‘ಅಂಬೇಡ್ಕರ್ ಅವರು ಪರಿಶಿಷ್ಟ ಜಾತಿಗೆ ಕಲ್ಪಿಸಿದ ಶೇ 15ರಷ್ಟು ಮೀಸಲಾತಿಯಡಿ ಮಾದಿಗ, ಛಲವಾದಿ, ಲಂಬಾಣಿ, ಭೋವಿ, ಕೊರಚ, ಕೊರಮ ಸೇರಿ ಹಲವು ಪರಿಶಿಷ್ಟ ಜಾತಿಗಳು ಸೌಲಭ್ಯ ಪಡೆಯುತ್ತಿವೆ. ಈಚೆಗೆ ಸಹೋದರ ಸಮಾಜವಾದ ಮಾದಿಗ ಸಮಾಜದ ಮುಖಂಡರು ಸಚಿವ ನಾರಾಯಣಸ್ವಾಮಿ ಅವರ ಬಗ್ಗೆ ಲಂಬಾಣಿ ಸಮುದಾಯದವರು ಅಸೂಯೆ ಭಾವನೆ ಹೊಂದಿದ್ದಾರೆ ಎಂದು ಆರೋಪಿಸಿರುವುದು ಸರಿಯಲ್ಲ. ನಮಗೂ ನಮ್ಮ ಸಹೋದರ ಸಮಾಜದ ಸಚಿವರ ಬಗ್ಗೆ ಅಭಿಮಾನವಿದೆ’ ಎಂದು ಅವರು ಹೇಳಿದರು.