ದಾವಣಗೆರೆ: ನರೇಂದ್ರಮೋದಿ ಭಾಗವಹಿಸಲಿರುವ ಕಾರ್ಯಕ್ರಮಕ್ಕಾಗಿ ಸಿದ್ಧಗೊಳ್ಳುತ್ತಿರುವ ಮೈದಾನದಲ್ಲಿ ಗುರುವಾರ ಭೂಮಿಪೂಜೆ ಸಂದರ್ಭದಲ್ಲಿ ನಾಗರಹಾವು ಪ್ರತ್ಯಕ್ಷವಾಯಿತು.
ಬಿಜೆಪಿಯ ರಥಯಾತ್ರೆಗಳ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಮಾರ್ಚ್ 25ಕ್ಕೆ ನರೇಂದ್ರ ಮೋದಿ ದಾವಣಗೆರೆಗೆ ಬರಲಿದ್ದಾರೆ.
ಈ ಹಿನ್ನೆಲೆಯಲ್ಲಿ ದಾವಣಗೆರೆ ಜಿಎಂಐಟಿ ಪಕ್ಕದ ನಲ್ವತ್ತು ಎಕರೆ ಜಮೀನನ್ನು ಸಮತಟ್ಟುಗೊಳಿಸಲಾಗಿತ್ತು. ಚಪ್ಪರ ಹಾಕುವ, ವೇದಿಕೆ ತಯಾರಿಸುವ ಕಾರ್ಯಕ್ಕೆ ಭೂಮಿ ಪೂಜೆ ಗುರುವಾರ ಹಮ್ಮಿಕೊಳ್ಳಲಾಗಿತ್ತು.
ಭೂಮಿಪೂಜೆಗಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬರುವ ಕೆಲವೇ ನಿಮಿಷಗಳ ಮೊದಲು ನಾಗರ ಹಾವು ಕಾಣಿಸಿಕೊಂಡಿತು. ಬಿಜೆಪಿ ಕಾರ್ಯಕರ್ತರು ಸ್ವಲ್ಪ ಹೊತ್ತು ಸ್ತಬ್ದಗೊಂಡರು. ಬಳಿಕ ಹಾವು ಮುಂದಕ್ಕೆ ಸಾಗಲು ದಾರಿಮಾಡಿಕೊಟ್ಟರು.