ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಸಮಾಜವನ್ನು ಸರಿದಾರಿಗೆ ತರಲು ಮಕ್ಕಳಿಗೆ ವಚನ ಸಂಸ್ಕಾರ ನೀಡಿ: ತರಳಬಾಳು ಸ್ವಾಮೀಜಿ

Published : 6 ಮಾರ್ಚ್ 2025, 12:41 IST
Last Updated : 6 ಮಾರ್ಚ್ 2025, 12:41 IST
ಫಾಲೋ ಮಾಡಿ
Comments
ದೇವರ ಸ್ವರೂಪ, ಭಕ್ತಿ ಹಾಗೂ ವ್ಯಕ್ತಿ ಹೇಗಿರಬೇಕು ಎಂಬುದನ್ನು ಶರಣ ಧರ್ಮ ತೋರಿಸಿಕೊಟ್ಟಿದೆ. ಬಸವಣ್ಣನವರ ಮೌಲ್ಯಗಳನ್ನು ಜಗತ್ತಿಗೆ ಪಸರಿಸುವ ಅಗತ್ಯವಿದೆ.
–ಬಸವರಾಜ ನಲ್ಲಿಸರ, ಶರಣ ಸಂಸ್ಕೃತಿ ಚಿಂತಕ
ಬಸವತತ್ವ ಪ್ರತಿಪಾದಕರನ್ನು ಉಗ್ರರಿಗೆ ಹೋಲಿಸುವುದು ಖಂಡನೀಯ. ನಾವು ಶರಣತತ್ವ ಪರಿಪಾಲನೆ ಮಾಡುತ್ತಿದ್ದೇವೆಯೇ ಹೊರತು ಮತ್ತೊಬ್ಬರ ಮೇಲೆ ದಾಳಿ ಮಾಡುತ್ತಿಲ್ಲ.
–ಎಚ್‌.ಎಸ್‌.ಮಲ್ಲಿಕಾರ್ಜುನಪ್ಪ, ‘ಶರಣ ಸಿರಿ’ ಪ್ರಶಸ್ತಿ ಪುರಸ್ಕೃತ
‘ಜೈ ಶ್ರೀರಾಮ್‌’ ಘೋಷಣೆಗೆ ಆಕ್ಷೇಪ
ಮಾಜಿ ಸಂಸದ ದಿವಂಗತ ಜಿ.ಮಲ್ಲಿಕಾರ್ಜುನಪ್ಪ ಮತ್ತು ಹಾಲಮ್ಮ ಹೆಸರಿನಲ್ಲಿ ‘ಶರಣ ಸಿರಿ’ ಪ್ರಶಸ್ತಿಯ ದತ್ತಿನಿಧಿ ಸ್ಥಾಪಿಸಿದ ಬಿಜೆಪಿ ನಾಯಕಿ ಗಾಯತ್ರಿ ಸಿದ್ದೇಶ್ವರ ಅವರು ಭಾಷಣದ ಅಂತ್ಯದಲ್ಲಿ ‘ಜೈ ಶ್ರೀರಾಮ್‌’ ಎಂದು ಕೂಗಿದ್ದಕ್ಕೆ ಆಕ್ಷೇಪ ವ್ಯಕ್ತವಾಯಿತು. ‘ಬಸವಣ್ಣನವರನ್ನು ಮರೆಯುವುದು ಸರಿಯಲ್ಲ. ಶರಣ ಧರ್ಮಕ್ಕೆ ವಿರುದ್ಧವಾಗಿ ಯಾರೊಬ್ಬರೂ ನಡೆಯಬಾರದು’ ಎಂದು ‘ಶರಣ ಸಿರಿ’ ಪ್ರಶಸ್ತಿ ಸ್ವೀಕರಿಸಿದ ಎಚ್‌.ಎಸ್‌.ಮಲ್ಲಿಕಾರ್ಜುನಪ್ಪ ಆಕ್ಷೇಪ ದಾಖಲಿಸಿದರು. ‘ಗಾಯತ್ರಿ ಸಿದ್ಧೇಶ್ವರ ಇನ್ನೂ ರಾಜಕೀಯ ಗುಂಗಿನಲ್ಲೇ ಇದ್ದಾರೆ’ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸೂಕ್ಷ್ಮವಾಗಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT