ಭಾರತ್ ಕಾಲೊನಿ 11ನೇ ಕ್ರಾಸ್ ನಿವಾಸಿ ಆರ್. ಶಂಕರಪ್ಪ ಹಾಗೂ ಚಿತ್ರದುರ್ಗದ ರವಿಕುಮಾರ ನಾಯ್ಕ್ ವಂಚನೆ ಮಾಡಿದ ಆರೋಪಿಗಳು. ನ್ಯಾಯಾಲಯದಲ್ಲಿ ಜವಾನ ಹುದ್ದೆ ಕೊಡಿಸುವುದಾಗಿ ₹ 3 ಲಕ್ಷ ಆರೋಪಿಗಳು ಪಡೆದಿದ್ದಾರೆ. ಈಗ ಉದ್ಯೋಗವನ್ನೂ ಕೊಡಿಸದೇ, ಹಣವನ್ನೂ ವಾಪಸ್ ಮಾಡದೇ ತಪ್ಪಿಸಿಕೊಂಡಿದ್ದಾರೆ. ಇದೇ ರೀತಿ ಏಳುಮಲೈ, ಸುಹಾಸಿನಿ, ಭಾರತ್ ಕಾಲೊನಿಯ ಇತರರಿಂದಲೂ ಹಣ ಪಡೆದಿದ್ದಾರೆ ಎಂದು ಭಾರತ್ ಕಾಲೊನಿಯ ತುಳಸಿಮಣಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.