<p><strong>ಹರಿಹರ:</strong> ಹರಿಹರದಿಂದ ತೋಳಹುಣಸೆಯ ದಾವಣಗೆರೆ ವಿಶ್ವವಿದ್ಯಾಲಯಕ್ಕೆ ಸಂಚರಿಸುವ ಬಸ್ಗೆ ಇಲ್ಲಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಗುರುವಾರ ಚಾಲನೆ ನೀಡಿದರು.</p>.<p>ಹರಿಹರ ನಗರ ಹಾಗೂ ತಾಲ್ಲೂಕಿನ ಗ್ರಾಮೀಣ ಪ್ರದೇಶದಿಂದ ನಿತ್ಯವೂ ವಿಶ್ವವಿದ್ಯಾಲಯಕ್ಕೆ ತೆರಳುವ ನೂರಾರು ವಿದ್ಯಾರ್ಥಿಗಳಿಗೆ ಈ ಬಸ್ ಸಂಚಾರದಿಂದ ಅನುಕೂಲವಾಗಲಿದೆ ಎಂದು ಸಂಸದರು ಹೇಳಿದರು.</p>.<p>‘ಹರಿಹರದಿಂದಲೇ ವಿಶ್ವವಿದ್ಯಾಲಯಕ್ಕೆ ನೇರವಾಗಿ ಈ ಬಸ್ ಸಂಚಾರ ಮಾಡಲಿದೆ. ವಿದ್ಯಾರ್ಥಿಗಳು ಹರಿಹರದಿಂದ ದಾವಣಗೆರೆಗೆ ತೆರಳಿ, ಅಲ್ಲಿಂದ ಮತ್ತೊಂದು ಬಸ್ ಹತ್ತುವ ಅಗತ್ಯ ಬರುವುದಿಲ್ಲ. ಹಾಗೆಯೇ ವಿಶ್ವವಿದ್ಯಾನಿಲಯದಿಂದ ನೇರವಾಗಿ ಹರಿಹರಕ್ಕೆ ಬಸ್ ಸಂಚಾರ ಇರಲಿದೆ’ ಎಂದು ಅವರು ಹೇಳಿದರು.</p>.<p>ಹರಿಹರ ನಿಲ್ದಾಣದಿಂದ ಪ್ರತಿ ದಿನ ಬೆಳಿಗ್ಗೆ 8.30, 8.45, 9 ಮತ್ತು 9.15ಕ್ಕೆ ಬಸ್ ಹೊರಡಲಿದೆ. ಸಂಜೆ 4.30, 4.45, 5 ಮತ್ತು 5.15ಕ್ಕೆ ವಿಶ್ವವಿದ್ಯಾಲಯದಿಂದ ಹರಿಹರಕ್ಕೆ ಬಸ್ ಹೊರಡಲಿದೆ ಎಂದು ಕೆಎಸ್ಆರ್ಟಿಸಿ ಹರಿಹರ ಡಿಪೊ ಅಧೀಕ್ಷಕ ಅಜಗರ್ ಅಲಿ ಖಾನ್ ಮಾಹಿತಿ ನೀಡಿದರು.</p>.<p>ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ತಾಲ್ಲೂಕು ಘಟಕದ ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್, ನಗರಸಭೆಯ ಉಪಾಧ್ಯಕ್ಷ ಸೈಯದ್ ಅಬ್ದುಲ್ ಅಲೀಂ ಹಾಗೂ ಇತರರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹರಿಹರ:</strong> ಹರಿಹರದಿಂದ ತೋಳಹುಣಸೆಯ ದಾವಣಗೆರೆ ವಿಶ್ವವಿದ್ಯಾಲಯಕ್ಕೆ ಸಂಚರಿಸುವ ಬಸ್ಗೆ ಇಲ್ಲಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಗುರುವಾರ ಚಾಲನೆ ನೀಡಿದರು.</p>.<p>ಹರಿಹರ ನಗರ ಹಾಗೂ ತಾಲ್ಲೂಕಿನ ಗ್ರಾಮೀಣ ಪ್ರದೇಶದಿಂದ ನಿತ್ಯವೂ ವಿಶ್ವವಿದ್ಯಾಲಯಕ್ಕೆ ತೆರಳುವ ನೂರಾರು ವಿದ್ಯಾರ್ಥಿಗಳಿಗೆ ಈ ಬಸ್ ಸಂಚಾರದಿಂದ ಅನುಕೂಲವಾಗಲಿದೆ ಎಂದು ಸಂಸದರು ಹೇಳಿದರು.</p>.<p>‘ಹರಿಹರದಿಂದಲೇ ವಿಶ್ವವಿದ್ಯಾಲಯಕ್ಕೆ ನೇರವಾಗಿ ಈ ಬಸ್ ಸಂಚಾರ ಮಾಡಲಿದೆ. ವಿದ್ಯಾರ್ಥಿಗಳು ಹರಿಹರದಿಂದ ದಾವಣಗೆರೆಗೆ ತೆರಳಿ, ಅಲ್ಲಿಂದ ಮತ್ತೊಂದು ಬಸ್ ಹತ್ತುವ ಅಗತ್ಯ ಬರುವುದಿಲ್ಲ. ಹಾಗೆಯೇ ವಿಶ್ವವಿದ್ಯಾನಿಲಯದಿಂದ ನೇರವಾಗಿ ಹರಿಹರಕ್ಕೆ ಬಸ್ ಸಂಚಾರ ಇರಲಿದೆ’ ಎಂದು ಅವರು ಹೇಳಿದರು.</p>.<p>ಹರಿಹರ ನಿಲ್ದಾಣದಿಂದ ಪ್ರತಿ ದಿನ ಬೆಳಿಗ್ಗೆ 8.30, 8.45, 9 ಮತ್ತು 9.15ಕ್ಕೆ ಬಸ್ ಹೊರಡಲಿದೆ. ಸಂಜೆ 4.30, 4.45, 5 ಮತ್ತು 5.15ಕ್ಕೆ ವಿಶ್ವವಿದ್ಯಾಲಯದಿಂದ ಹರಿಹರಕ್ಕೆ ಬಸ್ ಹೊರಡಲಿದೆ ಎಂದು ಕೆಎಸ್ಆರ್ಟಿಸಿ ಹರಿಹರ ಡಿಪೊ ಅಧೀಕ್ಷಕ ಅಜಗರ್ ಅಲಿ ಖಾನ್ ಮಾಹಿತಿ ನೀಡಿದರು.</p>.<p>ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ತಾಲ್ಲೂಕು ಘಟಕದ ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್, ನಗರಸಭೆಯ ಉಪಾಧ್ಯಕ್ಷ ಸೈಯದ್ ಅಬ್ದುಲ್ ಅಲೀಂ ಹಾಗೂ ಇತರರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>