ಈ ಸಂಬಂಧ ಶಿಕ್ಷಣ ಇಲಾಖೆ, ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಗೆ ಮನವಿ ನೀಡಲಾಗಿದೆ. ಹೊಸ ಕೊಠಡಿಗಳು ಆಗುವವರಗೆ ಶಿಥಿಲಗೊಂಡಿರುವ ಕೊಠಡಿಗಳ ಚಾವಣಿ ರಿಪೇರಿ ಮಾಡಿಸಿದರೆ ತರಗತಿಗಳನ್ನು ನಡೆಸಲು ನುಕೂಲವಾಗುತ್ತದೆ. ಒಬ್ಬ ಅಥಿತಿ ಶಿಕ್ಷಕರು ಬೇಕಾಗಿದ್ದಾರೆ. ಬಿಇಒ ಅವರು 2 ಕೊಠಡಿಗಳು ಮುಂಜೂರಾಗಿವೆ ಎಂದು ತಿಳಿಸಿದ್ದಾರೆ. ಆದರೆ, ಯಾವುದೇ ಆದೇಶ ಬಂದಿಲ್ಲ ಎಂದು ಅವರು ಮಾಹಿತಿ ನೀಡಿದರು.