ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲಾ ತುರ್ತು ಸೇವೆಗಳನ್ನು ಒಂದುಗೂಡಿಸಿ ಇಆರ್ ಎಸ್ಎಸ್(ಎಮರ್ಜೆನ್ಸಿ ರೆಸ್ಪಾನ್ಸ್ ಸಪೋರ್ಟ್ ಸಿಸ್ಟಮ್) ಸಿದ್ಧಪಡಿಸಲಾಗಿದೆ. ಈ ಯೋಜನೆಯಡಿ ನಾಲ್ಕು ವಾಹನಗಳನ್ನು ರಾಯಚೂರು ಜಿಲ್ಲಾ ಪೊಲೀಸ್ ಘಟಕಕ್ಕೆ ಸರ್ಕಾರವು ಒದಗಿಸಿದೆ. ಈ ವಾಹನಗಳು ರಾಯಚೂರು ನಗರ, ಲಿಂಗಸುಗೂರು ಮತ್ತು ಸಿಂಧನೂರು ವ್ಯಾಪ್ತಿಗೆ ಒಳಪಟ್ಟಂತೆ ಸಂಬಂಧಿಸಿದ ಉಪ ವಿಭಾಗದ ಡಿವೈಎಸ್ಪಿ ಅವರ ಉಸ್ತುವಾರಿಯಲ್ಲಿ ವಾಹನಗಳು ಕರ್ತವ್ಯ ನಿರ್ವಹಿಸುತ್ತವೆ ಎಂದು ತಿಳಿಸಿದರು.