‘ಅನುದಾನ ಕೇಳಬೇಕು ಎಂದರೆ ಯಡಿಯೂರಪ್ಪ ಅವರಿಗೆ ಬೆಣ್ಣೆ ಹಚ್ಚಬೇಕು’ ಎಂದು ಸಚಿವ ನಾರಾಯಣ ಗೌಡ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಶ್ರೀರಾಮುಲು, ‘ಕೊರೊನಾ ಕರಿ ನೆರಳಿನಿಂದ ಬೊಕ್ಕಸಕ್ಕೆ ಸೇರಬೇಕಾದ ಹಣ ಸೇರಿಲ್ಲ. ಕೆಲವು ಇಲಾಖೆಗಳ ಅನುದಾನ ತಡೆ ಹಿಡಿಯಲಾಗಿದೆ. ಆರೋಗ್ಯದ ದೃಷ್ಟಿಯಿಂದ ಹಣವನ್ನು ಸೋಂಕಿತರ ತಪಾಸಣೆ, ಬೆಡ್, ಕಿಟ್ಗಳಿಗೆ ವ್ಯಯ ಮಾಡಲಾಗುತ್ತಿದೆ. ಅಭಿವೃದ್ಧಿ ಜೊತೆಗೆ ಜನರ ಪ್ರಾಣವೂ ಮುಖ್ಯ. ಹಾಗಂದ ಮಾತ್ರಕ್ಕೆ ಬೊಕ್ಕಸ ಖಾಲಿಯಾಗಿದೆ ಎಂದರ್ಥವಲ್ಲ. ಬೊಕ್ಕಸಕ್ಕೆ ಬರಬೇಕಾದ ಹಣ ಬಂದಿಲ್ಲ ಅಷ್ಟೇ’ ಎಂದು ಹೇಳಿದರು.