<p><strong>ಸಂತೇಬೆನ್ನೂರು</strong>: ಬೆಳಗಾಗುತ್ತಿದ್ದಂತೆಯೇ ಹೊಲಗಳಿಗೆ ಗಿಳಿಗಳ ಹಿಂಡು ದಾಳಿಯಿಡುತ್ತಿದ್ದು, ಅವುಗಳಿಂದ ಪಾಪ್ಕಾರ್ನ್ ಮೆಕ್ಕೆಜೋಳದ ಬೆಳೆಯನ್ನು ರಕ್ಷಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ.</p>.<p>ಹೋಬಳಿ ವ್ಯಾಪ್ತಿಯಲ್ಲಿ ಪಾಪ್ಕಾರ್ನ್ ಮೆಕ್ಕೆಜೋಳ ಪ್ರಮುಖ ಬೆಳೆಯಾಗಿದ್ದು, ತೆನೆಗಳು ಹಾಲುಗಾಳು ಸ್ಥಿತಿಯಲ್ಲಿವೆ. ಮಿದುವಾದ ಹಾಗೂ ರುಚಿಕರ ಕಾಳು ತಿನ್ನಲು ಗಿಳಿಗಳು ಹೊಲಕ್ಕೆ ದಾಳಿ ಇಡುತ್ತಿವೆ. ಇಡೀ ತೆನೆಯನ್ನು ತಿಂದುಹಾಕುತ್ತಿವೆ. ಪ್ರತಿ ಎಕರೆಗೆ ₹20,000ದಿಂದ ₹25,000 ಖರ್ಚು ಮಾಡಿರುವ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.</p>.<p>ಗಿಳಿ ಓಡಿಸಲು ಸೂರ್ಯೋದಯಕ್ಕೆ ಮುನ್ನವೇ ಹೊಲಕ್ಕೆ ಧಾವಿಸುವ ರೈತರು ನಾನಾ ತಂತ್ರ ಅನುಸರಿಸುತ್ತಾರೆ. ತಟ್ಟೆ, ತಮಟೆ, ಡಬ್ಬ ಬಡಿಯುತ್ತಾರೆ. ಕೇಕೆ ಹಾಕಿ, ಪಟಾಕಿ ಸಿಡಿಸುತ್ತಾರೆ. ಡಮ್ಮಿ ಗನ್ ಬಳಸಿ ಗಿಳಿ ಓಡಿಸುವ ಯತ್ನ ನಡೆಸಿದರೂ, ನಿಯಂತ್ರಣ ಸಾಧ್ಯವಾಗದೇ ಬೆಳೆ ಹಾನಿಗೀಡಾಗಿದೆ.</p>.<p>ಈಚಿನ ದಿನಗಳಲ್ಲಿ ಮಧ್ಯಾಹ್ನದ ವೇಳೆಯೂ ಗಿಳಿಗಳು ದಾಳಿ ಇಡುತ್ತಿದ್ದು, 8 ಎಕರೆಯಲ್ಲಿ ಬೆಳೆದಿದ್ದ ಬೆಳೆ ಬಹುತೇಕ ಗಿಳಿಗಳಿಗೆ ಅಹಾರವಾಗಿದೆ ಎನ್ನುತ್ತಾರೆ ದೊಡ್ಡಬ್ಬಿಗೆರೆ ವಿನಾಯಕ ಹಾಗೂ ಶಿವು.</p>.<p>‘ಶಾಲೆಗೆ ತೆರಳುವ ಮುನ್ನ ಗಿಳಿ ಓಡಿಸಲು ಹೊಲಕ್ಕೆ ಹೋಗುತ್ತೇವೆ. ರೆಕಾರ್ಡೆಡ್ ಧ್ವನಿವರ್ಧಕಗಳನ್ನು ಹಿಡಿದು ಹೊಲ ಸುತ್ತುತ್ತೇವೆ. ಒಮ್ಮೆಗೆ 20 ರಿಂದ 30 ಗಿಳಿಗಳ ಹಿಂಡು ದಾಳಿ ಇಡುತ್ತವೆ’ ಎನ್ನುತ್ತಾರೆ ವಿದ್ಯಾರ್ಥಿಗಳು.</p>.<div><blockquote>ಮೇನಲ್ಲಿ ಪಾಪ್ ಕಾರ್ನ್ ಬಿತ್ತನೆ ಮಾಡಿ ಎರಡು ಎಕರೆಗೆ ₹45000 ಖರ್ಚು ಮಾಡಿದ್ದೆ. ಉತ್ತಮ ಮಳೆಯಿಂದ ಭರಪೂರ ಇಳುವರಿ ನಿರೀಕ್ಷೆ ಇತ್ತು. ಗಿಳಿಗಳ ದಾಳಿಯಿಂದ ಬೆಳೆ ಸಂಪೂರ್ಣ ಹಾಳಾಗಿದೆ </blockquote><span class="attribution">ಶ್ರೀನಿವಾಸ್ ಟಪಾಲ್ ಗ್ರಾಮಸ್ಥ</span></div>.<p>ರುಚಿಕರ ಪಾಪ್ಕಾರ್ನ್ ಮೆಕ್ಕೆಜೋಳ ಈ ಭಾಗದ ವಿಶೇಷ ಬೆಳೆ. ಬ್ರಾಂಡೆಡ್ ತಿನಿಸು ತಯಾರಿಸಲು ಇದಕ್ಕೆ ಭಾರಿ ಬೇಡಿಕೆ ಇದೆ. ಹೋಬಳಿಯಲ್ಲಿ 2,000 ಹೆಕ್ಟೇರ್ನಲ್ಲಿ ಪಾಪ್ಕಾರ್ನ್ ಬಿತ್ತನೆಯಾಗಿದೆ. ಈ ಪೈಕಿ 1,000 ಹೆಕ್ಟೇರ್ ಬೆಳೆ ಕೇದಿಗೆ ರೋಗದಿಂದ ಈಗಾಗಲೇ ನಾಶವಾಗಿದೆ. ಉಳಿದ ಬೆಳೆಯೂ ಗಿಳಿಗಳಿಂದ ಹಾಳಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಹಾನಿ ಸಮೀಕ್ಷೆ ನಡೆಸಬೇಕು ಎನ್ನುತ್ತಾರೆ ರೈತರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಂತೇಬೆನ್ನೂರು</strong>: ಬೆಳಗಾಗುತ್ತಿದ್ದಂತೆಯೇ ಹೊಲಗಳಿಗೆ ಗಿಳಿಗಳ ಹಿಂಡು ದಾಳಿಯಿಡುತ್ತಿದ್ದು, ಅವುಗಳಿಂದ ಪಾಪ್ಕಾರ್ನ್ ಮೆಕ್ಕೆಜೋಳದ ಬೆಳೆಯನ್ನು ರಕ್ಷಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ.</p>.<p>ಹೋಬಳಿ ವ್ಯಾಪ್ತಿಯಲ್ಲಿ ಪಾಪ್ಕಾರ್ನ್ ಮೆಕ್ಕೆಜೋಳ ಪ್ರಮುಖ ಬೆಳೆಯಾಗಿದ್ದು, ತೆನೆಗಳು ಹಾಲುಗಾಳು ಸ್ಥಿತಿಯಲ್ಲಿವೆ. ಮಿದುವಾದ ಹಾಗೂ ರುಚಿಕರ ಕಾಳು ತಿನ್ನಲು ಗಿಳಿಗಳು ಹೊಲಕ್ಕೆ ದಾಳಿ ಇಡುತ್ತಿವೆ. ಇಡೀ ತೆನೆಯನ್ನು ತಿಂದುಹಾಕುತ್ತಿವೆ. ಪ್ರತಿ ಎಕರೆಗೆ ₹20,000ದಿಂದ ₹25,000 ಖರ್ಚು ಮಾಡಿರುವ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.</p>.<p>ಗಿಳಿ ಓಡಿಸಲು ಸೂರ್ಯೋದಯಕ್ಕೆ ಮುನ್ನವೇ ಹೊಲಕ್ಕೆ ಧಾವಿಸುವ ರೈತರು ನಾನಾ ತಂತ್ರ ಅನುಸರಿಸುತ್ತಾರೆ. ತಟ್ಟೆ, ತಮಟೆ, ಡಬ್ಬ ಬಡಿಯುತ್ತಾರೆ. ಕೇಕೆ ಹಾಕಿ, ಪಟಾಕಿ ಸಿಡಿಸುತ್ತಾರೆ. ಡಮ್ಮಿ ಗನ್ ಬಳಸಿ ಗಿಳಿ ಓಡಿಸುವ ಯತ್ನ ನಡೆಸಿದರೂ, ನಿಯಂತ್ರಣ ಸಾಧ್ಯವಾಗದೇ ಬೆಳೆ ಹಾನಿಗೀಡಾಗಿದೆ.</p>.<p>ಈಚಿನ ದಿನಗಳಲ್ಲಿ ಮಧ್ಯಾಹ್ನದ ವೇಳೆಯೂ ಗಿಳಿಗಳು ದಾಳಿ ಇಡುತ್ತಿದ್ದು, 8 ಎಕರೆಯಲ್ಲಿ ಬೆಳೆದಿದ್ದ ಬೆಳೆ ಬಹುತೇಕ ಗಿಳಿಗಳಿಗೆ ಅಹಾರವಾಗಿದೆ ಎನ್ನುತ್ತಾರೆ ದೊಡ್ಡಬ್ಬಿಗೆರೆ ವಿನಾಯಕ ಹಾಗೂ ಶಿವು.</p>.<p>‘ಶಾಲೆಗೆ ತೆರಳುವ ಮುನ್ನ ಗಿಳಿ ಓಡಿಸಲು ಹೊಲಕ್ಕೆ ಹೋಗುತ್ತೇವೆ. ರೆಕಾರ್ಡೆಡ್ ಧ್ವನಿವರ್ಧಕಗಳನ್ನು ಹಿಡಿದು ಹೊಲ ಸುತ್ತುತ್ತೇವೆ. ಒಮ್ಮೆಗೆ 20 ರಿಂದ 30 ಗಿಳಿಗಳ ಹಿಂಡು ದಾಳಿ ಇಡುತ್ತವೆ’ ಎನ್ನುತ್ತಾರೆ ವಿದ್ಯಾರ್ಥಿಗಳು.</p>.<div><blockquote>ಮೇನಲ್ಲಿ ಪಾಪ್ ಕಾರ್ನ್ ಬಿತ್ತನೆ ಮಾಡಿ ಎರಡು ಎಕರೆಗೆ ₹45000 ಖರ್ಚು ಮಾಡಿದ್ದೆ. ಉತ್ತಮ ಮಳೆಯಿಂದ ಭರಪೂರ ಇಳುವರಿ ನಿರೀಕ್ಷೆ ಇತ್ತು. ಗಿಳಿಗಳ ದಾಳಿಯಿಂದ ಬೆಳೆ ಸಂಪೂರ್ಣ ಹಾಳಾಗಿದೆ </blockquote><span class="attribution">ಶ್ರೀನಿವಾಸ್ ಟಪಾಲ್ ಗ್ರಾಮಸ್ಥ</span></div>.<p>ರುಚಿಕರ ಪಾಪ್ಕಾರ್ನ್ ಮೆಕ್ಕೆಜೋಳ ಈ ಭಾಗದ ವಿಶೇಷ ಬೆಳೆ. ಬ್ರಾಂಡೆಡ್ ತಿನಿಸು ತಯಾರಿಸಲು ಇದಕ್ಕೆ ಭಾರಿ ಬೇಡಿಕೆ ಇದೆ. ಹೋಬಳಿಯಲ್ಲಿ 2,000 ಹೆಕ್ಟೇರ್ನಲ್ಲಿ ಪಾಪ್ಕಾರ್ನ್ ಬಿತ್ತನೆಯಾಗಿದೆ. ಈ ಪೈಕಿ 1,000 ಹೆಕ್ಟೇರ್ ಬೆಳೆ ಕೇದಿಗೆ ರೋಗದಿಂದ ಈಗಾಗಲೇ ನಾಶವಾಗಿದೆ. ಉಳಿದ ಬೆಳೆಯೂ ಗಿಳಿಗಳಿಂದ ಹಾಳಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಹಾನಿ ಸಮೀಕ್ಷೆ ನಡೆಸಬೇಕು ಎನ್ನುತ್ತಾರೆ ರೈತರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>