<p><strong>ಸಂತೇಬೆನ್ನೂರು:</strong>ಅಧಿಕ ಮಳೆಯಿಂದಾಗಿ ಕೊಳೆರೋಗದಿಂದ ಈರುಳ್ಳಿ ಬೆಳೆ ನಾಶವಾಗಿದೆ. ರೋಗ ನಿಯಂತ್ರಣಕ್ಕೆ ಬಾರದೆ ಬೇಸತ್ತ ಭೀಮನೆರೆ ರೈತರು ಈರುಳ್ಳಿ ಬೆಳೆಯನ್ನು ನಾಶ ಪಡಿಸಿದ್ದಾರೆ.</p>.<p>40 ಎಕರೆಯಲ್ಲಿ ಸಮೃದ್ಧವಾಗಿ ಬೆಳೆದಿದ್ದ ಈರುಳ್ಳಿಗೆ ಕೊಳೆರೋಗ ತಗುಲಿದ್ದು, ಒಂದು ತಿಂಗಳಿಂದ ರೋಗ ನಿಯಂತ್ರಣಕ್ಕೆ ರೈತರು ಹರಸಾಹಸಪಟ್ಟಿದ್ದು, ಕೊನೆಗೂ ಬೇಸತ್ತು ಈರುಳ್ಳಿ ಬೆಳೆನಾಶಪಡಿಸಿದರು.</p>.<p>‘ಎರಡು ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದೆ. ಕೊಳೆ ರೋಗಕ್ಕೆ ಬೆಳೆ ನಲುಗಿತ್ತು. ನಿವಾರಣೆಗೆ ₹31 ಸಾವಿರ ಖರ್ಚು ಮಾಡಿ 6 ಸಲ ಔಷಧ ಸಿಂಪಡಿಸಿದೆ. ರೋಗ ಹತೋಟಿಗೆ ಬರಲಿಲ್ಲ. ಈರುಳ್ಳಿ ಗಡ್ಡೆಗಳು ಕೊಳೆಯಲು ಆರಂಭಿಸಿದವು. 2 ಎಕರೆಗೆ ₹ 1ಲಕ್ಷ ಖರ್ಚು ಮಾಡಿದ್ದೆ.ಈರುಳ್ಳಿ ಬೆಳೆ ನಾಶ ಮಾಡದೆ ವಿಧಿಯಿರಲಿಲ್ಲ. ಇದರಿಂದ ಅಪಾರ ನಷ್ಟ ಉಂಟಾಗಿದೆ’ ಎಂದು ಅಳಲು ತೋಡಿಕೊಂಡರು ರೈತ ಮಹೇಂದ್ರ.</p>.<p>‘300ರಿಂದ 400 ಪಾಕೆಟ್ ಈರುಳ್ಳಿ ಇಳುವರಿ ಬರುವ ನಿರೀಕ್ಷೆ ಇತ್ತು. ₹ 20 ಸಾವಿರ ಖರ್ಚು ಮಾಡಿ ನಾಲ್ಕು ಬಾರಿ ಔಷಧ ಸಿಂಪಡಿಸಿದೆ. ಬೆಳೆ ಚೇತರಿಸಿಕೊಳ್ಳಲಿಲ್ಲ. ಗರಿ ಕೊಳೆತು ಉದುರಿತು. ಗಡ್ಡೆಗಳು ಕೊಳೆತ ಮೇಲೆ ಪ್ರಯೋಜನವಿಲ್ಲ. ಅದಕ್ಕಾಗಿ ನಾಶಪಡಿಸಿದೆ. 2 ಎಕರೆಗೆ ₹ 60 ಸಾವಿರ ಖರ್ಚು ಆಗಿದೆ’ ಎಂದು ರೈತ ರುದ್ರೇಶ್ ಬೇಸರಿಸಿದರು.</p>.<p>‘ಒಂದೆಡೆ ದುಬಾರಿ ಬೀಜದ ಖರೀದಿ. ಕೈಗೆಟುಕದ ಬೆಲೆ ದಾಟಿದ ಔಷಧ, ಗೊಬ್ಬರ, ನಿಯಂತ್ರಣಕ್ಕೆ ಬಾರದ ರೋಗ, ಹವಾಮಾನ ವೈಪರೀತ್ಯ, ಸದ್ಯ ಈರುಳ್ಳಿ ಬೆಲೆ ಕುಸಿತ ರೈತರ ಬದುಕನ್ನು ಅನಿಶ್ಚಿತಗೊಳಿಸಿವೆ’ ಎಂದು ರೈತ ಬಿ.ಎಚ್. ವೆಂಕಟೇಶ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಂತೇಬೆನ್ನೂರು:</strong>ಅಧಿಕ ಮಳೆಯಿಂದಾಗಿ ಕೊಳೆರೋಗದಿಂದ ಈರುಳ್ಳಿ ಬೆಳೆ ನಾಶವಾಗಿದೆ. ರೋಗ ನಿಯಂತ್ರಣಕ್ಕೆ ಬಾರದೆ ಬೇಸತ್ತ ಭೀಮನೆರೆ ರೈತರು ಈರುಳ್ಳಿ ಬೆಳೆಯನ್ನು ನಾಶ ಪಡಿಸಿದ್ದಾರೆ.</p>.<p>40 ಎಕರೆಯಲ್ಲಿ ಸಮೃದ್ಧವಾಗಿ ಬೆಳೆದಿದ್ದ ಈರುಳ್ಳಿಗೆ ಕೊಳೆರೋಗ ತಗುಲಿದ್ದು, ಒಂದು ತಿಂಗಳಿಂದ ರೋಗ ನಿಯಂತ್ರಣಕ್ಕೆ ರೈತರು ಹರಸಾಹಸಪಟ್ಟಿದ್ದು, ಕೊನೆಗೂ ಬೇಸತ್ತು ಈರುಳ್ಳಿ ಬೆಳೆನಾಶಪಡಿಸಿದರು.</p>.<p>‘ಎರಡು ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದೆ. ಕೊಳೆ ರೋಗಕ್ಕೆ ಬೆಳೆ ನಲುಗಿತ್ತು. ನಿವಾರಣೆಗೆ ₹31 ಸಾವಿರ ಖರ್ಚು ಮಾಡಿ 6 ಸಲ ಔಷಧ ಸಿಂಪಡಿಸಿದೆ. ರೋಗ ಹತೋಟಿಗೆ ಬರಲಿಲ್ಲ. ಈರುಳ್ಳಿ ಗಡ್ಡೆಗಳು ಕೊಳೆಯಲು ಆರಂಭಿಸಿದವು. 2 ಎಕರೆಗೆ ₹ 1ಲಕ್ಷ ಖರ್ಚು ಮಾಡಿದ್ದೆ.ಈರುಳ್ಳಿ ಬೆಳೆ ನಾಶ ಮಾಡದೆ ವಿಧಿಯಿರಲಿಲ್ಲ. ಇದರಿಂದ ಅಪಾರ ನಷ್ಟ ಉಂಟಾಗಿದೆ’ ಎಂದು ಅಳಲು ತೋಡಿಕೊಂಡರು ರೈತ ಮಹೇಂದ್ರ.</p>.<p>‘300ರಿಂದ 400 ಪಾಕೆಟ್ ಈರುಳ್ಳಿ ಇಳುವರಿ ಬರುವ ನಿರೀಕ್ಷೆ ಇತ್ತು. ₹ 20 ಸಾವಿರ ಖರ್ಚು ಮಾಡಿ ನಾಲ್ಕು ಬಾರಿ ಔಷಧ ಸಿಂಪಡಿಸಿದೆ. ಬೆಳೆ ಚೇತರಿಸಿಕೊಳ್ಳಲಿಲ್ಲ. ಗರಿ ಕೊಳೆತು ಉದುರಿತು. ಗಡ್ಡೆಗಳು ಕೊಳೆತ ಮೇಲೆ ಪ್ರಯೋಜನವಿಲ್ಲ. ಅದಕ್ಕಾಗಿ ನಾಶಪಡಿಸಿದೆ. 2 ಎಕರೆಗೆ ₹ 60 ಸಾವಿರ ಖರ್ಚು ಆಗಿದೆ’ ಎಂದು ರೈತ ರುದ್ರೇಶ್ ಬೇಸರಿಸಿದರು.</p>.<p>‘ಒಂದೆಡೆ ದುಬಾರಿ ಬೀಜದ ಖರೀದಿ. ಕೈಗೆಟುಕದ ಬೆಲೆ ದಾಟಿದ ಔಷಧ, ಗೊಬ್ಬರ, ನಿಯಂತ್ರಣಕ್ಕೆ ಬಾರದ ರೋಗ, ಹವಾಮಾನ ವೈಪರೀತ್ಯ, ಸದ್ಯ ಈರುಳ್ಳಿ ಬೆಲೆ ಕುಸಿತ ರೈತರ ಬದುಕನ್ನು ಅನಿಶ್ಚಿತಗೊಳಿಸಿವೆ’ ಎಂದು ರೈತ ಬಿ.ಎಚ್. ವೆಂಕಟೇಶ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>