ರಾಣೇಬೆನ್ನೂರು ತಾಲ್ಲೂಕು ಕೋಡಿಯಾಲ್ ಹೊಸಪೇಟೆ ನಿವಾಸಿಯಾದ ಮನೋಜ್ ಅವರು ಕೊಂಡಜ್ಜಿ ಕೆರೆಯ ಬಳಿ ಲೊಕೇಶನ್ ನೋಡಲು ಹೋಗಿದ್ದ ವೇಳೆ ಈ ಮೂವರು ಬೈಕ್ನಲ್ಲಿ ಬಂದು ಹೆದರಿಸಿ ಕುತ್ತಿಗೆಯಲ್ಲಿದ್ದ 25 ಗ್ರಾಂ ತೂಕದ ₹75 ಸಾವಿರ ಬೆಲೆ ಬಾಳುವ ಚಿನ್ನದ ಸರ, ₹20 ಸಾವಿರ ಬೆಲೆಬಾಳುವ ಐಫೋನ್, ₹4 ಸಾವಿರ, ಪ್ಯಾನ್ ಕಾರ್ಡ್, ಎರಡು ಎಟಿಎಂ ಕಾರ್ಡ್ಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಸೋಮವಾರ ವಾಹನ ತಪಾಸಣೆ ವೇಳೆ ಆರೋಪಿಗಳು ಸಿಕ್ಕಿಬಿದ್ದಿದ್ದು, ಸುಲಿಗೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.