<p><strong>ತ್ಯಾವಣಿಗೆ:</strong> ಭದ್ರಾ ಉಪವಿಭಾಗದ ನಾಲೆಗಳಲ್ಲಿ ಸಮರ್ಪಕವಾಗಿ ನೀರು ಹರಿಯುತ್ತಿಲ್ಲ ಎಂದು ಮತ್ತಿ, ತಿಮ್ಮಪ್ಪ ಕ್ಯಾಂಪ್, ಗೋಣಿವಾಡ, ದಾಸಪ್ಪ ನಗರ, ಕಾರಿಗನೂರು ಕ್ಯಾಂಪ್, ಆಂಜನೇಯ ನಗರ, ಕುಕ್ಕವಾಡ, ಕೊಳೇನಹಳ್ಳಿ ಗ್ರಾಮದ ರೈತರು ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. </p>.<p>ಸಮೀಪದ ಕುಕ್ಕವಾಡ ಗ್ರಾಮದ ಕಬ್ಬು ಬೆಳೆಗಾರರ ಸಂಘದ ಕಚೇರಿಯಲ್ಲಿ ರೈತ ಮುಖಂಡ ತೇಜಸ್ವಿ ಪಟೇಲ್ ಅಧ್ಯಕ್ಷತೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ, ‘ಭದ್ರಾ ಡ್ಯಾಂನಿಂದ ನೀರು ಬಿಟ್ಟು 38 ದಿನ ಕಳೆದರೂ, ನಮಗೆ ಸಮರ್ಪಕವಾಗಿ ತಲುಪುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು. </p>.<p>‘ಅಧಿಕಾರಿಗಳ ಜೊತೆ ಚರ್ಚಿಸಿ ರೈತರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುತ್ತೇನೆ’ ಎಂದು ಕಾರ್ಯನಿರ್ವಾಹಕ ಎಂಜಿನಿಯರ್ ಜಿ.ಬಿ. ಚನ್ನಬಸಪ್ಪ ಹೇಳಿದರು. </p>.<p>‘ನೀರು ಬರುತ್ತಿಲ್ಲ ಎಂದು ಕರೆ ಮಾಡಿದರೆ ಹಾರಿಕೆ ಉತ್ತರ ನೀಡುತ್ತೀರಿ. ನಮಗೆ ನೀರು ಸಿಗದೆ ಮೂರು ತಿಂಗಳಾಯಿತು’ ಎಂದು ರೈತ ಮಲ್ಲೇಶಪ್ಪ ದೂರಿದರು. </p>.<p>‘ನೀರು ನಿರ್ವಹಣೆಯಲ್ಲಿ ಅಧಿಕಾರಿಗಳ ನಡುವೆ ಸಮನ್ವಯತೆ ಇದ್ದರೆ ಕೊನೆ ಭಾಗದ ರೈತರಿಗೆ ನೀರು ಹರಿಸಬಹುದು. ಅಧಿಕಾರಿಗಳು ಮೊದಲೇ ಕಾಲುವೆಗಳ ಸ್ಥಿತಿ ಪರಿಶೀಲಿಸಬೇಕು’ ಎಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ, ರೈತ ಮುಖಂಡ ತೇಜಸ್ವಿ ಪಟೇಲ್ ಹೇಳಿದರು. </p>.<p>ಪೊಲೀಸ್ ಇಲಾಖೆ, ಬೆಸ್ಕಾಂ, ಕಂದಾಯ ಇಲಾಖೆ ಅಧಿಕಾರಿಗಳ ಸಹಕಾರದೊಂದಿಗೆ ಅಕ್ರಮ ಪಂಪ್ಸೆಟ್ ತೆರವು ಮಾಡಬೇಕು. ರೈತರಿಂದ ಅಹಿತಕರ ಘಟನೆಯಾಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ತಿಳಿಸಿದರು. </p>.<p>‘ಬುಧವಾರದಿಂದ ನಾಲ್ಕು ದಿನ ರಾತ್ರಿ, ಹಗಲು ಕಾಲುವೆ ತುಂಬಾ ನೀರು ಹರಿಸಲಾಗುವುದು’ ಎಂದು ಎಇಇ ರಮೇಶ್ ಭರವಸೆ ನೀಡಿದರು. </p>.<p>ಸಹಾಯಕ ಅಧಿಕಾರಿ ಮಧು, ಎಂಜಿನಿಯರ್ ತಿಪ್ಪೇಶ್, ರಘುವೀರ್, ಸತೀಶ್ ಕೊಳೇನಹಳ್ಳಿ, ಮಲ್ಲೇಶಪ್ಪ, ಕೃಷಿಕ ಮಂಜುನಾಥ್, ಗಂಗಾಧರ್, ವಕೀಲ ಹನುಮಂತಪ್ಪ, ಎನ್. ಎಂ. ಮಂಜುನಾಥ್, ಕೆ.ಎನ್. ಮಂಜುನಾಥ್ ಇತರರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತ್ಯಾವಣಿಗೆ:</strong> ಭದ್ರಾ ಉಪವಿಭಾಗದ ನಾಲೆಗಳಲ್ಲಿ ಸಮರ್ಪಕವಾಗಿ ನೀರು ಹರಿಯುತ್ತಿಲ್ಲ ಎಂದು ಮತ್ತಿ, ತಿಮ್ಮಪ್ಪ ಕ್ಯಾಂಪ್, ಗೋಣಿವಾಡ, ದಾಸಪ್ಪ ನಗರ, ಕಾರಿಗನೂರು ಕ್ಯಾಂಪ್, ಆಂಜನೇಯ ನಗರ, ಕುಕ್ಕವಾಡ, ಕೊಳೇನಹಳ್ಳಿ ಗ್ರಾಮದ ರೈತರು ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. </p>.<p>ಸಮೀಪದ ಕುಕ್ಕವಾಡ ಗ್ರಾಮದ ಕಬ್ಬು ಬೆಳೆಗಾರರ ಸಂಘದ ಕಚೇರಿಯಲ್ಲಿ ರೈತ ಮುಖಂಡ ತೇಜಸ್ವಿ ಪಟೇಲ್ ಅಧ್ಯಕ್ಷತೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ, ‘ಭದ್ರಾ ಡ್ಯಾಂನಿಂದ ನೀರು ಬಿಟ್ಟು 38 ದಿನ ಕಳೆದರೂ, ನಮಗೆ ಸಮರ್ಪಕವಾಗಿ ತಲುಪುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು. </p>.<p>‘ಅಧಿಕಾರಿಗಳ ಜೊತೆ ಚರ್ಚಿಸಿ ರೈತರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುತ್ತೇನೆ’ ಎಂದು ಕಾರ್ಯನಿರ್ವಾಹಕ ಎಂಜಿನಿಯರ್ ಜಿ.ಬಿ. ಚನ್ನಬಸಪ್ಪ ಹೇಳಿದರು. </p>.<p>‘ನೀರು ಬರುತ್ತಿಲ್ಲ ಎಂದು ಕರೆ ಮಾಡಿದರೆ ಹಾರಿಕೆ ಉತ್ತರ ನೀಡುತ್ತೀರಿ. ನಮಗೆ ನೀರು ಸಿಗದೆ ಮೂರು ತಿಂಗಳಾಯಿತು’ ಎಂದು ರೈತ ಮಲ್ಲೇಶಪ್ಪ ದೂರಿದರು. </p>.<p>‘ನೀರು ನಿರ್ವಹಣೆಯಲ್ಲಿ ಅಧಿಕಾರಿಗಳ ನಡುವೆ ಸಮನ್ವಯತೆ ಇದ್ದರೆ ಕೊನೆ ಭಾಗದ ರೈತರಿಗೆ ನೀರು ಹರಿಸಬಹುದು. ಅಧಿಕಾರಿಗಳು ಮೊದಲೇ ಕಾಲುವೆಗಳ ಸ್ಥಿತಿ ಪರಿಶೀಲಿಸಬೇಕು’ ಎಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ, ರೈತ ಮುಖಂಡ ತೇಜಸ್ವಿ ಪಟೇಲ್ ಹೇಳಿದರು. </p>.<p>ಪೊಲೀಸ್ ಇಲಾಖೆ, ಬೆಸ್ಕಾಂ, ಕಂದಾಯ ಇಲಾಖೆ ಅಧಿಕಾರಿಗಳ ಸಹಕಾರದೊಂದಿಗೆ ಅಕ್ರಮ ಪಂಪ್ಸೆಟ್ ತೆರವು ಮಾಡಬೇಕು. ರೈತರಿಂದ ಅಹಿತಕರ ಘಟನೆಯಾಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ತಿಳಿಸಿದರು. </p>.<p>‘ಬುಧವಾರದಿಂದ ನಾಲ್ಕು ದಿನ ರಾತ್ರಿ, ಹಗಲು ಕಾಲುವೆ ತುಂಬಾ ನೀರು ಹರಿಸಲಾಗುವುದು’ ಎಂದು ಎಇಇ ರಮೇಶ್ ಭರವಸೆ ನೀಡಿದರು. </p>.<p>ಸಹಾಯಕ ಅಧಿಕಾರಿ ಮಧು, ಎಂಜಿನಿಯರ್ ತಿಪ್ಪೇಶ್, ರಘುವೀರ್, ಸತೀಶ್ ಕೊಳೇನಹಳ್ಳಿ, ಮಲ್ಲೇಶಪ್ಪ, ಕೃಷಿಕ ಮಂಜುನಾಥ್, ಗಂಗಾಧರ್, ವಕೀಲ ಹನುಮಂತಪ್ಪ, ಎನ್. ಎಂ. ಮಂಜುನಾಥ್, ಕೆ.ಎನ್. ಮಂಜುನಾಥ್ ಇತರರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>