇಳಿದರು.</p>.<p>ಇಲ್ಲಿನ ಚೈತನ್ಯ ಗುರುಕುಲ ವಿದ್ಯಾಸಂಸ್ಥೆಯಲ್ಲಿ ಗುರುವಾರ ಗಗನಯಾನಿಗಳು ಕ್ಷೇಮವಾಗಿ ಭೂಮಿಗೆ ಮರಳಿದ ಸಂಭ್ರಮಾಚರಣೆಯಲ್ಲಿ ಅವರು ಮಾತನಾಡಿದರು.</p>.<p>‘ಎಂಟು ದಿನಗಳಲ್ಲಿ ಭೂಮಿಗೆ ಹಿಂತಿರುಗಿ ಬರಬೇಕಾಗಿದ್ದ ಗಗನ ಯಾತ್ರಿಗಳು ಪ್ರೊಪಲ್ಶನ್ ವ್ಯವಸ್ಥೆಯಲ್ಲಿನ ಸಮಸ್ಯೆಯಿಂದಾಗಿ 287 ದಿನಗಳು ಬಾಹ್ಯಾಕಾಶದಲ್ಲಿಯೇ ಇರಬೇಕಾಯಿತು. ಆದರೂ ದೃತಿಗೆಡದೆ 150ಕ್ಕೂ ಹೆಚ್ಚು ಪ್ರಯೋಗಳನ್ನು ನಡೆಸಿರುವುದು ಅವರ ಕಾರ್ಯದಕ್ಷತೆಗೆ ಸಾಕ್ಷಿ’ ಎಂದು ಶ್ಲಾಘಿಸಿದರು.</p>.<p>‘ಜೀವದ ಹಂಗು ತೊರೆದು ಸ್ಥಿರ ಮನಸ್ಥಿತಿಯಲ್ಲಿ ಗುರಿ ಮುಟ್ಟಿದ ಅಭೂತಪೂರ್ವ ಸಾಧಕರು. ಭಾರತೀಯ ಮೂಲದ ಸುನಿತಾ ಅವರ ಸಾಧನೆ ಮಹಿಳೆಯರಿಗೆ ಸ್ಫೂರ್ತಿ’ ಎಂದರು.</p>.<p>‘ಮಕ್ಕಳು ಬಾಹ್ಯಾಕಾಶದ ಬಗ್ಗೆ ಕುತೂಹಲ ಬೆಳೆಸಿಕೊಳ್ಳಬೇಕು. ಸಾಮಾನ್ಯರು ಊಹಿಸಲಾಗದ ಸಾಧನೆಯ ಮೈಲುಗಲ್ಲುಗಳನ್ನು ಅರಿಯಬೇಕು. ಬಾಹ್ಯಾಕಾಶದ ವಾತಾವರಣ, ತಾಂತ್ರಿಕ ಸಾಧನಗಳ ಬಳಕೆ, ಸಂಶೋಧನೆಗಳ ಪ್ರಯೋಜನಗಳ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ಕೌತುಕ ಪಡುವ ಸಂಗತಿಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಬೇಕು’ ಎಂದು ತಿಳಿಸಿದರು.</p>.<p>ವ್ಯವಸ್ಥಾಪಕ ನಿರ್ದೇಶಕ ಆರ್.ಎನ್.ಶಿವುಸ್ವಾಮಿ ಹಾಗೂ ಶಿಕ್ಷಕ ಸಿಬ್ಬಂದಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>