<p><strong>ದಾವಣಗೆರೆ: </strong>ಲಾಕ್ಡೌನ್ ಸಂದರ್ಭದಲ್ಲಿ ಮಾರುಕಟ್ಟೆ ಸಿಗದೆ ಬೆಳೆಯನ್ನು ನಾಶಪಡಿಸುತ್ತಿದ್ದ ರೈತರ ನೆರವಿಗೆ ಫೇಸ್ಬುಕ್ ಮೂಲಕ ಯುವಕರ ಗುಂಪು ಸಹಾಯ ಹಸ್ತ ಚಾಚಿದೆ.ರಾಜ್ಯ, ಅಂತರರಾಜ್ಯದ ರೈತರುಇದರಿಂದ ನೆರವು ಪಡೆದಿದ್ದಾರೆ.</p>.<p>‘ಅನ್ನದಾತ ಜೀವದಾತ’ ಎಂಬ ಫೇಸ್ಬುಕ್ ಪೇಜ್ ಮೂಲಕ ಯುವಕರ ಗುಂಪು ಸಾಮಾಜಿಕ ಜಾಲತಾಣವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದೆ. ಈ ಪೇಜ್ನಲ್ಲಿ ರೈತರು ಬೆಳೆಯ ಮಾಹಿತಿಯನ್ನು ಫೋಟೊ ಅಥವಾ ವಿಡಿಯೊ ಮಾಡಿ ಹಾಕಿದರೆ ಸಾಕು. ರೈತರ ಜಮೀನಿಗೇ ಬಂದು ವ್ಯಾಪಾರಿಗಳು ಬೆಳೆಯನ್ನು ಖರೀದಿಸುತ್ತಾರೆ.</p>.<p>ಇಂತಹ ಆಲೋಚನೆಯ ಹಿಂದಿನ ರೂವಾರಿ ಪ್ರಖ್ಯಾತ್ಪುತ್ತೂರು. ರೈತರು ಹಾಗೂ ಖರೀದಿದಾರರ ಮಧ್ಯೆ ಸಂಪರ್ಕ ಸೇತುವಾಗಿ ಅವರು ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸ್ನೇಹಿತರಾದ ಅರುಣ್ ವಿರೂಪಾಕ್ಷ, ಶರತ್ ಬಾಬು, ಕನ್ನಡ ಮನಸು ಪವನ್ಜೊತೆಯಾಗಿದ್ದಾರೆ. ನೂರಾರು ಜನ ಪೇಜ್ ಬೆಂಬಲಿಸಿ ಶೇರ್ ಮಾಡುತ್ತಿದ್ದಾರೆ.</p>.<p>ದಾವಣಗೆರೆ, ಚಿತ್ರದುರ್ಗ, ಬಾಗಲಕೋಟೆ, ಕಲಬುರ್ಗಿ ಸೇರಿ ರಾಜ್ಯದ ಬಹುತೇಕ ಜಿಲ್ಲೆ ಹಾಗೂ ಗುಜರಾತ್, ಕೇರಳ ಸೇರಿ ಹಲವು ರಾಜ್ಯಗಳ ರೈತರು ಅವರನ್ನು ಸಂಪರ್ಕಿಸಿದ್ದಾರೆ. ಇಲ್ಲಿಯವರೆಗೆ180ಕ್ಕೂ ಹೆಚ್ಚು ರೈತರು ನೆರವು ಪಡೆದಿದ್ದಾರೆ.</p>.<p>ಪ್ರಖ್ಯಾತ್ ಮೂಲತಃ ಪುತ್ತೂರಿನವರು.ಹಾಸನದಲ್ಲಿ ಹೈನುಗಾರಿಕೆಯಲ್ಲಿ ತೊಡಗಿಕೊಂಡಿದ್ದು,ಸದ್ಯ ಬೆಂಗಳೂರಿನಲ್ಲಿದ್ದಾರೆ. 6 ವರ್ಷಗಳಿಂದ ‘ಉದ್ಯೋಗ ಕರ್ನಾಟಕ’ ಪೇಜ್ ಮೂಲಕ ನಿರುದ್ಯೋಗಿಗಳಿಗೆ ಉದ್ಯೋಗದ ಮಾಹಿತಿ ನೀಡಿ ನೆರವಾಗುತ್ತಿದ್ದಾರೆ.</p>.<p>‘ಉದ್ಯೋಗ ಅರಸಿ ಬೆಂಗಳೂರಿಗೆ ಹೋದಾಗ ಮೂಡಿದ ನಿರಾಸೆ ಹೈನುಗಾರಿಕೆಯತ್ತ ಮುಖ ಮಾಡಿಸಿತು. ಲಾಕ್ಡೌನ್ನಲ್ಲಿ ರೈತರ ಸಂಕಷ್ಟ ಕಂಡು ಈ ಯೋಚನೆ ಮಾಡಿದೆ. ಮಧ್ಯವರ್ತಿಗಳ ಹಾವಳಿ ಇಲ್ಲದೆ ರೈತರಿಗೆ ಖರೀದಿದಾರರನ್ನು ಹುಡುಕಿಕೊಡುವುದಷ್ಟೇ ನಮ್ಮ ಕೆಲಸ’ ಎಂದು ಪ್ರಖ್ಯಾತ್ ಪುತ್ತೂರು ‘ಪ್ರಜಾವಾಣಿ’ಗೆ ತಮ್ಮ ಯೋಜನೆ ಬಗ್ಗೆ ವಿವರಿಸಿದರು.</p>.<p>ನಗರ ಪ್ರದೇಶಗಳ ಅಪಾರ್ಟ್ಮೆಂಟ್ ನಿವಾಸಿಗಳಿಗೆ ಅಗತ್ಯವಿರುವ ತಾಜಾ ಹಣ್ಣನ್ನೂ ಈ ಪೇಜ್ ಮೂಲಕ ಪೂರೈಸಲಾಗುತ್ತಿದೆ. ನಿವಾಸಿಗಳು ವಾಟ್ಸ್ಆ್ಯಪ್ನಲ್ಲಿ ಬೇಡಿಕೆ ಸಲ್ಲಿಸಿದರೆ ಸಾಕು. ರೈತರು, ಗ್ರಾಹಕರ ನೇರ ಅನುಸಂಧಾನ ಇದರ ಹಿಂದಿನ ಉದ್ದೇಶ ಎಂದು ತಿಳಿಸಿದರು.</p>.<p>‘ನಾಲ್ಕೂವರೆ ಎಕರೆಯಲ್ಲಿ ಸಾವಯವ ಪದ್ಧತಿಯಲ್ಲಿ ಮಾವು ಬೆಳೆದಿದ್ದೆ. ಖರೀದಿದಾರರು ಇಲ್ಲದೆ ಕಂಗಾಲಾಗಿದ್ದ ಸಮಯದಲ್ಲಿ ಫೇಸ್ಬುಕ್ ಪೇಜ್ ನೆರವಿಗೆ ಬಂತು’ ಎಂದರು ರೈತ ಮಹೇಶ್ ಪಾಟೀಲ್.</p>.<p class="Subhead"><strong>ನೆರವಿಗೆ ಮುನ್ನುಡಿ ಬರೆದಬೆಳೆನಾಶ</strong></p>.<p>ಲಾಕ್ಡೌನ್ ಅವಧಿಯಲ್ಲಿ ಗೆಳೆಯರೊಬ್ಬರು 10 ಎಕರೆಯಲ್ಲಿ ಬೆಳೆದ ಕಬ್ಬನ್ನು ಮಾರಾಟ ಮಾಡಲಾಗದೆ ಸುಟ್ಟು ಹಾಕಿದ ವಿಷಯ ಪ್ರಖ್ಯಾತ್ ಅವರನ್ನು ಘಾಸಿಗೊಳಿಸಿತ್ತು. ಸ್ನೇಹಿತನಿಗೆ ನೆರವು ನೀಡಲು ಆಗಲಿಲ್ಲ ಎಂಬ ಕೊರಗು ಅವರನ್ನು ಕಾಡುತ್ತಿತ್ತು. ಆಗ ಹುಟ್ಟಿಕೊಂಡಿದ್ದೇ‘ಅನ್ನದಾತ ಜೀವದಾತ’ ಪೇಜ್. ಈ ಮೂಲಕ ಇಂದು ನೂರಾರು ರೈತರಿಗೆ ನೆರವಿನ ಹಸ್ತ ಚಾಚಿದ್ದಾರೆ.</p>.<p class="Subhead"><strong>ಆ್ಯಪ್ ರೂಪಿಸುವ ಚಿಂತನೆ</strong></p>.<p>ರೈತರಿಗೆ ಹೆಚ್ಚಿನ ನೆರವು ನೀಡಲು ಆ್ಯಪ್ ರೂಪಿಸುವ ಕೆಲಸ ನಡೆದಿದೆ. ರೈತರ ಜಮೀನಿನ ಲೊಕೇಷನ್ ಹಾಕಿದರೆ ಬೆಳೆ, ರೈತರ ವಿಳಾಸ ಸೇರಿ ಸಂಪೂರ್ಣ ಮಾಹಿತಿ ನೀಡುವ ಆ್ಯಪ್ ರೂಪಿಸುವ ಸಿದ್ಧತೆ ನಡೆದಿದೆ ಎಂದು ಪ್ರಖ್ಯಾತ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ: </strong>ಲಾಕ್ಡೌನ್ ಸಂದರ್ಭದಲ್ಲಿ ಮಾರುಕಟ್ಟೆ ಸಿಗದೆ ಬೆಳೆಯನ್ನು ನಾಶಪಡಿಸುತ್ತಿದ್ದ ರೈತರ ನೆರವಿಗೆ ಫೇಸ್ಬುಕ್ ಮೂಲಕ ಯುವಕರ ಗುಂಪು ಸಹಾಯ ಹಸ್ತ ಚಾಚಿದೆ.ರಾಜ್ಯ, ಅಂತರರಾಜ್ಯದ ರೈತರುಇದರಿಂದ ನೆರವು ಪಡೆದಿದ್ದಾರೆ.</p>.<p>‘ಅನ್ನದಾತ ಜೀವದಾತ’ ಎಂಬ ಫೇಸ್ಬುಕ್ ಪೇಜ್ ಮೂಲಕ ಯುವಕರ ಗುಂಪು ಸಾಮಾಜಿಕ ಜಾಲತಾಣವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದೆ. ಈ ಪೇಜ್ನಲ್ಲಿ ರೈತರು ಬೆಳೆಯ ಮಾಹಿತಿಯನ್ನು ಫೋಟೊ ಅಥವಾ ವಿಡಿಯೊ ಮಾಡಿ ಹಾಕಿದರೆ ಸಾಕು. ರೈತರ ಜಮೀನಿಗೇ ಬಂದು ವ್ಯಾಪಾರಿಗಳು ಬೆಳೆಯನ್ನು ಖರೀದಿಸುತ್ತಾರೆ.</p>.<p>ಇಂತಹ ಆಲೋಚನೆಯ ಹಿಂದಿನ ರೂವಾರಿ ಪ್ರಖ್ಯಾತ್ಪುತ್ತೂರು. ರೈತರು ಹಾಗೂ ಖರೀದಿದಾರರ ಮಧ್ಯೆ ಸಂಪರ್ಕ ಸೇತುವಾಗಿ ಅವರು ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸ್ನೇಹಿತರಾದ ಅರುಣ್ ವಿರೂಪಾಕ್ಷ, ಶರತ್ ಬಾಬು, ಕನ್ನಡ ಮನಸು ಪವನ್ಜೊತೆಯಾಗಿದ್ದಾರೆ. ನೂರಾರು ಜನ ಪೇಜ್ ಬೆಂಬಲಿಸಿ ಶೇರ್ ಮಾಡುತ್ತಿದ್ದಾರೆ.</p>.<p>ದಾವಣಗೆರೆ, ಚಿತ್ರದುರ್ಗ, ಬಾಗಲಕೋಟೆ, ಕಲಬುರ್ಗಿ ಸೇರಿ ರಾಜ್ಯದ ಬಹುತೇಕ ಜಿಲ್ಲೆ ಹಾಗೂ ಗುಜರಾತ್, ಕೇರಳ ಸೇರಿ ಹಲವು ರಾಜ್ಯಗಳ ರೈತರು ಅವರನ್ನು ಸಂಪರ್ಕಿಸಿದ್ದಾರೆ. ಇಲ್ಲಿಯವರೆಗೆ180ಕ್ಕೂ ಹೆಚ್ಚು ರೈತರು ನೆರವು ಪಡೆದಿದ್ದಾರೆ.</p>.<p>ಪ್ರಖ್ಯಾತ್ ಮೂಲತಃ ಪುತ್ತೂರಿನವರು.ಹಾಸನದಲ್ಲಿ ಹೈನುಗಾರಿಕೆಯಲ್ಲಿ ತೊಡಗಿಕೊಂಡಿದ್ದು,ಸದ್ಯ ಬೆಂಗಳೂರಿನಲ್ಲಿದ್ದಾರೆ. 6 ವರ್ಷಗಳಿಂದ ‘ಉದ್ಯೋಗ ಕರ್ನಾಟಕ’ ಪೇಜ್ ಮೂಲಕ ನಿರುದ್ಯೋಗಿಗಳಿಗೆ ಉದ್ಯೋಗದ ಮಾಹಿತಿ ನೀಡಿ ನೆರವಾಗುತ್ತಿದ್ದಾರೆ.</p>.<p>‘ಉದ್ಯೋಗ ಅರಸಿ ಬೆಂಗಳೂರಿಗೆ ಹೋದಾಗ ಮೂಡಿದ ನಿರಾಸೆ ಹೈನುಗಾರಿಕೆಯತ್ತ ಮುಖ ಮಾಡಿಸಿತು. ಲಾಕ್ಡೌನ್ನಲ್ಲಿ ರೈತರ ಸಂಕಷ್ಟ ಕಂಡು ಈ ಯೋಚನೆ ಮಾಡಿದೆ. ಮಧ್ಯವರ್ತಿಗಳ ಹಾವಳಿ ಇಲ್ಲದೆ ರೈತರಿಗೆ ಖರೀದಿದಾರರನ್ನು ಹುಡುಕಿಕೊಡುವುದಷ್ಟೇ ನಮ್ಮ ಕೆಲಸ’ ಎಂದು ಪ್ರಖ್ಯಾತ್ ಪುತ್ತೂರು ‘ಪ್ರಜಾವಾಣಿ’ಗೆ ತಮ್ಮ ಯೋಜನೆ ಬಗ್ಗೆ ವಿವರಿಸಿದರು.</p>.<p>ನಗರ ಪ್ರದೇಶಗಳ ಅಪಾರ್ಟ್ಮೆಂಟ್ ನಿವಾಸಿಗಳಿಗೆ ಅಗತ್ಯವಿರುವ ತಾಜಾ ಹಣ್ಣನ್ನೂ ಈ ಪೇಜ್ ಮೂಲಕ ಪೂರೈಸಲಾಗುತ್ತಿದೆ. ನಿವಾಸಿಗಳು ವಾಟ್ಸ್ಆ್ಯಪ್ನಲ್ಲಿ ಬೇಡಿಕೆ ಸಲ್ಲಿಸಿದರೆ ಸಾಕು. ರೈತರು, ಗ್ರಾಹಕರ ನೇರ ಅನುಸಂಧಾನ ಇದರ ಹಿಂದಿನ ಉದ್ದೇಶ ಎಂದು ತಿಳಿಸಿದರು.</p>.<p>‘ನಾಲ್ಕೂವರೆ ಎಕರೆಯಲ್ಲಿ ಸಾವಯವ ಪದ್ಧತಿಯಲ್ಲಿ ಮಾವು ಬೆಳೆದಿದ್ದೆ. ಖರೀದಿದಾರರು ಇಲ್ಲದೆ ಕಂಗಾಲಾಗಿದ್ದ ಸಮಯದಲ್ಲಿ ಫೇಸ್ಬುಕ್ ಪೇಜ್ ನೆರವಿಗೆ ಬಂತು’ ಎಂದರು ರೈತ ಮಹೇಶ್ ಪಾಟೀಲ್.</p>.<p class="Subhead"><strong>ನೆರವಿಗೆ ಮುನ್ನುಡಿ ಬರೆದಬೆಳೆನಾಶ</strong></p>.<p>ಲಾಕ್ಡೌನ್ ಅವಧಿಯಲ್ಲಿ ಗೆಳೆಯರೊಬ್ಬರು 10 ಎಕರೆಯಲ್ಲಿ ಬೆಳೆದ ಕಬ್ಬನ್ನು ಮಾರಾಟ ಮಾಡಲಾಗದೆ ಸುಟ್ಟು ಹಾಕಿದ ವಿಷಯ ಪ್ರಖ್ಯಾತ್ ಅವರನ್ನು ಘಾಸಿಗೊಳಿಸಿತ್ತು. ಸ್ನೇಹಿತನಿಗೆ ನೆರವು ನೀಡಲು ಆಗಲಿಲ್ಲ ಎಂಬ ಕೊರಗು ಅವರನ್ನು ಕಾಡುತ್ತಿತ್ತು. ಆಗ ಹುಟ್ಟಿಕೊಂಡಿದ್ದೇ‘ಅನ್ನದಾತ ಜೀವದಾತ’ ಪೇಜ್. ಈ ಮೂಲಕ ಇಂದು ನೂರಾರು ರೈತರಿಗೆ ನೆರವಿನ ಹಸ್ತ ಚಾಚಿದ್ದಾರೆ.</p>.<p class="Subhead"><strong>ಆ್ಯಪ್ ರೂಪಿಸುವ ಚಿಂತನೆ</strong></p>.<p>ರೈತರಿಗೆ ಹೆಚ್ಚಿನ ನೆರವು ನೀಡಲು ಆ್ಯಪ್ ರೂಪಿಸುವ ಕೆಲಸ ನಡೆದಿದೆ. ರೈತರ ಜಮೀನಿನ ಲೊಕೇಷನ್ ಹಾಕಿದರೆ ಬೆಳೆ, ರೈತರ ವಿಳಾಸ ಸೇರಿ ಸಂಪೂರ್ಣ ಮಾಹಿತಿ ನೀಡುವ ಆ್ಯಪ್ ರೂಪಿಸುವ ಸಿದ್ಧತೆ ನಡೆದಿದೆ ಎಂದು ಪ್ರಖ್ಯಾತ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>