ಈಗಿನ ಎಪಿಎಂಸಿ ವ್ಯವಸ್ಥೆಯಲ್ಲಿ ದಲಾಲಿ ಶೇ 4, ಮುಂಗಡ ಹಣಕ್ಕೆ ಬಡ್ಡಿ ಶೇ 2, ತೂಕದಲ್ಲಿ ವ್ಯತ್ಯಾಸ ಶೇ 4, ಹಮಾಲಿ ಶೇ 2, ತಲಗಾಲು ಶೇ 4, ಸಾಗಾಣಿಕೆ ವೆಚ್ಚ ಶೇ 2 ಮತ್ತು ಸೋರಿಕೆ ಶೇ 2 ಒಟ್ಟು ಶೇ 20ರಷ್ಟು ರೈತರಿಗೆ ನಷ್ಟವಾಗಲಿದೆ. ಹೀಗಾಗಿ ಸರ್ಕಾರಗಳನ್ನೇ ಅಲುಗಾಡಿಸುವಷ್ಟು ಬಲಶಾಲಿಯಾಗಿರುವ ರೈತ ಸಂಘಟನೆಗಳಿಗೆ ಎಪಿಎಂಸಿಯಲ್ಲಿ ನಿತ್ಯ ಆಗುತ್ತಿರುವ ಅನ್ಯಾಯವನ್ನು ತಡೆಯಲು ಏಕೆ ಸಾಧ್ಯವಾಗಿಲ್ಲ? ಈ ನಿಟ್ಟಿನಲ್ಲಿ ಎಪಿಎಂಸಿ ವ್ಯವಸ್ಥೆ ಬೇಕೇ? ಈ ಕಾಯ್ದೆಗೆ ತಿದ್ದುಪಡಿ ಬೇಡವೇ ಎಂಬ ಬಗ್ಗೆ ರೈತರು ಹಾಗೂ ರೈತ ಮುಖಂಡರು ಸಮಗ್ರವಾಗಿ ಚಿಂತಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.