ಔಷಧ: ರೋಗ ಹರಡದಂತೆ ತಡೆಯಲು ಲಸಿಕೆ ಹಾಕಿಸಬೇಕು. ರೋಗ ಬಂದಾಗ ತಲಾ 10 ಗ್ರಾಂ ವೀಳ್ಯದ ಎಲೆ, ಕಾಳುಮೆಣಸು, ಉಪ್ಪು, 50 ಗ್ರಾಂ ಬೆಲ್ಲವನ್ನು ಮಿಶ್ರಣ ಮಾಡಿ, ರುಬ್ಬಿ ದಿನಕ್ಕೆ ಎರಡು ಬಾರಿ ತಿನ್ನಿಸಬೇಕು. 20 ಗ್ರಾಂ ಅರಿಶಿಣ, 1 ಹಿಡಿ ಮೆಹಂದಿ ಸೊಪ್ಪು, 1 ಹಿಡಿ ಬೇವಿನ ಸೊಪ್ಪು, 10 ಎಸಳು ಬೆಳ್ಳುಳ್ಳಿಯನ್ನು ಅರ್ಧ ಲೀಟರ್ ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆಯಲ್ಲಿ ಬೇಯಿಸಿ, ತಣ್ಣಗಾದ ಮೇಲೆ ಗಾಯಗಳ ಮೇಲೆ ದಿನಕ್ಕೆ 3 ಬಾರಿ ಸವರಬೇಕು ಎಂದು ಡಾ. ಸುಂಕದ ಮಾಹಿತಿ ನೀಡಿದರು.