ಗ್ರಾಮದ ಪ್ರಕಾಶನಾಯ್ಕ (35) ಆತ್ಮಹತ್ಯೆ ಮಾಡಿಕೊಂಡವರು. ಬೇರೆಯವರ ಜಮೀನಿನನ್ನು ಗೇಣಿ ಪಡೆದು (ಲಾವಣಿ) ವ್ಯವಸಾಯ ಮಾಡುತ್ತಿದ್ದರು. ಬೆಳೆ ಬೆಳೆಯಲು ಹಲವು ಬ್ಯಾಂಕ್ಗಳಲ್ಲಿ ಸಾಲ ಮಾಡಿದ್ದರು. ಸಮರ್ಪಕ ಮಳೆ ಆಗದ ಕಾರಣ ಬೆಳೆ ಬಂದಿರಲಿಲ್ಲ. ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಪತ್ನಿ ದೂರು ನೀಡಿದ್ದಾರೆ.