<p><strong>ಹರಿಹರ</strong>: ನಗರದ ಗಾಂಧಿ ಮೈದಾನದಲ್ಲಿ ಸಾರ್ವಜನಿಕ ವಿನಾಯಕ ಸಂಘ ಆಯೋಜಿಸಿರುವ 62ನೇ ವರ್ಷದ ಗಣಶೋತ್ಸವದಲ್ಲಿ ನಿತ್ಯ ಪ್ರದರ್ಶನ ಮಾಡುತ್ತಿರುವ ಹರಿಹರೇಶ್ವರ ಸ್ವಾಮಿ ಪೌರಾಣಿಕ ಹಿನ್ನೆಲೆ ಆಧರಿಸಿದ ರೂಪಕ ಪ್ರದರ್ಶನ ಜನಮನ ಸೆಳೆಯುತ್ತಿದೆ.</p>.<p>ಸೆಪ್ಟೆಂಬರ್ 7ರಿಂದ ನಿತ್ಯ 10 ಪ್ರದರ್ಶನದಂತೆ ಈವರೆಗೆ 140 ಪ್ರದರ್ಶನಗಳು ನಡೆದಿದ್ದು, ಈವರೆಗೆ 10,000 ಜನರು ವೀಕ್ಷಿಸಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.</p>.<p><strong>ರೂಪಕ ಹಿನ್ನೆಲೆ:</strong></p>.<p>ಪುರಾಣಗಳ ಪ್ರಕಾರ ಹರಿಹರ ಈ ಹಿಂದೆ ‘ಗುಹಾರಣ್ಯ’ ಎಂದು ಪ್ರಸಿದ್ಧಿ ಪಡೆದಿತ್ತು. ಇಲ್ಲಿದ್ದ ಗುಹಾರಾಕ್ಷಸ ಜನರಿಗೆ, ದೇವತೆಗಳಿಗೆ ಕಂಟಕನಾಗಿ ಪರಿಣಮಿಸಿದ್ದ. ಆತ ಯಾವುದೇ ವ್ಯಕ್ತಿ, ದೇವ, ದೇವತೆಯಿಂದ ಸಾವು ಬರದಂತೆ ವರವನ್ನು ಪಡೆದಿದ್ದ.</p>.<p>ಆಗ ಹರಿ ಮತ್ತು ಹರರು ಒಂದು ದೇಹಿಯಾಗಿ ರೂಪಾಂತರಗೊಂಡು ಆತನನ್ನು ವಧಿಸುತ್ತಾರೆ. ಹರಿ ಮತ್ತು ಹರರು ಒಂದಾಗಿ ಸಾಮರಸ್ಯ ಸಾರಿದ ಸಂದೇಶ ಈ ರೂಪಕದಲ್ಲಿದೆ.</p>.<p>ರೂಪಕಕ್ಕೆ ರಾಜು ನವಲೆ ತಂತ್ರಜ್ಞ, ಕಲಾವಿದ ರಘುನಾಥ್ ವೈ.ಬಿ. ಚಿತ್ರಕಲೆ ಸೇವೆ ನೀಡಿದ್ದಾರೆ.</p>.<p>ಸಾರ್ವಜನಿಕ ವಿನಾಯಕ ಸಂಘದ ಅಧ್ಯಕ್ಷ ಕೆ.ಜಿ.ಸಿದ್ದೇಶ್, ಪ್ರಧಾನ ಕಾರ್ಯದರ್ಶಿ ಸಂತೋಷ್ ನೋಟದವರ್, ಖಜಾಂಚಿ ಇ.ಮಂಜುನಾಥ್, ಸಹಕಾರ್ಯದರ್ಶಿ ಪ್ರವೀಣ್ ಜಿ.ವಿ., ಕಂಚಿಕೇರಿ ಚಿದಾನಂದ, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಹಾಗೂ ಸಮಿತಿಯ ಪದಾಧಿಕಾರಿಗಳು, ಜನಪ್ರತಿನಿಧಿಗಳು ರೂಪಕವನ್ನು ಸಿದ್ಧಗೊಳಿಸುವಲ್ಲಿ ಶ್ರಮಿಸಿದ್ದಾರೆ.</p>.<p><strong>ನಾಳೆ ವಿಸರ್ಜನೆ:</strong></p>.<p>ವಿನಾಯಕ ಸಂಘದ ಗಣೇಶ ಮೂರ್ತಿ ಸೆ.23ರಂದು ವಿಸರ್ಜನೆಗೊಳ್ಳಲಿದೆ. ಸಂಜೆ 4ಕ್ಕೆ ಮೆರವಣಿಗೆ ಆರಂಭವಾಗಲಿದೆ. ಹಿಂದೂ, ಮುಸ್ಲಿಂ, ಕ್ರೈಸ್ತ ಮುಖಂಡರ ನೇತೃತ್ವದಲ್ಲಿ ವಿಸರ್ಜನಾ ಕಾರ್ಯ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹರಿಹರ</strong>: ನಗರದ ಗಾಂಧಿ ಮೈದಾನದಲ್ಲಿ ಸಾರ್ವಜನಿಕ ವಿನಾಯಕ ಸಂಘ ಆಯೋಜಿಸಿರುವ 62ನೇ ವರ್ಷದ ಗಣಶೋತ್ಸವದಲ್ಲಿ ನಿತ್ಯ ಪ್ರದರ್ಶನ ಮಾಡುತ್ತಿರುವ ಹರಿಹರೇಶ್ವರ ಸ್ವಾಮಿ ಪೌರಾಣಿಕ ಹಿನ್ನೆಲೆ ಆಧರಿಸಿದ ರೂಪಕ ಪ್ರದರ್ಶನ ಜನಮನ ಸೆಳೆಯುತ್ತಿದೆ.</p>.<p>ಸೆಪ್ಟೆಂಬರ್ 7ರಿಂದ ನಿತ್ಯ 10 ಪ್ರದರ್ಶನದಂತೆ ಈವರೆಗೆ 140 ಪ್ರದರ್ಶನಗಳು ನಡೆದಿದ್ದು, ಈವರೆಗೆ 10,000 ಜನರು ವೀಕ್ಷಿಸಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.</p>.<p><strong>ರೂಪಕ ಹಿನ್ನೆಲೆ:</strong></p>.<p>ಪುರಾಣಗಳ ಪ್ರಕಾರ ಹರಿಹರ ಈ ಹಿಂದೆ ‘ಗುಹಾರಣ್ಯ’ ಎಂದು ಪ್ರಸಿದ್ಧಿ ಪಡೆದಿತ್ತು. ಇಲ್ಲಿದ್ದ ಗುಹಾರಾಕ್ಷಸ ಜನರಿಗೆ, ದೇವತೆಗಳಿಗೆ ಕಂಟಕನಾಗಿ ಪರಿಣಮಿಸಿದ್ದ. ಆತ ಯಾವುದೇ ವ್ಯಕ್ತಿ, ದೇವ, ದೇವತೆಯಿಂದ ಸಾವು ಬರದಂತೆ ವರವನ್ನು ಪಡೆದಿದ್ದ.</p>.<p>ಆಗ ಹರಿ ಮತ್ತು ಹರರು ಒಂದು ದೇಹಿಯಾಗಿ ರೂಪಾಂತರಗೊಂಡು ಆತನನ್ನು ವಧಿಸುತ್ತಾರೆ. ಹರಿ ಮತ್ತು ಹರರು ಒಂದಾಗಿ ಸಾಮರಸ್ಯ ಸಾರಿದ ಸಂದೇಶ ಈ ರೂಪಕದಲ್ಲಿದೆ.</p>.<p>ರೂಪಕಕ್ಕೆ ರಾಜು ನವಲೆ ತಂತ್ರಜ್ಞ, ಕಲಾವಿದ ರಘುನಾಥ್ ವೈ.ಬಿ. ಚಿತ್ರಕಲೆ ಸೇವೆ ನೀಡಿದ್ದಾರೆ.</p>.<p>ಸಾರ್ವಜನಿಕ ವಿನಾಯಕ ಸಂಘದ ಅಧ್ಯಕ್ಷ ಕೆ.ಜಿ.ಸಿದ್ದೇಶ್, ಪ್ರಧಾನ ಕಾರ್ಯದರ್ಶಿ ಸಂತೋಷ್ ನೋಟದವರ್, ಖಜಾಂಚಿ ಇ.ಮಂಜುನಾಥ್, ಸಹಕಾರ್ಯದರ್ಶಿ ಪ್ರವೀಣ್ ಜಿ.ವಿ., ಕಂಚಿಕೇರಿ ಚಿದಾನಂದ, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಹಾಗೂ ಸಮಿತಿಯ ಪದಾಧಿಕಾರಿಗಳು, ಜನಪ್ರತಿನಿಧಿಗಳು ರೂಪಕವನ್ನು ಸಿದ್ಧಗೊಳಿಸುವಲ್ಲಿ ಶ್ರಮಿಸಿದ್ದಾರೆ.</p>.<p><strong>ನಾಳೆ ವಿಸರ್ಜನೆ:</strong></p>.<p>ವಿನಾಯಕ ಸಂಘದ ಗಣೇಶ ಮೂರ್ತಿ ಸೆ.23ರಂದು ವಿಸರ್ಜನೆಗೊಳ್ಳಲಿದೆ. ಸಂಜೆ 4ಕ್ಕೆ ಮೆರವಣಿಗೆ ಆರಂಭವಾಗಲಿದೆ. ಹಿಂದೂ, ಮುಸ್ಲಿಂ, ಕ್ರೈಸ್ತ ಮುಖಂಡರ ನೇತೃತ್ವದಲ್ಲಿ ವಿಸರ್ಜನಾ ಕಾರ್ಯ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>