‘ರಾಜ್ಯದಲ್ಲಿ ಸಮುದಾಯ ಭವನ, ಚರ್ಚ್, ಸ್ಮಶಾನ ಅಭಿವೃದ್ಧಿ, ಕಾಂಪೌಂಡ್, ಅನಾಥಾಶ್ರಮ, ವೃದ್ಧಾಶ್ರಮ ನಿರ್ಮಾಣ ಒಳಗೊಂಡಂತೆ ₹ 28 ಕೋಟಿಯ 147 ಪ್ರಸ್ತಾವಗಳು ಸಿಎಂ ಪರಿಶೀಲನೆಯಲ್ಲಿವೆ. ದಾವಣಗೆರೆ ಜಿಲ್ಲೆಯಲ್ಲಿ ಸಮುದಾಯದ 20-22 ಸಂಸ್ಥೆಗಳು ಸೌಲಭ್ಯ ಪಡೆದಿವೆ. ಸರ್ಕಾರದ ಸೌಲಭ್ಯಗಳು ಕಟ್ಟ ಕಡೆಯ ಅಲ್ಪಸಂಖ್ಯಾತರಿಗೂ ಸಿಗಬೇಕು ಎಂಬ ಆಶಯದೊಂದಿಗೆ ತಾವು ರಾಜ್ಯ ಪ್ರವಾಸ ಮಾಡುತ್ತಿದ್ದು, ಇದುವರೆಗೆ 22 ಜಿಲ್ಲೆಗಳಿಗೆ ಭೇಟಿ ನೀಡಿದ್ದೇನೆ’ ಎಂದರು.