<p>ಪ್ರಜಾವಾಣಿ ವಾರ್ತೆ</p>.<p><strong>ದಾವಣಗೆರೆ:</strong> ಬೈಕ್ನಲ್ಲಿ ಬಂದು ಚಿನ್ನದ ಆಭರಣ ಕಿತ್ತುಕೊಂಡು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ₹1.80 ಲಕ್ಷ ಮೌಲ್ಯದ 14 ಗ್ರಾಂ ತೂಕದ ಮಾಂಗಲ್ಯ ಸರ ಹಾಗೂ ಕೃತ್ಯಕ್ಕೆ ಬಳಸಿದ ಒಂದು ಕೆಟಿಎಂ ಬೈಕ್ ವಶಪಡಿಸಿಕೊಂಡಿದ್ದಾರೆ. </p>.<p>ಹಾವೇರಿ ತಾಲ್ಲೂಕಿನ ಹೊಸರಿತ್ತಿ ಗ್ರಾಮದ ನಿವಾಸಿಗಳಾದ ನಿಯಾಜ್ ಅಹಮದ್ ಎಂ. ಹಾಗೂ ರಾಜು ಬಂಧಿತರು. </p>.<p>ಡಿಸೆಂಬರ್ 16ರಂದು ಚನ್ನಗಿರಿ ತಾಲ್ಲೂಕಿನ ಅರಿಶಿನಘಟ್ಟ ಗ್ರಾಮದ ಸರೋಜಮ್ಮ ಅವರು ಬಸವಾಪಟ್ಟಣ ಗ್ರಾಮದ ದುರ್ಗಮ್ಮ ದೇವಸ್ಥಾನಕ್ಕೆ ತೆರಳಿದ್ದಾಗ ಸೂಳೆಕೆರೆಯ ತೂಗು ಸೇತುವೆ ಬಳಿ ಬೈಕ್ನಲ್ಲಿ ಬಂದಿದ್ದ ಆರೋಪಿಗಳು ಬಂಗಾರದ ಸರ ಕಿತ್ತುಕೊಡು ಪರಾರಿಯಾಗಿದ್ದರು. </p>.<p>ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. </p>
<p>ಪ್ರಜಾವಾಣಿ ವಾರ್ತೆ</p>.<p><strong>ದಾವಣಗೆರೆ:</strong> ಬೈಕ್ನಲ್ಲಿ ಬಂದು ಚಿನ್ನದ ಆಭರಣ ಕಿತ್ತುಕೊಂಡು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ₹1.80 ಲಕ್ಷ ಮೌಲ್ಯದ 14 ಗ್ರಾಂ ತೂಕದ ಮಾಂಗಲ್ಯ ಸರ ಹಾಗೂ ಕೃತ್ಯಕ್ಕೆ ಬಳಸಿದ ಒಂದು ಕೆಟಿಎಂ ಬೈಕ್ ವಶಪಡಿಸಿಕೊಂಡಿದ್ದಾರೆ. </p>.<p>ಹಾವೇರಿ ತಾಲ್ಲೂಕಿನ ಹೊಸರಿತ್ತಿ ಗ್ರಾಮದ ನಿವಾಸಿಗಳಾದ ನಿಯಾಜ್ ಅಹಮದ್ ಎಂ. ಹಾಗೂ ರಾಜು ಬಂಧಿತರು. </p>.<p>ಡಿಸೆಂಬರ್ 16ರಂದು ಚನ್ನಗಿರಿ ತಾಲ್ಲೂಕಿನ ಅರಿಶಿನಘಟ್ಟ ಗ್ರಾಮದ ಸರೋಜಮ್ಮ ಅವರು ಬಸವಾಪಟ್ಟಣ ಗ್ರಾಮದ ದುರ್ಗಮ್ಮ ದೇವಸ್ಥಾನಕ್ಕೆ ತೆರಳಿದ್ದಾಗ ಸೂಳೆಕೆರೆಯ ತೂಗು ಸೇತುವೆ ಬಳಿ ಬೈಕ್ನಲ್ಲಿ ಬಂದಿದ್ದ ಆರೋಪಿಗಳು ಬಂಗಾರದ ಸರ ಕಿತ್ತುಕೊಡು ಪರಾರಿಯಾಗಿದ್ದರು. </p>.<p>ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. </p>