ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ | ಬಹುಮಾನದ ಆಮಿಷ; ₹ 49,897 ವಂಚನೆ

Published 1 ಫೆಬ್ರುವರಿ 2024, 6:44 IST
Last Updated 1 ಫೆಬ್ರುವರಿ 2024, 6:44 IST
ಅಕ್ಷರ ಗಾತ್ರ

ದಾವಣಗೆರೆ: ಬಹುಮಾನದ ಆಮಿಷ ತೋರಿಸಿ ಪೊಲೀಸ್ ಸಿಬ್ಬಂದಿಯೊಬ್ಬರಿಗೆ ಆನ್‌ಲೈನ್‌ ಮೂಲಕ ₹ 49,897 ವಂಚಿಸಿರುವ ಘಟನೆ ನಡೆದಿದೆ.

ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಕಚೇರಿಯಲ್ಲಿ ಪೊಲೀಸ್ ಹೆಡ್‌ಕಾನ್‌ಸ್ಟೆಬಲ್‌ ಆಗಿ ಕರ್ತವ್ಯ ನಿರ್ವಹಿಸುತ್ತಿರುವ, ಡಾಲರ್ಸ್ ಕಾಲೊನಿಯ ನಿವಾಸಿ ಜಯನಾಯ್ಕ ಮೋಸಕ್ಕೊಳಗಾದವರು.

‘₹ 6,660 ಬೆಲೆಯ ಎಸ್‌ಬಿಐ ರಿವಾರ್ಡ್‌ ಪಾಯಿಂಟ್ಸ್‌ ಗಳಿಸಿದ್ದೀರಿ ಎಂದು ಅಪರಿಚಿತ ಮೊಬೈಲ್‌ ಸಂಖ್ಯೆಯಿಂದ ಬಂದಿದ್ದ ಲಿಂಕ್‌ ಕ್ಲಿಕ್‌ ಮಾಡಿದ್ದೆ. ಪಾಸ್‌ವರ್ಡ್‌ ಅಪ್‌ಡೇಟ್‌ ಮಾಡಿದ ನಂತರ ಬಂದಿದ್ದ ಒಟಿಪಿಯನ್ನೂ ನಮೂದಿಸಿದ್ದೆ. ಬಳಿಕ ಬ್ಯಾಂಕ್‌ ಖಾತೆ ಪರಿಶೀಲಿಸಿದಾಗ ನನ್ನ ಖಾತೆಯಿಂದ ₹ 49,897 ಕಡಿತವಾಗಿರುವುದು ಗೊತ್ತಾಯಿತು’ ಎಂದು ಜಯನಾಯ್ಕ ದೂರಿದ್ದಾರೆ.

ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT